ಜಮ್ಮುಕಾಶ್ಮೀರ: ಹಿರಿಯ ಪೊಲೀಸ್ ಅಧಿಕಾರಿಯ ಕೊಲೆ ಆರೋಪಿಯ ಬಂಧನ
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿನ್ನೆ ತಡರಾತ್ರಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ ಕುತ್ತಿಗೆ ಸೀಳಿ ಸುಟ್ಟ ಗಾಯಗಳಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ
ಅವರ ಮನೆಯ ಸಹಾಯಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜೈಲುಗಳ ಉಸ್ತುವಾರಿ ಅಧಿಕಾರಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಜಮ್ಮುವಿನ ಹೊರವಲಯದಲ್ಲಿರುವ ಸ್ನೇಹಿತನ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. 57ರ ಹರೆಯದ ಲೋಹಿಯಾ ಆಗಸ್ಟ್ನಲ್ಲಿ ಜೈಲುಗಳ ಮಹಾನಿರ್ದೇಶಕರಾಗಿ (ಜೆ & ಕೆ) ನೇಮಕಗೊಂಡಿದ್ದರು.
ಆರಂಭಿಕ ತನಿಖೆಗಳ ಆಧಾರದ ಮೇಲೆ, ಪೊಲೀಸರು ಆರು ತಿಂಗಳ ಹಿಂದೆ ನೇಮಕಗೊಂಡ 23 ವರ್ಷದ ಮನೆಯ ಸಹಾಯಕ ಯಾಸಿರ್ ಅಹ್ಮದ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇದುವರೆಗೆ ತನಿಖೆಯು ಯಾವುದೇ ಭಯೋತ್ಪಾದನೆಯ ಲಿಂಕ್ ಅನ್ನು ತೋರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯ ನಂತರ ಯಾಸಿರ್ ಪರಾರಿಯಾಗಿದ್ದ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ ನಂತರ ಇಂದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರು ಅಹ್ಮದ್ನ ಫೋಟೋವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿ ಆತನನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರಾಡಳಿತ ಪ್ರದೇಶಕ್ಕೆ ಮೂರು ದಿನಗಳ ಭೇಟಿಯನ್ನು ಆರಂಭಿಸಿದ ಒಂದೇ ದಿನದಲ್ಲಿ ಈ ಕೊಲೆ ನಡೆದಿದೆ. ಯಾಸಿರ್ ಅಹ್ಮದ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಮುಖೇಶ್ ಸಿಂಗ್ ಹೇಳಿದ್ದಾರೆ.
ಆರೋಪಿ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. "ಅವರು (ಅಹ್ಮದ್) ಸುಮಾರು ಆರು ತಿಂಗಳ ಕಾಲ ಈ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಗಳು ಅವರು ಸಾಕಷ್ಟು ಆಕ್ರಮಣಕಾರಿ ಮತ್ತು ಮೂಲಗಳ ಪ್ರಕಾರ ಖಿನ್ನತೆಯಿಂದ ಬಳಲುತ್ತಿದ್ದರು" ಎಂದು ಸಿಂಗ್ ಹೇಳಿದ್ದಾರೆ.