ಮೋದಿ ಬಗೆಗಿನ ಕೃತಿಯನ್ನು ಭಗವದ್ಗೀತೆಗೆ ಹೋಲಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್!
ಜೈಪುರ: 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' (Modi@20: Dreams Meet Delivery) ಕೃತಿಯನ್ನು ಭಗವದ್ಗೀತೆಗೆ ಹೋಲಿಸುವ ಮೂಲಕ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಿವಾದ ಹುಟ್ಟುಹಾಕಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಮುಂದಿನ ಪೀಳಿಗೆಗೆ ಈ ಪುಸ್ತಕ ಮಹತ್ವದ್ದು ಮತ್ತು ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆಯಷ್ಟೇ ಪವಿತ್ರದ್ದಾಗುತ್ತದೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ" ಎಂದು ಹೇಳಿದರು.
ಈ ಹೇಳಿಕೆಗೆ ಸಂಬಂಧಿಸಿದ ವೀಡಿಯೊ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹೋಲಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ಟ್ವಿಟ್ಟರ್ನಲ್ಲಿ ಶೇಖಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಅಧಿಕಾರಕ್ಕಾಗಿ ನಾಚಿಕೆಗೇಡುತನವನ್ನು ಮಾರಾಟ ಮಾಡುವವರು, ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಅವಮಾನಿಸುವ ಮೂಲಕ ಧಾರ್ಮಿಕ ವಿಧಾನವನ್ನು ಕಲುಷಿತಗೊಳಿಸಬಾರದು. ಅವರು ಎಲ್ಲೆ ಮೀರಿದ್ದಾರೆ. ಓ ಕೃಷ್ಣಾ.. ಅವರಿಗೆ ಒಳ್ಳೆಯ ಬುದ್ಧಿ ಕೊಡಿ" ಎಂದು ಟ್ವೀಟ್ ಮಾಡಿದ್ದಾರೆ.
ಮೋದಿಯವರ ರಾಜಕೀಯ ಪಯಣದ ಬಗ್ಗೆ ಸುಧಾಮೂರ್ತಿ, ಅರ್ಥಶಾಸ್ತ್ರಜ್ಞ ಅರವಿಂದ್ ಪನಗಾರಿಯಾ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಮತ್ತು ಧಾರ್ಮಿಕ ಗರು ಸದ್ಗುರು ಬರೆದ ಲೇಖನಗಳ ಸಂಗ್ರಹ ಕೃತಿ ಇದಾಗಿದೆ.
सत्ता के लालच में शर्म बेचने वालों,
— Govind Singh Dotasra (@GovindDotasra) August 23, 2022
सनातन संस्कृति के पवित्र ग्रंथ श्रीमद्भागवत गीता का अपमान करके धर्म के मार्ग को कलुषित मत करो।
चापलूसी की पराकाष्ठा को भी पार कर दिया इन्होंने तो।
हे कृष्ण ... इन्हें सद्बुद्धि दो। pic.twitter.com/tWx8l6RzUk