ಪ್ರವಾದಿ ನಿಂದನೆ ಪ್ರಕರಣದ ಕುರಿತು ಖಂಡನೆ ವ್ಯಕ್ತಪಡಿಸಿದ ಕಿಂಗ್ಡಂ ಆಫ್ ಜೋರ್ಡಾನ್, ಲಿಬಿಯಾ
ಹೊಸದಿಲ್ಲಿ: ಟಿವಿ ಚರ್ಚೆಯ ವೇಳೆ ಹಾಗೂ ಟ್ವಿಟರ್ ನಲ್ಲಿ ಇಬ್ಬರು ಬಿಜೆಪಿ ಮುಖಂಡರು ಪ್ರವಾದಿ ಕುರಿತಾಗಿ ನಿಂದನೆಯ ಮಾತುಗಳನ್ನಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಕತರ್, ಕುವೈಟ್ ಇರಾನ್ ಹಾಗೂ ಇಂಡೋನೇಶ್ಯಾ ರಾಷ್ಟ್ರಗಳು ಭಾರತದ ರಾಯಭಾರಿಗೆ ಸಮನ್ಸ್ ನೀಡಿತ್ತು. ಸೌದಿ ಅರೇಬಿಯಾ, ಯುಎಇ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್ಡಂ ಆಫ್ ಜೋರ್ಡಾನ್ ಹಾಗೂ ಲಿಬಿಯಾ ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ತಮ್ಮ ಪ್ರತ್ಯೇಕ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತ ನಿಲುವನ್ನು ಪ್ರಕಟಿಸಿದ ಕಿಂಗ್ಡಮ್ ಆಫ್ ಜೋರ್ಡಾನ್ ಹಾಗೂ ಲಿಬಿಯಾ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ, " ಭಾರತೀಯ ಜನತಾ ಪಕ್ಷದ ವಕ್ತಾರೆ ಪ್ರವಾದಿ ಮುಹಮ್ಮದ್ ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಬಲವಾಗಿ ಖಂಡಿಸುತ್ತದೆ" ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಇಬ್ಬರು ವಕ್ತಾರರನ್ನು ಬಿಜೆಪಿ ವಜಾಗೊಳಿಸಿದೆ.
دانت #وزارة_الخارجية_وشؤون_المغتربين بأشد العبارات التصريحات المسيئة للرسول محمد صلى الله عليه وسلم، والصادرة عن المتحدثة باسم حزب بهاراتيا جاناتا الهندي. pic.twitter.com/aHnmTCahZz
— وزارة الخارجية وشؤون المغتربين الأردنية (@ForeignMinistry) June 6, 2022
#بيان_صحفى | بشأن ماقام به المسؤل الإعلامي بحزب الحاكم في الهند من تصريحات مسيئة للرسول محمد عليه الصلاة والسلام. pic.twitter.com/T01FXc4q5a
— وزارة الخارجية والتعاون الدولي - دولة ليبيا (@MFA_Libya) June 6, 2022