-

ಕುರ್ಚಿಗಳನ್ನು ತೆಗೆಯಲು ನಿಮಗೆ ಬುಲ್ಡೋಝರ್‌ ಅಗತ್ಯವಿದೆಯೇ? : ಜಹಾಂಗೀರ್ಪುರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ತರಾಟೆ

-

ಹೊಸದಿಲ್ಲಿ,ಎ.21: ಜಹಾಂಗೀರ್ಪುರಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತನ್ನ ನಿರ್ದೇಶನವನ್ನು ಗುರುವಾರ ಮುಂದಿನ ಆದೇಶದವರೆಗೆ ವಿಸ್ತರಿಸಿದ ಸರ್ವೋಚ್ಚ ನ್ಯಾಯಾಲಯವು, ‘ಅಂಗಡಿಗಳು,ಕುರ್ಚಿಗಳು, ಟೇಬಲ್ ಗಳು ಮತ್ತು ಪೆಟ್ಟಿಗೆಗಳನ್ನು ತೆರವುಗೊಳಿಸಲು ನಿಮಗೆ ಬುಲ್ಡೋಝರ್‌ ಗಳ ಅಗತ್ಯವಿದೆಯೇ ’ ಎಂದು ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್ಡಿಎಂಸಿ)ಯನ್ನು ಪ್ರಶ್ನಿಸಿದೆ. 

ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳು ಮತ್ತು ಫುಟ್ಪಾತ್ ಗಳಲ್ಲಿ ಹಾಕಲಾಗಿರುವ ಅಂಗಡಿಗಳು, ಬೆಂಚುಗಳು, ಪೆಟ್ಟಿಗೆಗಳು, ಏಣಿಗಳು ಇತ್ಯಾದಿಗಳನ್ನು ತೆರವುಗೊಳಿಸಲು ಕಾನೂನಿನ ಅನುಮತಿಯಿದೆ ಎಂದು ಎನ್ಡಿಎಂಸಿ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ವಿವರಿಸಿದ ಬಳಿಕ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಈ ಪ್ರಶ್ನೆಯನ್ನು ಮುಂದಿಟ್ಟಿತು.

ಅಂದರೆ ನಿನ್ನೆಯ ತೆರವು ಕಾರ್ಯಾಚರಣೆ ಬೆಂಚುಗಳು, ಪೆಟ್ಟಿಗೆಗಳು ಮತ್ತು ಕುರ್ಚಿಗಳಿಗೆ ಸೀಮಿತವಾಗಿತ್ತು ಅಲ್ಲವೇ ಎಂದು ನ್ಯಾ.ರಾವ್ ಮೆಹ್ತಾರನ್ನು ಪ್ರಶ್ನಿಸಿದರು.

‘ಸಾರ್ವಜನಿಕ ರಸ್ತೆಗಳಲ್ಲಿ,ಫುಟ್ಪಾತ್ ಗಳಲ್ಲಿ ಇರುವ ಎಲ್ಲವೂ... ಇದು ನನಗೆ ನೀಡಿರುವ ಸೂಚನೆಯಾಗಿದೆ ’ ಎಂದು ಮೆಹ್ತಾ ಉತ್ತರಿಸಿದರು.
ಅಂಗಡಿಗಳು, ಬೆಂಚುಗಳು, ಪೆಟ್ಟಿಗೆಗಳು, ಏಣಿಗಳು ಮತ್ತು ಕುರ್ಚಿಗಳಿಗೆ ನಿಮಗೆ ಬುಲ್ಡೋಝರ್‌ ಗಳ ಅಗತ್ಯವಿದೆಯೇ ಎಂದು ನ್ಯಾ. ಗವಾಯಿ ಪ್ರಶ್ನಿಸಿದಾಗ, ಕಟ್ಟಡಗಳಿಗೆ ಬುಲ್ಡೋಜರ್ ಅಗತ್ಯವಾಗುತ್ತದೆ ಎಂದು ಮೆಹ್ತಾ ಒಪ್ಪಿಕೊಂಡರು.

