ರಣಬೀರ್- ಅಲಿಯಾ ಜೋಡಿ ಮಹಾಕಾಳ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಬಜರಂಗದಳ ಕಾರ್ಯಕರ್ತರು ತಡೆ
ಪೊಲೀಸರಿಂದ ಲಾಠಿ ಚಾರ್ಜ್
ಉಜ್ಜಯಿನಿ: ಬಾಲಿವುಡ್ ತಾರಾ ಜೋಡಿಯಾದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮಧ್ಯಪ್ರದೇಶದ ಉಜ್ಜಯಿನಿಯ ಪುರಾಣ ಪ್ರಸಿದ್ಧ ಮಹಾಕಾಳ ದೇವಾಲಯ ಪ್ರವೇಶಿಸದಂತೆ ಬಜರಂಗದಳ ಕಾರ್ಯಕರ್ತರು ತಡೆದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.
ಗೋಮಾಂಸ ಭಕ್ಷಣೆ ಬಗೆಗೆ ಈ ಜೋಡಿ ನೀಡಿದೆ ಎನ್ನಲಾದ ಹೇಳಿಕೆ ಮತ್ತು "ಬ್ರಹ್ಮಾಸ್ತ್ರ" ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತರು ಈ ಜೋಡಿ ದೇವಾಲಯ ಪ್ರವೇಶಿಸದಂತೆ ತಡೆದರು ಎನ್ನಲಾಗಿದೆ.
ಈ ಘಟನೆಯನ್ನು ಪೊಲೀಸರು ದೃಢಪಡಿಸಿದ್ದು, ದೇವಾಲಯ ಆವರಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಯಿತು ಎಂದು ಹೇಳಿದ್ದಾರೆ. ಲಾಠಿ ಪ್ರಹಾರದ ಹೊರತಾಗಿಯೂ ಪ್ರತಿಭಟನಾಕಾರರು ರಣಬೀರ್ ಮತ್ತು ಅಲಿಯಾ ಜೋಡಿ ದೇವಾಲಯ ಆವರಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಬಾಲಿವುಡ್ ಜೋಡಿ ದೇವಾಲಯ ದರ್ಶನಕ್ಕಾಗಿ ಆಗಮಿಸಿದಾಗ ಬಜರಂಗ ದಳ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದರು. ಮಾಂಸಾಹಾರದಲ್ಲಿ ಮಟನ್, ಚಿಕನ್, ಗೋಮಾಂಸ ತನಗೆ ಅತ್ಯಂತ ಪ್ರಿಯ ಎಂದು ಕೆಲ ದಿನಗಳ ಹಿಂದೆ ರಣಬೀರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಪವಿತ್ರ ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕ ಅಂಕಿತ್ ಚೌಬೆ ಹೇಳಿದ್ದಾರೆ.
ತಮ್ಮ ಬ್ರಹ್ಮಾಸ್ತ್ರ ಚಿತ್ರವನ್ನು ನೋಡಲು ಬಯಸುವವರು ನೋಡಲಿ; ಆಸಕ್ತಿ ಇಲ್ಲದವರು ನೋಡದಿದ್ದರೆ ಬೇಡ" ಎಂದೂ ಅಲಿಯಾ ಭಟ್ ಹೇಳಿದ್ದಾಗಿ ಅವರು ವಿವರಿಸಿದರು. ಪ್ರತಿಭಟನೆಯ ನಡುವೆಯೇ ಬ್ರಹ್ಮಸೂತ್ರ ಚಿತ್ರ ನಿರ್ದೇಶಕ ಅಯಾನ್ ಮುಖರ್ಜಿ ದೇವಾಲಯದಲ್ಲಿ ದರ್ಶನ ಪಡೆದರು ಎಂದು ಅರ್ಚಕ ಆಶೀಶ್ ಪೂಜಾರಿ ಹೇಳಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ.
Due to security concerns (as Alia is pregnant) following protests, the actor couple returned from Ujjain to Indore without offering prayers at temple. Other members of Brahmāstra: Part One – Shiva film crew later offered prayers at the temple. @NewIndianXpress@TheMornStandard pic.twitter.com/8FRzsdn7ED
— Anuraag Singh (@anuraag_niebpl) September 6, 2022