ಭಾರತವು 2020ರಲ್ಲಿ ಅತ್ಯುನ್ನತ ಮಟ್ಟದಲ್ಲಿ ಕೋವಿಡ್ ಸಂಬಂಧಿತ ಧಾರ್ಮಿಕ ಹಗೆತನಗಳಿಗೆ ಸಾಕ್ಷಿಯಾಗಿತ್ತು: ವರದಿ
-

Photo : PTI
ಭಾರತವು 2020ರಲ್ಲಿ ಅತ್ಯುನ್ನತ ಮಟ್ಟದಲ್ಲಿ ಕೋವಿಡ್ ಸಂಬಂಧಿತ ಧಾರ್ಮಿಕ ಹಗೆತನಗಳಿಗೆ ಸಾಕ್ಷಿಯಾಗಿತ್ತು: ವರದಿ
ಹೊಸದಿಲ್ಲಿ, ಡಿ.1: 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅತ್ಯುನ್ನತ ಮಟ್ಟದ ಧಾರ್ಮಿಕ ಹಗೆತನಗಳಿಗೆ ಭಾರತವು ಸಾಕ್ಷಿಯಾಗಿತ್ತು ಎಂದು ಪ್ಯೂ ರೀಸರ್ಚ್ ಸೆಂಟರ್ Pew Research Center (PRC) ತನ್ನ ವರದಿಯಲ್ಲಿ ಹೇಳಿದೆ ಎಂದು scroll.in ವರದಿ ಮಾಡಿದೆ.
ಧರ್ಮಗಳ ಆಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರ್ಬಂಧಗಳ ಕುರಿತು PRCಯ 13ನೇ ವಾರ್ಷಿಕ ಅಧ್ಯಯನದಂತೆ 10ರಲ್ಲಿ 9.4 ಅಂಕಗಳೊಂದಿಗೆ ಭಾರತವು ಸಾಮಾಜಿಕ ಹಗೆತನ ಸೂಚ್ಯಂಕ (ಎಸ್ಎಚ್ಐ)ದಲ್ಲಿ ತನ್ನ ನೆರೆದೇಶಗಳಾದ ಪಾಕಿಸ್ತಾನ (7.5) ಮತ್ತು ಅಫಘಾನಿಸ್ತಾನ (8)ಗಳಿಗಿಂತ ಹೀನಾಯ ಸ್ಥಾನದಲ್ಲಿದೆ.
2020ರ ಆರಂಭದಲ್ಲಿ ತಬ್ಲಿಗಿ ಜಮಾಅತ್ ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮ್ಮೇಳನದ ಬಳಿಕ ಅದರ 900 ಸದಸ್ಯರನ್ನು ಕ್ವಾರಂಟೈನ್ನಲ್ಲಿ ಇರಿಸುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ನಿರ್ಧಾರವನ್ನು ವರದಿಯು ಉಲ್ಲೇಖಿಸಿದೆ.
ದೇಶದಲ್ಲಿ ಕೋವಿಡ್ ಹರಡುವಿಕೆಗೆ ತಬ್ಲಿಗಿ ಜಮಾಅತ್ ನ ಸಮ್ಮೇಳನವು ಕಾರಣವಾಗಿತ್ತು ಎಂಬ ಆರೋಪದ ಬಳಿಕ 2020, ಮಾ.31ರಿಂದ ಮಸೀದಿಯನ್ನು ಮುಚ್ಚಲಾಗಿತ್ತು. ಈ ಘಟನೆಯು ಮುಸ್ಲಿಮರ ವಿರುದ್ಧದ ದ್ವೇಷಭಾವನೆಯನ್ನು ಕೆರಳಿಸಿತ್ತು ಹಾಗೂ ವ್ಯವಹಾರ ಬಹಿಷ್ಕಾರಗಳು ಮತ್ತು ದ್ವೇಷ ಭಾಷಣಗಳ ಅಲೆಗಳಿಗೆ ಕಾರಣವಾಗಿತ್ತು.