ಬುಧವಾರದ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತಗೊಂಡವರಿಗೆ, ವಿಶೇಷವಾಗಿ ಯಾವುದೇ ಪೂರ್ವಭಾವಿ ನೋಟಿಸ್ ನೀಡದೇ ತಮ್ಮ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆಯೇ ಎಂಬ ಬಗ್ಗೆ ಅಫಿಡವಿಟ್ ಗಳನ್ನು ಸಲ್ಲಿಸಲು ನ್ಯಾಯಾಲಯವು ಅನುಮತಿ ನೀಡಿತು. ತನ್ನ ಉತ್ತರವನ್ನು ಸಲ್ಲಿಸುವುದಾಗಿ ಎನ್ಡಿಎಂಸಿ ತಿಳಿಸಿದ ಬಳಿಕ ಎರಡು ವಾರಗಳ ಬಳಿಕ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯವು ತಿಳಿಸಿತು. 

ತಡೆಯಾಜ್ಞೆಯನ್ನು ಮುಂದುವರಿಸುವ ಬಗ್ಗೆ ಮೆಹ್ತಾ ಸೌಮ್ಯವಾಗಿ ಆಕ್ಷೇಪಿಸಿದಾಗ ಪ್ರತಿಕ್ರಿಯಿಸಿದ ನ್ಯಾ.ರಾವ್, ಕಟ್ಟಡಗಳನ್ನು ಧ್ವಂಸಗೊಳಿಸಲು ನೀವು ಬಯಸಿದ್ದೀರಾ? ಅದರ ಬಳಿಕ ಅಲ್ಲಿ ಏನು ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತನ್ನ ಆದೇಶದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದರ ಬಗ್ಗೆ ಕುರುಡುತನ ಪ್ರದರ್ಶಿಸುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ‘ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮೇಯರ್ ಗೆ ತಿಳಿಸಿದ ಬಳಿಕವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆ ವಿಷಯವನ್ನು ನಾವು ನಂತರ ಕೈಗೆತ್ತಿಕೊಳ್ಳುತ್ತೇವೆ ’ಎಂದು ಮೆಹ್ತಾರಿಗೆ ತಿಳಿಸಿತು.
ಇದಕ್ಕೂ ಮುನ್ನ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಪರ ಹಿರಿಯ ನ್ಯಾಯವಾದಿ ಪಿ.ವಿ.ಸುರೇಂದ್ರನಾಥ ಮತ್ತು ವಕೀಲ ಸುಭಾಷಚಂದ್ರನ್ ಅವರು, ಸರ್ವೋಚ್ಚ ನ್ಯಾಯಾಲಯವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದ ಬಳಿಕವೂ ಧ್ವಂಸ ಕಾರ್ಯಾಚರಣೆ ಮುಂದುವರಿದಿತ್ತು ಎಂದು ತಿಳಿಸಿದರು.
 ಸರ್ವೋಚ್ಚ ನ್ಯಾಯಾಲಯವು ಬುಧವಾರ ಬೆಳಿಗ್ಗೆ 10:45ಕ್ಕೆ ಆದೇಶವನ್ನು ಹೊರಡಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದು ಎಂದು ಖುದ್ದು ಮೇಯರ್ ಅವರೇ ಬೆಳಿಗ್ಗೆ 11 ಗಂಟೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಅವರು ಅಪರಾಹ್ನ 12:45ಕ್ಕೆ ಆದೇಶವನ್ನು ಪಾಲಿಸಿದ್ದರು ಎಂದು ಹಿರಿಯ ನ್ಯಾಯವಾದಿ ದುಷ್ಯಂತ ದವೆ ಅವರು ಪೀಠದ ಗಮನಕ್ಕೆ ತಂದರು.
