ತಮಿಳು ಹಿಂದುತ್ವ ಗುಂಪಿನಿಂದ ಅಂಬೇಡ್ಕರ್ ಕೇಸರೀಕರಣ: ಆರೋಪ
ಚೆನ್ನೈ,ಡಿ.6: ಕೇಸರಿ ಶರ್ಟ್ ಮತ್ತು ಹಣೆಯ ಮೇಲೆ ವಿಭೂತಿಯೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ (Dr. B. R. Ambedkar)ಅವರ ಪೋಸ್ಟರ್ ವೊಂದನ್ನು ಟ್ವೀಟಿಸಿರುವ ವಿದುತಲೈ ಚಿರುಥೈಗಲ್ ಕಚ್ಚಿ ನಾಯಕ ಹಾಗೂ ಸಂಸದ ಟಿ.ತಿರುಮಾವಲನ್(T. Thirumavalan) ಅವರು,ಈ ಪೋಸ್ಟರ್ ಅಂಬೇಡ್ಕರ್ ನ್ನು ತುಚ್ಛೀಕರಿಸುವ ವಿಧಾನವಾಗಿದೆ ಎಂದು ಬಣ್ಣಿಸಿದ್ದಾರೆ.
ತಮಿಳುನಾಡಿನ ಹಿಂದು ತ್ವ ಗುಂಪು ಹಿಂದು ಮಕ್ಕಳ್ ಕಚ್ಚಿ ಈ ಪೋಸ್ಟರ್ ಗಳನ್ನೂ ಪ್ರದರ್ಶಿಸಿದೆ.
ಪೋಸ್ಟರ್ ನ್ನು ಖಂಡಿಸಿರುವ ತಿರುಮಾವಲನ್,ಅದು ವಿಷ್ಣು ಅಥವಾ ಬ್ರಹ್ಮನನ್ನು ಪ್ರಾರ್ಥಿಸಲು ನಿರಾಕರಿಸಿದ್ದ ಅಂಬೇಡ್ಕರ್ರ ಕೇಸರಿಕರಣವನ್ನು ಮಾಡಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ರನ್ನು ಹೀಗೆ ಬಿಂಬಿಸಿರುವ ಧಾರ್ಮಿಕ ಮತಾಂಧರನ್ನು ತಕ್ಷಣ ಬಂಧಿಸಬೇಕು ಎಂದೂ ತಿರುಮಾವಲನ್ ಬರೆದಿದ್ದಾರೆ.
ಸುದ್ದಿಸಂಸ್ಥೆಯೊದಿಗೆ ಮಾತನಾಡಿದ ಹಿಂದು ಮಕ್ಕಳ್ ಕಚ್ಚಿ ನಾಯಕ ಅರ್ಜುನ ಸಂಪತ್, ಅಂಬೇಡ್ಕರ್ ಪುಣ್ಯತಿಥಿ ಸಂದರ್ಭದಲ್ಲಿ ಜಾಗೃತಿಯನ್ನು ಮೂಡಿಸಲು ಅಂಬೇಡ್ಕರ್ ಅವರ ಕೇಸರೀಕರಣ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
#சனாதன சங்கத்துவ வர்ணாஸ்ரம பாகுபாடுகளை- பார்ப்பனீய மனுஸ்மிருதி மேலாதிக்கத்தை- தன் இறுதிமூச்சு வரையில் மூர்க்கமாக எதிர்த்து 10இலட்சம் பேருடன் இந்து மதத்திலிருந்து வெளியேறி மதவெறியர்களின் பல்லைப் பிடுங்கிய புரட்சியாளர் அம்பேத்கர் அவர்களை இழிவுபடுத்தும் மதவாத மனநோயாளிகளை மிக (1/2).. pic.twitter.com/PINQVC4hlx
— Thol. Thirumavalavan (@thirumaofficial) December 6, 2022