ದಿ ವೈರ್ ಕಛೇರಿ ಹಾಗೂ ಸಂಪಾದಕರ ಮನೆಗಳಿಗೆ ದಿಲ್ಲಿ ಪೊಲೀಸ್ ದಾಳಿ: ಪತ್ರಕರ್ತರ ಸಂಘಗಳಿಂದ ಖಂಡನೆ
ಹೊಸದಿಲ್ಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ದೂರಿನ ಹಿನ್ನೆಲೆಯಲ್ಲಿ ಅಕ್ಟೋಬರ್ 31 ರಂದು ದಿಲ್ಲಿ ಪೊಲೀಸ್ ಅಪರಾಧ ವಿಭಾಗದ ಹಲವಾರು ಸದಸ್ಯರು ದಿ ವೈರ್ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂ.ಕೆ. ವೇಣು, ಸಿದ್ಧಾರ್ಥ್ ಭಾಟಿಯಾ, ಡೆಪ್ಯೂಟಿ ಎಡಿಟರ್ ಜಾಹ್ನವಿ ಸೇನ್ ಮತ್ತು ಮಿಥುನ್ ಕಿಡಂಬಿ ಅವರ ಮನೆಗಳಿಗೆ ದಾಳಿ ಮಾಡಿರುವುದನ್ನು ಪತ್ರಕರ್ತರ ಸಂಘಗಳು ಖಂಡಿಸಿವೆ
11 ಡಿಜಿಟಲ್ ನ್ಯೂಸ್ ಸಂಸ್ಥೆಗಳ ಸಂಘಟನೆಯಾದ ‘ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಷನ್’ಪೊಲೀಸ್ ದಾಳಿಯನ್ನು ಖಂಡಿಸಿದ್ದು, ಆಡಳಿತಾರೂಢ ಬಿಜೆಪಿ ವಕ್ತಾರರು ಸಲ್ಲಿಸಿದ ದೂರಿನ ಆಧಾರದ ಮೇಲೆ ತಕ್ಷಣದ ಮತ್ತು ಅನಿಯಂತ್ರಿತ ದಾಳಿ ನಡೆಸಿರುವುದು ದುರುದ್ದೇಶಪೂರಿತವಾಗಿದೆ ಎಂದು ಹೇಳಿದೆ.
“ಸುಳ್ಳು ವರದಿಯನ್ನು ಪ್ರಕಟಿಸುವ ಪತ್ರಕರ್ತ ಅಥವಾ ಮಾಧ್ಯಮ ಸಂಸ್ಥೆಯು ಅದರ ಗೆಳೆಯರು ಮತ್ತು ನಾಗರಿಕ ಸಮಾಜದಿಂದ ಜವಾಬ್ದಾರರಾಗಿರಬೇಕು. ಆದರೆ ಆಡಳಿತ ಪಕ್ಷದ ವಕ್ತಾರರು ಸಲ್ಲಿಸಿದ ಮಾನನಷ್ಟದ ಖಾಸಗಿ ದೂರಿನ ಆಧಾರದ ಮೇಲೆ ಪೊಲೀಸರು ಮಾಧ್ಯಮ ಸಂಸ್ಥೆಗಳ ಕಚೇರಿ ಮತ್ತು ಅದರ ಸಂಪಾದಕರ ಮನೆಗಳಲ್ಲಿ ತಕ್ಷಣದ ಮತ್ತು ಅನಿಯಂತ್ರಿತ ಶೋಧವನ್ನು ನಡೆಸುತ್ತಾರೆ. ಇದಲ್ಲದೆ, ದಿ ವೈರ್ ಹೊಂದಿರುವ ಗೌಪ್ಯ ಮತ್ತು ಸೂಕ್ಷ್ಮ ಡೇಟಾವನ್ನು ವಶಪಡಿಸಿಕೊಳ್ಳಲು ಮತ್ತು ನಕಲು ಮಾಡಲು ಈ ದಾಳಿ ನಡೆದಿರುವ ಅಪಾಯವನ್ನು ತಳ್ಳಿ ಹಾಕಲು ಆಗುವುದಿಲ್ಲ " ಎಂದು ಡಿಜಿಪಬ್ ತನ್ನ ಹೇಳಿಕೆಯಲ್ಲಿ ಹೇಳಿದೆ.