 ಜಹಾಂಗೀರ್ಪುರ ನಿವಾಸಿ ಗಣೇಶ ಗುಪ್ತಾ ಪರ ಹಿರಿಯ ವಕೀಲ ಸಂಜಯ ಹೆಗ್ಡೆ ಅವರು, ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ತನ್ನ ಕಕ್ಷಿದಾರರ ಜ್ಯೂಸ್ ಅಂಗಡಿಯನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ಇದಕ್ಕಾಗಿ ಪರಿಹಾರವನ್ನು ಕೋರಿದರು.
‘ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಆಸ್ತಿಗಳನ್ನು ಧ್ವಂಸಗೊಳಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಬದುಕುವ ಹಕ್ಕು ಜೀವನೋಪಾಯ ಮತ್ತು ವಸತಿಯ ಹಕ್ಕನ್ನೂ ಒಳಗೊಂಡಿದೆ. ಇವರೆಲ್ಲ ಬಡವರಾಗಿದ್ದಾರೆ. ದಿಲ್ಲಿಯಲ್ಲಿನ ಅತಿಕ್ರಮಣಗಳ ಬಗ್ಗೆ ನಿಮಗೆ ಕಾಳಜಿಯಿದ್ದರೆ ಸೈನಿಕ್ ಫಾರ್ಮ್ಸ್ ಮತ್ತು ಗಾಲ್ಫ್ ಲಿಂಕ್ಸ್ ಗೆ ಬನ್ನಿ. ಪ್ರತಿ ಎರಡನೇ ಕಟ್ಟಡವು ಅನಧಿಕೃತವಾಗಿರುವ ದಕ್ಷಿಣ ದಿಲ್ಲಿಗೆ ಬನ್ನಿ ಮತ್ತು ಅವುಗಳನ್ನು ನೆಲಸಮಗೊಳಿಸಿ. ದಿಲ್ಲಿಯಲ್ಲಿ 731 ಅನಧಿಕೃತ ಕಾಲನಿಗಳಿವೆ, ಹೀಗಿರುವಾಗ ಈ ನಿರ್ದಿಷ್ಟ ಪ್ರದೇಶವನ್ನೇಕೆ ಗುರಿಯಾಗಿಸಿಕೊಳ್ಳಲಾಗಿದೆ? ಬುಲ್ಡೋಜರ್ ನಮ್ಮ ಸರಕಾರಿ ನೀತಿಯ ಭಾಗವಾಗಿದೆಯೇ’ ಎಂದು ದವೆ ವಾದಿಸಿದರು.
ಬುಲ್ಡೋಜರ್ ಭೀತಿಯನ್ನು ಹುಟ್ಟಿಸಲು ಇದೆಯೇ ಅಥವಾ ಕಾನೂನಿನ ಆಡಳಿತವನ್ನು ಬದಿಗೊತ್ತುವ ವಿಧಾನವೇ? ಮುಸ್ಲಿಮರ ಆಸ್ತಿಗಳನ್ನು ಗುರುತಿಸಿ ನೆಲಸಮಗೊಳಿಸಲಾಗುತ್ತಿದೆ. ಯಾರೋ ಅಪರಾಧದ ಆರೋಪಿಯಾಗಿದ್ದರೆ ಅವರ ಮನೆಯನ್ನು ಧ್ವಂಸಗೊಳಿಸಲಾಗುತ್ತಿದೆ. ಇದು ಕಾನೂನಿಗೆ ಅತಿರಿಕ್ತವಾದ ದಂಡನಾ ಕ್ರಮದಂತಿದೆ ಎಂದು ಹಿರಿಯ ವಕೀಲ ಕಪಿಲ ಸಿಬಲ್ ಹೇಳಿದರು.
ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎನ್ನುವುದು ತಪ್ಪು ಎಂದು ಸಮರ್ಥಿಸಿಕೊಂಡ ಮೆಹ್ತಾ, ಇತ್ತೀಚಿಗೆ ಮಧ್ಯಪ್ರದೇಶದ ಖರಗೋನ್ ನಲ್ಲಿ ನಡೆಸಲಾದ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರ ಪೈಕಿ 88 ಜನರು ಹಿಂದುಗಳಾಗಿದ್ದು,26 ಜನರು ಮುಸ್ಲಿಮರಾಗಿದ್ದಾರೆ ಎಂದು ಹೇಳಿದರು.
ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದವರ ಬದಲು ಜಮೀಯತ್ ಉಲಮಾ-ಇ-ಹಿಂದ ನಂತಹ ಸಂಘಟನೆಗಳು ಏಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸುತ್ತಿವೆ ಎಂದು ಅವರು ಪ್ರಶ್ನಿಸಿದರು.
ಇಂತಹ ಅರ್ಜಿಗಳನ್ನು ಅಂಗೀಕರಿಸುವಾಗ ನ್ಯಾಯಾಲಯವು ಎಚ್ಚರಿಕೆ ವಹಿಸಬೇಕು ಎಂದು ಮೆಹ್ತಾ ಹೇಳಿದಾಗ, ‘ಭರವಸೆಯಿಡಿ, ಎಲ್ಲಿಗೆ ನಿಲ್ಲಿಸಬೇಕು ಎನ್ನುವುದು ನಮಗೆ ಗೊತ್ತಿದೆ ’ ಎಂದು ನ್ಯಾ.ರಾವ್ ಪ್ರತಿಕ್ರಿಯಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top