ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022: ಅತ್ಯುತ್ತಮ ನಟ ಪುರಸ್ಕಾರ ಹಂಚಿಕೊಂಡ ಸೂರ್ಯ, ಅಜಯ್ ದೇವಗನ್
-

ಹೊಸದಿಲ್ಲಿ, ಜು.22: 2020ರಲ್ಲಿ ಬಿಡುಗಡೆಯಾದ ಚಿತ್ರಗಳಿಗಾಗಿನ 68ನೇ ರಾಷ್ಟ್ರೀಯ ಪುರಸ್ಕಾರಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ತಮಿಳು ಸಿನೆಮಾ ಸೂರಾರೈ ಪೊಟ್ರು ಶ್ರೇಷ್ಠ ಚಿತ್ರ ಪ್ರಶಸ್ತಿ ಸೇರಿದಂತೆ ಐದು ಪುರಸ್ಕಾರಗಳನ್ನು ಗೆದ್ದುಕೊಂಡಿದೆ. ಈ ಬಾರಿ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ವಿಶೇಷವಾಗಿದೆ.
ಅತ್ಯುತ್ತಮ ಅಭಿನಯಕ್ಕಾಗಿ ಸೂರಾರೈ ಪೊಟ್ರು ಚಿತ್ರದ ನಾಯಕ ನಟ ಸೂರ್ಯ ಹಾಗೂ ತಾನಾಜಿ - ದಿ ಅನ್ಸಂಗ್ ವಾರಿಯರ್ ಹಿಂದಿ ಚಿತ್ರದ ನಾಯಕ ನಟ ದೇವಗನ್ ಶ್ರೇಷ್ಠ ನಟ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ. ಶ್ರೇಷ್ಠ ನಟಿ ಪ್ರಶಸ್ತಿ ಸೂರಾರೈ ಪೊಟ್ರು ಚಿತ್ರದ ನಾಯಕಿ ಅಪರ್ಣಾ ಬಾಲಮುರಳಿಗೆ ಒಲಿದಿದೆ. ಅಲ್ಲದೆ ಸಮಗ್ರ ಮನರಂಜನೆಯ ಅತ್ಯುತ್ತಮ ಜನಪ್ರಿಯ ಸಿನೆಮಾ ಪ್ರಶಸ್ತಿ ಕೂಡಾ ಸೂರಾರೈಪೊಟ್ರು ಪಾಲಾಗಿದೆ.
ಕನ್ನಡದ ತಲೆದಂಡ,ಡೊಳ್ಳು ನಾದದ ನವನೀತ ಚಿತ್ರಗಳಿಗೆ ಪ್ರಶಸ್ತಿಯ ಗರಿ
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಕನ್ನಡದ ‘ತಲೆದಂಡ’, ‘ಡೊಳ್ಳು’, ‘ನಾದದ ನವನೀತ’ ಹಾಗೂ ತುಳುವಿನ ‘ಜೀಟಿಗೆ’ ಚಿತ್ರಗಳು ಪಾತ್ರವಾಗಿವೆ.
ನಟ ದಿ. ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ (ನಿರ್ದೇಶನ: ಪ್ರವೀಣ್ ಕೃಪಾಕರ್) ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು ರೂ. 1.50 ಲಕ್ಷ ನಗದು ಒಳಗೊಂಡಿದೆ.
ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರವೂ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಅಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ(ಆಡಿಯೋಗ್ರಫಿ) ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ರೂ. 50 ಸಾವಿರ ನಗದು ಒಳಗೊಂಡಿದೆ.
ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಚಿತ್ರಗಳ ವಿಭಾಗದಲ್ಲಿ ತುಳು ಚಿತ್ರ ‘ಜೀಟಿಗೆ’ಗೆ (ನಿರ್ದೇಶನ: ಸಂತೋಷ್ ಮಾಡ) ರಜತ ಕಮಲ ಲಭಿಸಿದೆ.
