ದಿಲ್ಲಿಯಲ್ಲಿ ಸಿಕ್ಕಿಮ್ ಪೊಲೀಸ್ ಸಿಬ್ಬಂದಿಯಿಂದ ಮೂವರು ಸಹೋದ್ಯೋಗಿಗಳ ಗುಂಡಿಟ್ಟು ಹತ್ಯೆ
ಹೊಸದಿಲ್ಲಿ,ಜು.18: ದಿಲ್ಲಿಯ ಹೈದರ್ಪುರ ಪ್ರದೇಶದ ಜಲ ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಕ್ಕಿಮ್ ಪೊಲೀಸ್ ನ ಸಿಬ್ಬಂದಿಯೋರ್ವ ಸೋಮವಾರ ತನ್ನ ಮೂವರ ಸಹೋದ್ಯೋಗಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಹತ್ಯೆಗಳನ್ನು ನಡೆಸಿದ ಬೆನ್ನಲ್ಲೇ ಆರೋಪಿ ಪ್ರಬೀಣ ರಾಯ್ (32) ಸಮಯಪುರ ಬದ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಹಾಗೂ ಮೃತ ಮೂವರು ಸಿಬ್ಬಂದಿಗಳು ಇಂಡಿಯನ್ ರಿಸರ್ವ್ ಬಟಾಲಿಯನ್ನ ಭಾಗವಾಗಿ ಜಲ ಸ್ಥಾವರದ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದರು. ನಾಲ್ವರೂ ಸಿಕ್ಕಿಮ್ ಪೊಲೀಸ್ ಇಲಾಖೆಗೆ ಸೇರಿದವರಾಗಿದ್ದಾರೆ.
ಇಬ್ಬರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಸಿಬ್ಬಂದಿಯನ್ನು ಬಿಎಸ್ಎ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
Next Story