ಬೆಂಗಳೂರು ಶೋ ರದ್ದಾದ ನಂತರ ವೀರ ದಾಸ್ ಅವರನ್ನು ಕೋಲ್ಕತ್ತಾಗೆ ಆಹ್ವಾನಿಸಿದ ಟಿಎಂಸಿ
ಕೋಲ್ಕತಾ: ಬಲಪಂಥೀಯ ಗುಂಪುಗಳ ಪ್ರತಿಭಟನೆಯ ಕಾರಣ ಕೊನೆಯ ಕ್ಷಣದಲ್ಲಿ ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ (Vir das) ಅವರ ಪ್ರದರ್ಶನವನ್ನು ರದ್ದುಗೊಳಿಸಿದ ಒಂದು ದಿನದ ನಂತರ ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಕಾಮಿಡಿಯನ್ ವೀರ್ ದಾಸ್ ಅವರನ್ನು ಕೋಲ್ಕತ್ತಾಕ್ಕೆ ಆಹ್ವಾನಿಸಿದ್ದಾರೆ.
ಗುರುವಾರ ನಿಗದಿಯಾಗಿದ್ದ ಕಾರ್ಯಕ್ರಮವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
Hello @thevirdas
— Derek O'Brien | ডেরেক ও'ব্রায়েন (@derekobrienmp) November 11, 2022
Come to #Kolkata. We would love to have you here this winter. DM me please. Let’s get this going. https://t.co/P9taO0dewq
Next Story