ಕೇರಳ: ಚಿನ್ನ ಅಕ್ರಮ ಸಾಗಾಟ ಪ್ರಕರಣ; ಸ್ವಪ್ನಾ ಸುರೇಶ್ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್
ತಿರುವನಂತಪುರ, ಜೂ. 10: ಸರಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಚಿನ್ನ ಅಕ್ರಮ ಸಾಗಾಟ ಪ್ರಕರಣದ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಇದೇ ಪ್ರಕರಣದ ತನಿಖೆ ಸಂದರ್ಭ ಹೆಸರು ಕೇಳಿಬಂದ ಸರಿತಾ ಪಿ.ಎಸ್. ಅವರು ಸಲ್ಲಿಸಿದ ಇದೇ ರೀತಿಯ ಮನವಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ.
ಸ್ವಪ್ನಾ ಸುರೇಶ್ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ)ಹಾಗೂ 120 ಬಿ (ಕ್ರಿಮಿನಲ್ ಸಂಚು) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ಈ ಎರಡು ಸೆಕ್ಷನ್ಗಳು ಜಾಮೀನು ಪಡೆಯಲು ಸಾಧ್ಯವಾಗುವ ಅಪರಾಧಗಳು ಎಂದು ನ್ಯಾಯಮೂರ್ತಿ ವಿಜು ಅಬ್ರಹಾಂ ತಿಳಿಸಿದ್ದಾರೆ.
ಸರಿತಾ ಪ್ರಕರಣದಲ್ಲಿ ಅವರನ್ನು ಆರೋಪಿ ವ್ಯಕ್ತಿ ಎಂದು ಕೂಡ ಹೆಸರಿಸಿಲ್ಲ. ಆದುದರಿಂದ ಅವರ ನಿರೀಕ್ಷಣಾ ಜಾಮೀನಿಗೆ ಆಧಾರ ಇಲ್ಲ ಎಂದು ಅವರು ಹೇಳಿದ್ದಾರೆ.
2020 ಜುಲೈಯಲ್ಲಿ ರಾಜತಾತ್ರಿಕ ಬ್ಯಾಗೇಜ್ನಿಂದ 16 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಈ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಓರ್ವ ಆರೋಪಿಯಾಗಿದ್ದಾರೆ.