ಅತ್ಯುತ್ತಮ ಕಲೆ, ಸಂಸ್ಕತಿ ಆಧಾರಿತ ಚಿತ್ರ ವಿಭಾಗದ ಅಡಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ? ಡಾ.ಪಂಡಿತ್ ವೆಂಕಟೇಶ್ಕುಮಾರ್’ ರಜತ ಕಮಲ ಪ್ರಶಸ್ತಿ ಪಡೆದಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು
ಶ್ರೇಷ್ಠ ಚಿತ್ರ: ಸೂರಾರೈ ಪೋಟ್ರು
ಸಮಗ್ರ ಮನರಂಜನೆಯ ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ: ದಿ ಅನ್ಸಂಗ್ ವಾರಿಯರ್
ಶ್ರೇಷ್ಟ ನಟ: ಸೂರ್ಯ -ಚಿತ್ರ: ಸೂರಾರೈ ಪೊಟ್ರು(ತಮಿಳು) ಹಾಗೂ ಅಜಯ್ದೇವಗನ್: ತಾನಾಜಿ: ದಿ ಅನ್ಸಂಗ್ ವಾರಿಯರ್ (ಹಿಂದಿ)
ಶ್ರೇಷ್ಠ ನಟ: ಅಪರ್ಣಾ ಬಾಲಮುರಳಿ (ಸೂರಾರೈ ಪೊಟ್ರು, ತಮಿಳು)
ಅತ್ಯುತ್ತಮ ನಿರ್ದೇಶಕ: ದಿವಂಗತ ಸಚಿದಾನಂದನ್ ಕೆ.ಆರ್.- ಚಿತ್ರ: ಅಯ್ಯಪ್ಪನುಂ ಕೋಶಿಯುಂ (ಮಲಯಾಳಂ)
ಅತ್ಯುತ್ತಮ ಮೂಲ ಚಿತ್ರಕಥೆ: ಸೂರಾರೈ ಪೊಟ್ರು (ತಮಿಳು)
ಶ್ರೇಷ್ಠ ಸಂಭಾಷಣೆ: ಮಂಡೇಲಾ (ತಮಿಳು)
ಶ್ರೇಷ್ಠ ಛಾಯಾಗ್ರಹಕ: ಅವಿಜಾತ್ರಿಕ್ (ಬಂಗಾಳಿ)
ಅತ್ಯುತ್ತಮ ಪೋಷಕ ನಟ: ಲಕ್ಷ್ಮಿ ಪ್ರಿಯಾ ಚಂದ್ರಮೌಳಿ-ಶಿವರಂಜನಿಯುಂ ಇನ್ನುಂ ಸಿಲ ಪೆಣ್ಮುಗಳುಂ (ತಮಿಳು)
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್- ಅಯ್ಯುಪ್ಪನುಂ ಕೋಶಿಯುಂ (ಮಲಯಾಳಂ)
ಸಾಮಾಜಿಕ ಕಾಳಜಿಯ ಚಿತ್ರ: ಫ್ಯುನೆರಲ್ (ಮರಾಠಿ)
ಮಹಿಳಾ ಹಿನ್ನೆಲೆ ಗಾಯಕಿ: ನಂಚಮ್ಮ - ಅಯ್ಯಪ್ಪುನುಂ ಕೋಶಿಯುಂ (ಮಲಯಾಳಂ)
ಹಿನ್ನೆಲೆಗಾಯಕ: ರಾಹುಲ್ದೇಶಪಾಂಡೆ- ಮಿ ವಸಂತರಾವ್ (ಮರಾಠಿ)
ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕಾಗಿನ ಇಂದಿರಾಗಾಂಧಿ ಪುರಸ್ಕಾರ: ಮಡೊನ್ನೆ ಅಶ್ವಿನ್ ಫಾರ್ ಮಂಡೇಲಾ (ತಮಿಳು)
ಶ್ರೇಷ್ಠ ಮಕ್ಕಳ ಚಿತ್ರ: ಸುಮಿ (ಮರಾಠಿ)
