Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದತ್ತಾಂಶ ಸಂರಕ್ಷಣೆ ಮಸೂದೆಯು RTI...

ದತ್ತಾಂಶ ಸಂರಕ್ಷಣೆ ಮಸೂದೆಯು RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ: ಮಾಹಿತಿ ಆಯುಕ್ತರ ಆತಂಕ

14 Dec 2022 8:05 PM IST
share
ದತ್ತಾಂಶ ಸಂರಕ್ಷಣೆ ಮಸೂದೆಯು RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ: ಮಾಹಿತಿ ಆಯುಕ್ತರ ಆತಂಕ

ಹೊಸದಿಲ್ಲಿ: ಮಂಗಳವಾರ ನಡೆದ ವರ್ಚುವಲ್ ಸಭೆಯೊಂದರಲ್ಲಿ ಹಲವಾರು ಮಾಹಿತಿ ಆಯುಕ್ತರು ದತ್ತಾಂಶ ಸಂರಕ್ಷಣೆ ಮಸೂದೆಯು (Data Protection Bill) ಹೇಗೆ RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸರಕಾರವು ಈಗಾಗಲೇ ಮಸೂದೆಯ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಪ್ರಸ್ತಾವಿತ ಮಸೂದೆಯು ಹೆಚ್ಚಿನ ಮಾಹಿತಿಗಳನ್ನು ನಿರಾಕರಿಸಲು ಅಧಿಕಾರಿಗಳಿಗೆ ಹಕ್ಕನ್ನು ನೀಡುತ್ತದೆ ಎಂದೂ ಮಾಹಿತಿ ಆಯುಕ್ತರು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

ದತ್ತಾಂಶ ಸಂರಕ್ಷಣೆ ಮಸೂದೆಯಲ್ಲಿ ಮಾಹಿತಿ ಹಕ್ಕಿಗೆ ಬೆದರಿಕೆಯು ತನಗೆ ಕಂಡು ಬರುತ್ತಿದೆ ಎಂದು ಮಾಜಿ ಕೇಂದ್ರೀಯ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಸಭೆಯಲ್ಲಿ ಹೇಳಿದ್ಧಾರೆ. ಆರ್ಟಿಐ ಕಾಯ್ದೆಯಂತೆ ನಾಗರಿಕರು ಎಲ್ಲ ಮಾಹಿತಿಗಳನ್ನು ಪಡೆಯಬಹುದು, ಆದಾಗ್ಯೂ ಕಾಯ್ದೆಯ ಕಲಂ 8(1)ರಡಿ ಕೇವಲ 10 ವಿಧಗಳ ಮಾಹಿತಿಗಳು ಬಹಿರಂಗಪಡಿಸುವುದರಿಂದ ವಿನಾಯಿತಿ ಪಡೆದಿವೆ. ಈ ವಿನಾಯಿತಿಗಳು ವಿಸ್ತರಿಸಲ್ಪಟ್ಟರೆ RTI ಕಾಯ್ದೆಯ ವ್ಯಾಪ್ತಿಯು ಕುಗ್ಗುತ್ತದೆ ಎಂದರು.

ಈ 10 ವಿನಾಯಿತಿಗಳ ಪೈಕಿ ಕಲಂ 8(1)(ಜೆ) ಹೆಚ್ಚು ಸಾಮಾನ್ಯವಾಗಿ ದುರ್ಬಳಕೆಯಾಗುತ್ತಿದೆ ಮತ್ತು ಶೇ.35ರಷ್ಟು ಮಾಹಿತಿ ನಿರಾಕರಣೆಗಳಿಗೆ ಹೊಣೆಯಾಗಿದೆ ಎಂದು ಗಾಂಧಿ ಬೆಟ್ಟು ಮಾಡಿದರು.

