ಗುಜರಾತ್ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಫರ್ ನೀಡಿದೆ: ಅರವಿಂದ ಕೇಜ್ರಿವಾಲ್ ಆರೋಪ
ಅಹಮದಾಬಾದ್: ಗುಜರಾತ್ ಚುನಾವಣೆಯಿಂದ ಆಮ್ ಆದ್ಮಿ ಪಕ್ಷ ಹಿಂದೆ ಸರಿದರೆ ತನಿಖೆ ಎದುರಿಸುತ್ತಿರುವ ಸಚಿವರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಅವರನ್ನು ಬಿಡುತ್ತೇವೆ ಎಂದು ಬಿಜೆಪಿ ನನಗೆ ಆಫರ್ ನೀಡಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿಕೊಂಡಿದ್ದಾರೆ.
ದಿಲ್ಲಿಯಲ್ಲಿ ಏಕಕಾಲಕ್ಕೆ ಎಂಸಿಡಿ ಚುನಾವಣೆಗಳನ್ನು ಆಯೋಜಿಸುವ ಮೂಲಕ ಕೇಜ್ರಿವಾಲ್ ಮೂಲೆಗುಂಪಾಗಿದ್ದಾರೆ ಎಂದು ತೋರಿಸುವುದಿಲ್ಲ. ಇದು ಬಿಜೆಪಿಗೆ ಭಯವಾಗಿದೆ ಎಂಬುದನ್ನು ತೋರಿಸುತ್ತದೆ. ಎರಡರಲ್ಲೂ ಗೆಲ್ಲುವ ವಿಶ್ವಾಸವಿದ್ದರೆ ಹೀಗೆ ಮಾಡುತ್ತಿರಲಿಲ್ಲ. ವಾಸ್ತವವೆಂದರೆ ಗುಜರಾತ್ ವಿಧಾನಸಭೆ ಹಾಗೂ ದಿಲ್ಲಿ ಎಂಸಿಡಿ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭಯದಲ್ಲಿದೆ. ಆದ್ದರಿಂದ ಎರಡೂ ಚುನಾವಣೆಗಳು ಒಂದೇ ಸಮಯದಲ್ಲಿ ನಡೆಯುವುದನ್ನು ಅವರು ಖಚಿತಪಡಿಸಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಎನ್ಡಿಟಿವಿ ಟೌನ್ಹಾಲ್ನಲ್ಲಿ ಹೇಳಿದರು.
"ದಿಲ್ಲಿ ಮುಖ್ಯಮಂತ್ರಿ ಆಗುವ ಬಿಜೆಪಿ ನೀಡಿದ್ದ ಪ್ರಸ್ತಾಪವನ್ನು ಮನೀಶ್ ಸಿಸೋಡಿಯಾ ಅವರು ತಿರಸ್ಕರಿಸಿದ ನಂತರ, ಅವರು ಈಗ ನನ್ನನ್ನು ಸಂಪರ್ಕಿಸಿದ್ದಾರೆ ... ನೀವು ಗುಜರಾತ್ ಬಿಟ್ಟು ಅಲ್ಲಿ ಸ್ಪರ್ಧಿಸದಿದ್ದರೆ ಸತ್ಯೇಂದ್ರ ಜೈನ್ ಹಾಗೂ ಸಿಸೋಡಿಯಾ ಇಬ್ಬರನ್ನೂ ನಾವು ಬಿಟ್ಟುಬಿಡುತ್ತೇವೆ ಮತ್ತು ಅವರ ವಿರುದ್ಧ ಎಲ್ಲಾ ಆರೋಪಗಳನ್ನು ಕೈಬಿಡುತ್ತೇವೆ ಎಂದು ಅವರು ಹೇಳಿದ್ದಾರೆಂದು'' ಕೇಜ್ರಿವಾಲ್ ಹೇಳಿದರು.
ನಿಮಗೆ ಆಫರ್ ನೀಡಿದವರು ಯಾರು ಎಂದು ಕೇಳಿದಾಗ , ಅವರನ್ನು ನಾನು ಹೇಗೆ ಹೆಸರಿಸಲಿ ... ಅವರ ಮೂಲಕ ಆಫರ್ ಬಂದಿದೆ ... ಅವರು (ಬಿಜೆಪಿ) ಎಂದಿಗೂ ನೇರವಾಗಿ ಸಂಪರ್ಕಿಸುವುದಿಲ್ಲ. ಅವರು ಒಬ್ಬರಿಂದ ಮತ್ತೊಬ್ಬರಿಗೆ , ಸ್ನೇಹಿತರಿಗೆ ಹೋಗುತ್ತಾರೆ. ನಂತರ ಸಂದೇಶವು ನಿಮ್ಮನ್ನು ತಲುಪುತ್ತದೆ ಎಂದರು.