ಮುಸ್ಲಿಮರ ವಿರುದ್ಧ ದ್ವೇಷಪೂರಿತ ಪೋಸ್ಟ್ ಮಾಡುತ್ತಿದ್ದ ಕೇರಳದ ಮಾಜಿ ಡಿಜಿಪಿಯ ಟ್ವಿಟರ್ ಖಾತೆ ಅಮಾನತು
-

Photo: Deccan Chronicle
ಹೊಸದಿಲ್ಲಿ: ಮುಸ್ಲಿಮರ ವಿರುದ್ಧ ನಿರಂತರ ಧ್ವೇಷದ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳದ ಮಾಜಿ ಪೊಲೀಸ್ ಮಹಾ ನಿರ್ದೇಶಕ ನಿರ್ಮಲ್ ಚಂದ್ರ ಅಸ್ತಾನ (ಐಪಿಎಸ್) ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
@NCAsthana ಹೆಸರಿನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸದ್ಯ ಟ್ವಿಟರಿನಿಂದ ತೆಗೆದುಹಾಕಲಾಗಿದೆ.
ಇತ್ತೀಚೆಗೆ, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗಳು ಕಸ್ಟಡಿಯಲ್ಲಿದ್ದ ಗಲಭೆ ಆರೋಪಿಗಳನ್ನು ಲಾಠಿಗಳಿಂದ ಥಳಿಸುವ ವೀಡಿಯೊವನ್ನು ಹಂಚಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಇದನ್ನು "ಅತ್ಯಂತ ಸುಂದರ ದೃಶ್ಯ" ಎಂದು ಕರೆದಿದ್ದರು.
ಕೇರಳ ಕೇಡರ್ನ 1986-ಬ್ಯಾಚ್ನ ಐಪಿಎಸ್ ಅಧಿಕಾರಿ ಅಸ್ಥಾನಾ ಅವರು ವೀಡಿಯೊದಲ್ಲಿ ಪೊಲೀಸ್ ಸಿಬ್ಬಂದಿಯ ಕ್ರಮಗಳನ್ನು ಮತ್ತು ಬುಲ್ಡೋಝರ್ ಮೂಲಕ ನಡೆಸಿದ ಕೆಡಹುವಿಕೆಗಳನ್ನು ಶ್ಲಾಘಿಸಿ ಎರಡು ಡಝನ್ಗಿಂತಲೂ ಹೆಚ್ಚು ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದರು.
ನಿವೃತ್ತ ಪೊಲೀಸ್ ಅಧಿಕಾರಿಯ ʼಇಸ್ಲಾಮೋಫೋಬಿಕ್ʼ ಟ್ವೀಟ್ಗಳು ಹಾಗೂ ಮುಸ್ಲಿಮ್ ಆರೋಪಿಗಳ ವಿರುದ್ಧ ಸರ್ಕಾರಗಳು ತೆಗೆದುಕೊಳ್ಳುತ್ತಿದ್ದ ಅಸಾಂವಿಧಾನಿಕ ಕ್ರಮಗಳ ಸಮರ್ಥನೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳಿಗೆ ಕಾರಣವಾಗಿದ್ದವು.
ಅಲ್ಲದೆ, ಉತ್ತರ ಪ್ರದೇಶದ ಸಿಎಂ ಆದಿತ್ಯನಾಥರನ್ನು ಆಗಾಗ ಶ್ಲಾಘಿಸುತ್ತಿದ್ದ ಅಸ್ಥಾನ, ಪತ್ರಕರ್ತರನ್ನು, ʼಈಡಿಯಟ್ʼ ʼಕತ್ತೆಗಳುʼ ಎಂಬೆಲ್ಲಾ ನಿಂದನಾತ್ಮಕ ಪದ ಬಳಸಿ ನಿಂದಿಸುತ್ತಿದ್ದರು ಎಂದು theprint ವರದಿ ಮಾಡಿದೆ.
ಡಿಸೆಂಬರ್ 2019 ರಲ್ಲಿ ನಿವೃತ್ತರಾದ ಅಸ್ಥಾನಾ ಅವರು ಈ ಹಿಂದೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಗಳಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇರಳದಲ್ಲಿ ಅವರು ವಿಜಿಲೆನ್ಸ್ ನಿರ್ದೇಶಕರಾಗಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಟ್ವಿಟರ್ ಬಯೋದಲ್ಲಿ, ಅವರು '76 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ಮತ್ತು 49 ಪುಸ್ತಕಗಳನ್ನು' ಬರೆದಿರುವ 'ಪರಮಾಣು ಭೌತಶಾಸ್ತ್ರಜ್ಞ' ಎಂದು ವಿವರಿಸಿದ್ದಾರೆ. ಅಸ್ಥಾನಾ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಅವರ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳನ್ನು 'ಡಫರ್ಸ್' ಎಂದು ಕರೆಯುವುದು ಸೇರಿದಂತೆ ಪೊಲೀಸ್ ಪಡೆಗಳ ಕುರಿತು ಅವರ ಕಾಮೆಂಟ್ಗಳು ಹೆಚ್ಚು ಟೀಕೆಗೊಳಗಾಗಿದ್ದವು.
After our exclusive report on @NcAsthana and his hate speech in the social media, his account has been suspended by @Twitter.
— DFRAC (@DFRAC_org) June 21, 2022
To read the full report click here: https://t.co/7n0PpzCmRI #DfracExclusive #dfrac #HateSpeech #AccountsSuspended #Hate pic.twitter.com/7LjmMg6KrA
He thought he had immunity. He was wrong.
— Team Saath Official (@TeamSaath) June 20, 2022
Account Suspended @ncasthana
59.3k Followers. Verified Account.
Excellent Work Team!#TeamSAATH https://t.co/vdQMDApyaT pic.twitter.com/WuvaRbrUGG
Twitter account of one NC Asthana who called the video of police brutality as 'beautiful' has been suspended. This DM by him which shows what kind of insensitive arrogant he was. So glad he has been shown his real place by this account suspension. https://t.co/z99PHd0ww4
— Sanjukta Basu (@sanjukta) June 21, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.