ಕಲಂ 8(1)(ಜೆ) ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ್ದು, ಇದಕ್ಕೆ ತಿದ್ದುಪಡಿ ತರಲು ಮಸೂದೆಯು ಉದ್ದೇಶಿಸಿದೆ. ಇದರಿಂದ ಈ ಉಪ ಕಲಂ ವ್ಯಾಪ್ತಿಯು ಹೆಚ್ಚಲಿದೆ. ವೈಯಕ್ತಿಕ ಮಾಹಿತಿ ಎಂಬ ಕಾರಣವನ್ನೊಡ್ಡಿ ಈಗಾಗಲೇ ಬಹಳಷ್ಟು ಮಾಹಿತಿಗಳನ್ನು ನಿರಾಕರಿಸಲಾಗಿದೆ. ದತ್ತಾಂಶ ಸಂರಕ್ಷಣೆ ಮಸೂದೆಯ ಅನುಷ್ಠಾನವು RTI ಕಾಯ್ದೆಯನ್ನು ‘ಮಾಹಿತಿಯನ್ನು ನೀಡದಿರುವ ಹಕ್ಕು ಕಾಯ್ದೆ’ಯನ್ನಾಗಿ ಮಾಡುತ್ತದೆ. ಮಸೂದೆಯು RTI ಕಾಯ್ದೆಯ ಮೇಲೆ ಅಧಿಕಾರವನ್ನು ಹೊಂದಿರಲಿದೆ ಎಂದು ಹೇಳಿದ ಗಾಂಧಿ, ಆರ್ಟಿಐ ಕಾಯ್ದೆಯು ಸರಕಾರದ ಬದಲು ಸಾಮಾನ್ಯ ಪ್ರಜೆಗಳನ್ನು ‘ಮಾಲಿಕರನ್ನಾಗಿ’ ಅಥವಾ ನಿಜವಾದ ಆಡಳಿತಗಾರರನ್ನಾಗಿ ಮಾಡಿರುವ ಮೊದಲ ಕಾನೂನಾಗಿರುವುದರಿಂದ ಅದನ್ನು ಮುಟ್ಟಬಾರದು ಎಂದು ಆಗ್ರಹಿಸಿದರು. ಶಾಸಕರ ನಿಧಿಗಳ ವಿವರಗಳು ಅಥವಾ ಪಿಎಂ ಕೇರ್ಸ್ ನಿಧಿಯ ಫಲಾನುಭವಿಗಳಂತಹ ಪ್ರಮುಖ ಮಾಹಿತಿಗಳನ್ನು ಹೇಗೆ ನಿರಾಕರಿಸಲಾಗಿದೆ ಎನ್ನುವುದರ ಕುರಿತೂ ಅವರು ಮಾತನಾಡಿದರು.

RTI ಕಾಯ್ದೆಗೆ ಪಾರದರ್ಶಕತೆಯ ಮೂಲಕ ಹೆಚ್ಚಿನ ಬೆಂಬಲವನ್ನು ಒದಗಿಸುವ ಬದಲು ಅದನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ ಮಧ್ಯಪ್ರದೇಶದ ರಾಜ್ಯ ಮಾಹಿತಿ ಆಯುಕ್ತ ರಾಹುಲ್ ಸಿಂಗ್ ಅವರು, ಈ ಕಾಯ್ದೆಗೆ ಇಂತಹ ತಿದ್ದುಪಡಿ ತರಲು ಕಾರಣಗಳನ್ನು ಸರಕಾರವು ತೋರಿಸಬೇಕು ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳಬೇಕು ಎಂದರು. RTI ಕಾಯ್ದೆಯಲ್ಲಿ ಅತ್ಯಂತ ಹೆಚ್ಚು ದುರುಪಯೋಗಗೊಂಡಿರುವ ಕಲಂ 8(1)(ಜೆ)ದಲ್ಲಿ ಬದಲಾವಣೆಗಳನ್ನು ಮಾಡಲು ತಿದ್ದುಪಡಿಯು ಬಯಸಿದೆ ಎಂದ ಅವರು, ತಾನು ಸೇವೆಯಲ್ಲಿದ್ದಾಗ ಮಾಹಿತಿಯನ್ನು ನಿರಾಕರಿಸಲು ಈ ನಿಬಂಧನೆಯ ಬಳಕೆಯಾಗಿದ್ದ ಹಲವಾರು ಮೇಲ್ಮನವಿಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.

ಹಲವು ಪ್ರಕರಣಗಳಲ್ಲಿ ಕಾನೂನುಬಾಹಿರ ನಿರಾಕರಣೆಯಾಗಿದ್ದನ್ನು ಈಗ ಕಾನೂನುಬದ್ಧ ನಿರಾಕರಣೆಯನ್ನಾಗಿ ಮಾಡುವ ಆತಂಕವಿದೆ. ಈ ತಿದ್ದುಪಡಿಯಿಂದಾಗಿ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನಿರಾಕರಿಸಬಹುದು ಎಂದು ಗಾಂಧಿ ನುಡಿದರು.