“ಕ್ರಿಮಿನಲ್ ಮೊಕದ್ದಮೆ ಮತ್ತು ಪೋಲೀಸರ ಕಿರುಕುಳವು ಪತ್ರಕರ್ತರನ್ನು ತಮ್ಮ ಕೆಲಸಗಳನ್ನು ಮಾಡದಂತೆ ಬೆದರಿಸುತ್ತಿದೆ ಮತ್ತು ತಡೆಯುತ್ತದೆ ಎಂದು ಇತ್ತೀಚಿನ ಹಲವಾರು ನಿದರ್ಶನಗಳು ತೋರಿಸಿವೆ” ಎಂದು ಹೇಳಿಕೆ ತಿಳಿಸಿದೆ.
ಮಾಧ್ಯಮವು ವರದಿ ಮಾಡುವ ಜವಾಬ್ದಾರಿಯನ್ನು ಹೊಂದಿದೆ ಮತ್ತು ಎಲ್ಲಾ ಸಮಯದಲ್ಲೂ ವರದಿ ಮಾಡುವ ಜವಾಬ್ದಾರಿಯನ್ನು ಹೊಂದಿರಬೇಕು, ಮಾಳವಿಯಾ ಅವರ ದೂರಿನ ಬಗ್ಗೆ ದಿಲ್ಲಿ ಪೊಲೀಸರು ವರ್ತಿಸಿದ ರೀತಿ ಸೇಡು ತೀರಿಸಿಕೊಳ್ಳುವಂತಿದೆ. ಇಂತಹ ಕ್ರಮಗಳು ಉಳಿದ ಮಾಧ್ಯಮಗಳ ಮೇಲೆ ತಣ್ಣನೆಯ ಪರಿಣಾಮವನ್ನು ಬೀರುತ್ತವೆ ಮತ್ತು ವಾಕ್ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು Press Club of India (PCI) ಹೇಳಿದೆ.
ಬೃಹನ್ಮುಂಬೈ ಯೂನಿಯನ್ ಆಫ್ ಜರ್ನಲಿಸ್ಟ್ಸ್ (BUJ) ಕೂಡಾ ಪೊಲೀಸ್ ದಾಳಿಯನ್ನು ಖಂಡಿಸಿದ್ದು, ಏಕಾಏಕಿ ಶೋಧಕಾರ್ಯದಿಂದ ವಿಚಲಿತಗೊಂಡಿರುವುದಾಗಿ ಹೇಳಿದೆ. ಇದು ಅತ್ಯಂತ ವಿಷಾದನೀಯ ಮತ್ತು ಶೋಚನೀಯವಾಗಿದೆ ಎಂದು ಅದು ಹೇಳಿದೆ.
ನ್ಯಾಶನಲ್ ಅಲೈಯನ್ಸ್ ಆಫ್ ಜರ್ನಲಿಸ್ಟ್ಸ್ (NAJ) ಮತ್ತು ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ (DUJ) ಸಹ ಪೊಲೀಸ್ ದಾಳಿಯನ್ನು ಖಂಡಿಸಿವೆ. ದಿ ವೈರ್ ಸ್ಟೋರಿಗಳನ್ನು ಹಿಂತೆಗೆದುಕೊಂಡಿರುವುದರಿಂದ ಮತ್ತು ಸ್ಟೋರಿಗಳಿಗೆ ಕ್ಷಮೆಯಾಚಿಸಿದ ಕಾರಣ, ಈ ದಾಳಿಯು ಮಾಧ್ಯಮ ಸ್ವಾತಂತ್ರ್ಯಕ್ಕೆ ಮೂಗುದಾರ ಹಾಕುವ ಪ್ರಯತ್ನವೆಂಬಂತಿದೆ ಎಂದು ಹೇಳಿದೆ.
Digipub's statement on police searches on the homes of the editors and a reporter of The Wire pic.twitter.com/ewZCIZNL4C
— DIGIPUB News India Foundation (@DigipubIndia) November 1, 2022
In this context, Monday’s police raid was highly unjustified, indicating vindictiveness and malafide intent by the ruling party & its spokesperson @amitmalviya The police are to be even-handed and free of political influence, which is clearly lacking here. https://t.co/brpkJFtpin
— NWMIndia (@NWM_India) November 1, 2022
#India: Delhi police raid @thewire_in office and homes of its editors over retracted Meta reports@CPJAsia urges Indian authorities to stop harassing employees of the news website and let them work freely https://t.co/Jxwv5Gh4ev pic.twitter.com/eEjyCdNd6R
— CPJ Asia (@CPJAsia) October 31, 2022