ವಂದೇ ಭಾರತ್ ರೈಲಿನಲ್ಲಿ ಸುಮಾರು ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ!
ಅಹ್ಮದಾಬಾದ್: ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು ಆರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಇದ್ದ ಬ್ಯಾಗನ್ನು ಕಳ್ಳತನ ಮಾಡಲಾಗಿದೆ ಎಂದು ಭೋಪಾಲ್ನ 55 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ಭೋಪಾಲ್ನ ಜಿಇಬಿ ರಸ್ತೆಯ ನವನಿಧಿ ಎಲೆಗೆನ್ಸ್ ನಿವಾಸಿ ಪರೇಶ್ ಸೊನಾನಿ ಈ ಬಗ್ಗೆ ದೂರು ನೀಡಿದ್ದು, ಮಂಗಳವಾರ ಈ ಕಳ್ಳತನ ನಡೆದಿದೆ ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.
ಮನೆಯಿಂದ ಬಿಆರ್ಟಿಎಸ್ ಬಸ್ನಲ್ಲಿ ಇಸ್ಕಾನ್ ತಿರುವು ರಸ್ತೆಗೆ ಬಂದು ಅಲ್ಲಿಂದ ಕಲುಪುರ ರೈಲು ನಿಲ್ದಾಣಕ್ಕೆ ಎಎಂಟಿಎಸ್ ಬಸ್ನಲ್ಲಿ ಪ್ರಯಾಣಿಸಿದ್ದಾಗಿ ಹೇಳಿದ್ದಾರೆ. ರೈಲಿಗೆ ಹತ್ತಿದ ಬಳಿಕ ಸೀಟಿನಲ್ಲಿ ಬ್ಯಾಗ್ ಇರಿಸಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳ್ಳತನವಾಗಿರುವುದು ಅರಿವಾಯಿತು. ಈ ಸಂಬಂಧ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ. ಅಹ್ಮದಾಬಾದ್ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದು, ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು timesofindia.com ವರದಿ ಮಾಡಿದೆ.