ದತ್ತಾಂಶ ಸಂರಕ್ಷಣೆ ಮಸೂದೆಯು ಹೇಗೆ RTI ಕಾಯ್ದೆಯ ನಿಬಂಧನೆಗಳನ್ನು ತುಳಿಯುತ್ತದೆ ಎನ್ನುವದರ ಕುರಿತು ಮಾತನಾಡಿದ ಇನ್ನೋರ್ವ ಮಾಜಿ ಕೇಂದ್ರೀಯ ಮಾಹಿತಿ ಅಯುಕ್ತ ಯಶೋವರ್ಧನ ಆಜಾದ್ ಅವರು, ‘ಗೋಪ್ಯತೆ ಮುಖ್ಯ ಎಂದು ನಾವೆಲ್ಲರೂ ನಂಬುತ್ತೇವೆ, ಆದರೆ ಮಾಹಿತಿ ಹಕ್ಕನ್ನು ವಿರೋಧಿಸಲು ಅದನ್ನು ಮುಂದೆ ಮಾಡುವುದು ದುರದೃಷ್ಟಕರವಾಗಿದೆ. ಜನರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದ ಯಾವುದೇ ಕಾರ್ಯಕಾರಿ ಕ್ರಮ ಅಥವಾ ಕಾನೂನನ್ನು ತರುವಂತಿಲ್ಲ ಎಂದು ಸಂವಿಧಾನದ ವಿಧಿ 13 ಹೇಳುತ್ತದೆ. ಆದಾಗ್ಯೂ ಕಲಂ 8(1)(ಜೆ) ಅನ್ನು ತೆಗೆದುಹಾಕಲು ನಾವಿಂದು ಪ್ರಯತ್ನಿಸಿದರೆ ಮತ್ತು ಗೋಪ್ಯತೆಯ ಉಲ್ಲಂಘನೆಯಾಗುತ್ತದೆ ಎಂಬ ನೆಪವೊಡ್ಡಿ ಮಾಹಿತಿಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರೆ ಅದು ಜನರ ಮಾಹಿತಿ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದರು.

ದತ್ತಾಂಶ ಸಂರಕ್ಷಣೆ ಮಸೂದೆಯಲ್ಲಿ ನಾಲ್ಕು ನಿಬಂಧನೆಗಳಿದ್ದು, ಅವು ಅನಗತ್ಯ ಮಾತ್ರವಲ್ಲ, RTI ಕಾಯ್ದೆಗೆ ಹೊಡೆತವನ್ನೂ ನೀಡುತ್ತವೆ ಎಂದು ಮಧ್ಯಪ್ರದೇಶದ ಮಾಜಿ ರಾಜ್ಯ ಮಾಹಿತಿ ಆಯುಕ್ತ ಆತ್ಮದೀಪ ಹೇಳಿದರು.

ಆರ್ಟಿಐ ಕಾಯ್ದೆಯ ಮೇಲೆ ದತ್ತಾಂಶ ಸಂರಕ್ಷಣೆ ಮಸೂದೆಯ ಪರಿಣಾಮವನ್ನು ಉಲ್ಲೇಖಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಮಾಹಿತಿ ಆಯುಕ್ತ ರತ್ನಾಕರ ಗಾಯಕವಾಡ್ ಅವರು, ಜನರ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ನ್ಯಾಯಾಂಗ ಅಥವಾ ರಾಜಕೀಯ ಇಚ್ಛಾಶಕ್ತಿಯಿಲ್ಲ,ಇವೆಲ್ಲವೂ ಭ್ರಷ್ಟಾಚಾರವನ್ನು ಬೆಂಬಲಿಸುತ್ತವೆ. ಕಾಯ್ದೆಯಲ್ಲಿ ಪ್ರತಿಕೂಲ ಬದಲಾವಣೆಗಳಾಗದಂತೆ ನೋಡಿಕೊಳ್ಳುವಲ್ಲಿ ನಾಗರಿಕ ಸಮಾಜ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆಂದು thewire.in ವರದಿ ಮಾಡಿದೆ.

ಇದನ್ನೂ ಓದಿ: ಗ್ರಾಹಕರು ಎಂದೂ ಬಯಸಿರದ ಸರಕಾರದ ವಿಮಾ ಯೋಜನೆಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕುಗಳು: ವರದಿ

share
Next Story
X