ಸರಕಾರದ ಕೋವಿಡ್ ಮಾರ್ಗಸೂಚಿಗಳ ಅಥವಾ ತಮ್ಮ ವೀಸಾ ಷರತ್ತುಗಳನ್ನು ಉಲ್ಲಂಘನೆಯಂತಹ ಕಾರಣಗಳನ್ನೊಡ್ಡಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಹಲವಾರು ಪ್ರಕರಣಗಳನ್ನೂ ದಾಖಲಿಸಲಾಗಿತ್ತು. ಆದರೆ ನ್ಯಾಯಾಲಯಗಳು ಹೆಚ್ಚಿನ ಎಫ್ಐಆರ್ ಗಳನ್ನು ರದ್ದುಗೊಳಿಸಿವೆ ಮತ್ತು ತಬ್ಲಿಗಿ ಸದಸ್ಯರನ್ನು ಖುಲಾಸೆಗೊಳಿಸಿವೆ.
ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ 2020ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹತ್ಯೆಗಳು ನಡೆದಿದ್ದ ಮೂರು ದೇಶಗಳಲ್ಲಿ ಭಾರತವೂ ಒಂದಾಗಿತ್ತು ಎಂದೂ ವರದಿಯು ಹೇಳಿದೆ. ಇಂಡೋನೇಶ್ಯಾ ಮತ್ತು ಯೆಮೆನ್ ಇತರ ಎರಡು ದೇಶಗಳಾಗಿವೆ. ತಮಿಳುನಾಡಿನಲ್ಲಿ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟು, ಪೊಲೀಸ್ ಠಾಣೆಯಲ್ಲಿ ಥಳಿತದ ಬಳಿಕ ಸಾವನ್ನಪ್ಪಿದ್ದ ಇಬ್ಬರು ಕ್ರೈಸ್ತರನ್ನು ವರದಿಯು ಉಲ್ಲೇಖಿಸಿದೆ.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್ ಬಿಡಿಭಾಗಗಳ ಅಂಗಡಿಯನ್ನು ಅನುಮತಿಸಲ್ಪಟ್ಟ ಅವಧಿಯ ಬಳಿಕವೂ ತೆರೆದಿದ್ದಕ್ಕಾಗಿ 2020, ಜೂ.19ರಂದು ಜಯರಾಜ್ ಮತ್ತು ಪುತ್ರ ಬೆನಿಕ್ಸ್ ಅವರನ್ನು ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಅವರನ್ನು ಕೋವಿಲಪಟ್ಟಿ ಸಬ್ ಜೈಲಿಗೆ ಕಳುಹಿಸಲಾಗಿತ್ತು. ಜೂ.22ರಂದು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದ ಬೆನಿಕ್ಸ್ರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರೆ,ಮರುದಿನ ಅವರ ತಂದೆ ಜಯರಾಜ್ ಕೂಡ ಮೃತಪಟ್ಟಿದ್ದರು.
ಜಯರಾಜ್ ಮತ್ತು ಬೆನಿಕ್ಸ್ ರನ್ನು ಎಷ್ಟೊಂದು ಕ್ರೂರವಾಗಿ ಥಳಿಸಲಾಗಿತ್ತು ಎನ್ನುವುದಕ್ಕೆ ಗೋಡೆಯ ಮೇಲಿನ ರಕ್ತದ ಕಲೆಗಳೇ ಸಾಕ್ಷಿಯಾಗಿವೆ. ಅವರು ತಮ್ಮ ಬಟ್ಟೆಗಳಿಂದಲೇ ರಕ್ತವನ್ನು ಒರೆಸುವಂತೆ ಮಾಡಲಾಗಿತ್ತು. ಇಬ್ಬರನ್ನೂ ಹಲವಾರು ಸುತ್ತುಗಳ ಬರ್ಬರ ಹಿಂಸೆಗೆ ಗುರಿಪಡಿಸಲಾಗಿತ್ತು ಎಂದು ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿತ್ತು.
ಆದಾಗ್ಯೂ ಭಾರತವು ಸರಕಾರಿ ನಿರ್ಬಂಧಗಳ ಸೂಚ್ಯಂಕದಲ್ಲಿ 5.8 ಅಂಕಗಳೊಂದಿಗೆ ಕೊಂಚ ಉತ್ತಮ ಸ್ಥಾನದಲ್ಲಿದೆ. ಚೀನಾ ಅತ್ಯಂತ ಹೆಚ್ಚಿನ ಸರಕಾರಿ ನಿರ್ಬಂಧಗಳೊಂದಿಗೆ 9.3 ಅಂಕಗಳನ್ನು ಹೊಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.