ಮಾನ್ಯತೆ ರದ್ದಾಗಿದ್ದ ಅಮೆರಿಕಾದ ವಿವಿ ಜೊತೆ 35,000 ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಂಡ ಉತ್ತರ ಪ್ರದೇಶ ಸರ್ಕಾರ!
-

Photo credit: ANI
ಲಕ್ನೊ: ಉತ್ತರ ಪ್ರದೇಶ ಸರಕಾರವು 35,000 ಕೋಟಿ ರೂ. ವೆಚ್ಚದಲ್ಲಿ ನಾಲೆಡ್ಜ್ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯದ ಜೊತೆ ಒಡಂಬಡಿಕೆ (ಎಂಒಯು)ಯನ್ನು ಮಾಡಿಕೊಂಡಿರುವುದಾಗಿ ಡಿ.18ರಂದು ಅಧಿಕೃತ ಹೇಳಿಕೆಯನ್ನು ನೀಡಿದೆ. ವಿದೇಶಗಳಿಂದ ಹೂಡಿಕೆಗಳನ್ನು ಆಕರ್ಷಿಸುವ ತನ್ನ ಇತ್ತೀಚಿನ ಪ್ರಯತ್ನಗಳ ಭಾಗವಾಗಿ ಸರಕಾರವು ಸಹಿ ಹಾಕಿರುವ ಹಲವಾರು ಒಡಂಬಡಿಕೆಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿಕೆಯು ಬಣ್ಣಿಸಿದೆ. ಆದರೆ ಸರಕಾರದ ಪ್ರಕಟಣೆಗೆ 10 ದಿನಗಳ ಮೊದಲೇ ವಿವಿಯ ಮಾನ್ಯತೆ ರದ್ದುಗೊಂಡಿರುವುದನ್ನು ಅಮೆರಿಕದ ಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ indianexpress.com ವರದಿ ಮಾಡಿದೆ.
ಈ ಕುರಿತು ಬುಧವಾರ ಸ್ಪಷ್ಟೀಕರಣ ನೀಡಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಮೂಲಸೌಕರ್ಯ ಮತ್ತು ಅಭಿವೃದ್ಧಿ) ಅರವಿಂದ್ ಕುಮಾರ್ ಅವರು, ಒಡಂಬಡಿಕೆಯನ್ನು ‘ಆಸ್ಟಿನ್ ಕನ್ಸಲ್ಟಿಂಗ್ ಗ್ರೂಪ್’ನೊಂದಿಗೆ ಮಾಡಿಕೊಳ್ಳಲಾಗಿದೆಯೇ ಹೊರತು ಆಸ್ಟಿನ್ ವಿವಿಯೊಂದಿಗಲ್ಲ ಎಂದು ತಿಳಿಸಿದ್ದಾರೆ.
ಈಜಿಪ್ಟ್ನ ರಾಜಮನೆತನಕ್ಕೆ ಸೇರಿದ ಅಮೆರಿಕನ್ ಪ್ರಜೆ ಎಂದು indianexpress.com ಜೊತೆ ಸಂದರ್ಶನದಲ್ಲಿ ತನ್ನನ್ನು ಬಣ್ಣಿಸಿಕೊಂಡಿರುವ ಅಷ್ರಫ್ ಅಲ್ ಮುಸ್ತಫಾ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯ ಹಾಗೂ ಆಸ್ಟಿನ್ ಕನ್ಸಲ್ಟಿಂಗ್ ಗ್ರೂಪ್ ಹಿಂದಿರುವ ವ್ಯಕ್ತಿಯಾಗಿದ್ದಾರೆ ಎಂದೂ ದಾಖಲೆಗಳು ತೋರಿಸಿವೆ.
ಕ್ಯಾಲಿಫೋರ್ನಿಯಾದ ಗ್ರಾಹಕ ಮತ್ತು ವ್ಯವಹಾರಗಳ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯಕ್ಕೆ ಮಾನ್ಯತೆರಹಿತ ಪ್ರೌಢಶಿಕ್ಷಣೋತ್ತ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು 2011ರಲ್ಲಿ ನೀಡಲಾಗಿದ್ದ ಅನುಮತಿಯನ್ನು ಡಿಸೆಂಬರ್ 8, 2022ರಂದು ರದ್ದುಗೊಳಿಸಲಾಗಿದೆ ಮತ್ತು ಅದಕ್ಕೆ 9965 ಡಾಲರ್ ದಂಡವನ್ನೂ ವಿಧಿಸಲಾಗಿದೆ.
ಇದಲ್ಲದೆ, ಅಮೆರಿಕಾ ಸರಕಾರದ ನಿಯಮಾವಳಿಗಡಿ ವಿವಿಯು 2016-2020ರ ನಡುವಿನ ತನ್ನ ಸಾಧನೆಯ ವಾಸ್ತವ ವರದಿಯನ್ನು ವಾಸ್ತವ ಸ್ಥಿತಿಯ ಪ್ರತಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅದರಂತೆ ತಾನು ಎಂಬಿಎ ಪದವಿ ತರಗತಿಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದೆಯಾದರೂ, ಆ ಕೋರ್ಸ್ಗೆ ಯಾವುದೇ ವಿದ್ಯಾರ್ಥಿ ನೋಂದಾಯಿಸಿಕೊಂಡಿಲ್ಲ.
‘ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಒಂದು ಹಾಗೂ ಈಜಿಪ್ಟ್ನಲ್ಲಿ ಇನ್ನೊಂದು ಯೋಜನೆಗಾಗಿ ಲಾಭಕ್ಕಾಗಿ ಕೆಲಸ ಮಾಡುವ ಆಸ್ಟಿನ್ ಕನ್ಸಲ್ಟಿಂಗ್ ಗ್ರೂಪ್ನ್ನು ಇತ್ತೀಚಿಗಷ್ಟೇ ಸ್ಥಾಪಿಸಿದ್ದೇನೆ. ನಾನು ಆಸ್ಟಿನ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷನೂ ಆಗಿದ್ದು, ಅದು ಲಾಭರಹಿತ ಸಂಸ್ಥೆಯಾಗಿದೆ. ಆದರೆ ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಇಂಡಿಯನ್ ಎಕ್ಸ್ಪ್ರೆಸ್ಗೆ ಮುಸ್ತಫಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರಕಾರವು ಒಡಂಬಡಿಕೆಯ ಪ್ರಕಟಣೆಯೊಂದಿಗೆ ಹಂಚಿಕೊಂಡಿರುವ ಚಿತ್ರಗಳು ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭದಲ್ಲಿ ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಮತ್ತು ಮಾಜಿ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರೊಂದಿಗೆ ಮುಸ್ತಫಾ ಉಪಸ್ಥಿತಿಯನ್ನು ತೋರಿಸಿವೆ.
San Francisco, US | UP Govt signed MoU with Austin University for a US$ 42 Bn project-Austin Smart City of Knowledge, in UP
— ANI UP/Uttarakhand (@ANINewsUP) December 18, 2022
UP Min Suresh Khanna, ex-min Sidharth Nath Singh, Addl Chief Secy, Infrastructure & Industrial Development Arvind Kumar&others were present on the occasion pic.twitter.com/lUXLDQ7W1v
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.