ಪರಿಸರ ಸಂರಕ್ಷಣೆ: ತಲೆದಂಡ (ಕನ್ನಡ)
ಶ್ರೇಷ್ಠ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್
ಶ್ರೇಷ್ಠ ಬಂಗಾಳಿ ಚಿತ್ರ:ಅವಿಜಾತ್ರಿಕ್
ಶ್ರೇಷ್ಠ ತೆಲುಗು ಚಿತ್ರ: ಕಲರ್ ಫೋಟೋ
ಶ್ರೇಷ್ಠ ತಮಿಳು ಚಿತ್ರ: ಶಿವರಂಜನಿಯುಂ ಇನ್ನು ಸಿ ಪೆನ್ನುಂಗಳುಂ
ಶ್ರೇಷ್ಠ ಅಸ್ಸಾಮಿ ಚಿತ್ರ: ಬ್ರಿಜ್
ಶ್ರೇಷ್ಠ ಹರ್ಯಾಣವಿ ಚಿತ್ರ: ದಾದಾ ಲಕ್ಷ್ಮಿ
ಶ್ರೇಷ್ಠ ಅಸ್ಸಾಮಿ ಚಿತ್ರ: ಬ್ರಿಜ್
ಶ್ರೇಷ್ಠ ಮಲಯಾಳಂ ಚಿತ್ರ: ತಿಂಗಳಾಯ್ಚ ನಿಶ್ಚಯಂ
ಶ್ರೇಷ್ಠ ದಿಮಾಸಾ ಚಿತ್ರ: ಸೆಮ್ಖೋರ್
ಶ್ರೇಷ್ಠ ತುಳು ಚಿತ್ರ: ಜೀಟಿಗೆ
ಶ್ರೇಷ್ಠ ಮರಾಠಿ ಚಿತ್ರ: ಗೋಷ್ಟ ಏಕಾ ಪೈದಾನಿಚಿ
ಶ್ರೇಷ್ಠ ಕನ್ನಡ ಚಿತ್ರ: ಡೊಳ್ಳು
ಶ್ರೇಷ್ಠ ಸಾಹಸ ನಿರ್ದೇಶನ ಪುರಸ್ಕಾರ: ಎ.ಕೆ. ,ಅಯ್ಯಪ್ಪನುಂ ಕೋಶಿಯುಂ (ಮಲಯಾಳಂ)
ಅತ್ಯುತ್ತಮ ಕೊರಿಯೋಗ್ರಫಿ: ಸಂಧ್ಯಾ ರಾಜು - ನಾಟ್ಯಂ (ತೆಲುಗು)
ಅತ್ಯುತ್ತಮ ಗೀತರಚನೆ: ಮನೋಜ್ ಮುಂತಾಸಿರ್ -ಸೈನಾ (ಹಿಂದಿ)
ಅತ್ಯುತ್ತಮ ಸಂಗೀತ ನಿರ್ದೇಶನ: ತಮಮ್ ಎಸ್.- ಅಲಾ ವೈಕುಂಠಪುರ್ರಂಮುಲೋ (ತೆಲುಗು)
ಅತ್ಯುತ್ತಮ ಹಿನ್ನೆಲೆ ಸಂಗೀತ: ಜಿ.ವಿ. ಪ್ರಕಾಶ್ -ಸೂರಾರೈ ಪೊಟ್ರು (ತಮಿಳು)
ಅತ್ಯುತ್ತಮ ವಸ್ತ್ರವಿನ್ಯಾಸ:ತಾನಾಜಿ: ದಿ ಅನ್ಸಂಗ್ ವಾರಿಯರ್
ಶ್ರೇಷ್ಠ ಮೇಕಪ್ ಕಲಾವಿದ: ಟಿ.ವಿ. ರಾಮಬಾಬು-ನಾಟ್ಯಂ (ತೆಲುಗು)
ಶ್ರೇಷ್ಠ ನಿರ್ಮಾಣ ವಿನ್ಯಾಸ: ಕಪ್ಪೆಲಾ (ಮಲಯಾಳಂ)
ಶ್ರೇಷ್ಠ ಸಂಕಲನ: ಶಿವರಂಜನಿಯುಂ ಇನ್ನು ಸಿಲ ಪೆಣ್ಗಳ್ (ತಮಿಳು)
ಅತ್ಯುತ್ತಮ ಧ್ವನಿ ವಿನ್ಯಾಸ: ಮಿ ವಸಂತರಾವ್
ನಾನ್ಫೀಚರ್ (ಕಥಾಚಿತ್ರೇತರ) ಚಿತ್ರಗಳ ವಿಭಾಗದಲ್ಲಿ ಮರಾಠಿಯ ಕುಂಕುಮಾರ್ಚನ್ ಶ್ರೇಷ್ಠ ಚಿತ್ರ ಪ್ರಶಸ್ತಿ ಗೆದ್ದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.