ಚೀನಾವನ್ನು ಶಿಕ್ಷಿಸುವ ಬದಲು ಕೇಂದ್ರ ಸರಕಾರವು 'ಬಹುಮಾನ' ನೀಡುತ್ತಿದೆ: ಅರವಿಂದ ಕೇಜ್ರಿವಾಲ್
''ಬಿಜೆಪಿ ಸರಕಾರಕ್ಕೆ ನಮ್ಮ ಸೈನಿಕರ ಪ್ರಾಣದ ಬಗ್ಗೆ ಕಾಳಜಿ ಇಲ್ಲ''
ಹೊಸದಿಲ್ಲಿ: ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದಲ್ಲಿನ ವಾಸ್ತವಿಕ ಗಡಿಯಲ್ಲಿ ಅತಿಕ್ರಮಣ ಮಾಡಿದ ಚೀನಾವನ್ನು ಶಿಕ್ಷಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಚೀನಾಕ್ಕೆ ‘ಬಹುಮಾನ’ ನೀಡಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ವಾಗ್ದಾಳಿ ನಡೆಸಿದ್ದಾರೆ.
"ಚೀನಾದ ಆಕ್ರಮಣವು ಹೆಚ್ಚುತ್ತಿರುವಾಗ, ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಬಿಜೆಪಿ ಸರಕಾರವು ಎಲ್ಲವೂ ಸರಿಯಾಗಿದೆ ಎಂಬ ಕಥಾಹಂದರವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಚೀನಾವನ್ನು ಶಿಕ್ಷಿಸುವ ಬದಲು ಕೇಂದ್ರ ಸರ್ಕಾರವು ಅವರಿಗೆ ಬಹುಮಾನ ನೀಡುತ್ತಿದೆ" ಎಂದು ಅವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಹೇಳಿದರು.
"ನಾವು ಚೀನಾದಿಂದ ಸರಕುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದೇವೆ ಏಕೆ? ಕೇವಲ 2020-21 ರಲ್ಲಿ, ನಾವು ಚೀನಾದಿಂದ 65 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದೇವೆ. ಚೀನಾದ ಆಕ್ರಮಣವು ಹೆಚ್ಚಾದಾಗ ನಂತರದ ವರ್ಷದಲ್ಲಿ ನಾವು 95 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದೇವೆ. ನಮಗೆ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ? ಬಿಜೆಪಿ ಸರಕಾರಕ್ಕೆ ನಮ್ಮ ಸೈನಿಕರ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.