ಚೆನ್ನೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿಗಾಗಿ ಕಾದ ಬಿಜೆಪಿ ನಾಯಕಿ ಖುಷ್ಬೂ ಸುಂದರ್: ಟ್ವೀಟ್ ನಲ್ಲಿ ಆಕ್ರೋಶ
ಚೆನ್ನೈ: ಮೊಣಕಾಲು ಗಾಯ ಹೊಂದಿದ್ದ ತಮಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ಏರ್ಪಾಟು ಮಾಡಲು ಏರ್ ಇಂಡಿಯಾ ಸಂಸ್ಥೆಯು ವಿಳಂಬಿಸಿದ್ದರಿಂದ ತಾವು ಅಲ್ಲಿ 30 ನಿಮಿಷ ಕಾಯಬೇಕಾಯಿತು ಎಂದು ದೂರಿ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವೀಟ್ ಮಾಡಿ ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಮೊಣಕಾಲು ಗಾಯ ಹೊಂದಿದ್ದ ಪ್ರಯಾಣಿಕರೊಬ್ಬರನ್ನು ವಿಮಾನದ ತನಕ ಕರೆದೊಯ್ಯಲು ನಿಮ್ಮಲ್ಲಿ ಒಂದು ಗಾಲಿಕುರ್ಚಿ ಕೂಡ ಇಲ್ಲ. ನನ್ನ ಲಿಗಮೆಂಟ್ ಟೇರ್ನಿಂದಾಗಿ ಬ್ರೇಸಸ್ನೊಂದಿಗೆ ನಾನು 30 ನಿಮಿಷ ಕಾದೆ ನಂತರ ಇನ್ನೊಂದು ವಿಮಾನಯಾನ ಸಂಸ್ಥೆಯಿಂದ ಗಾಲಿಕುರ್ಚಿ ಎರವಲು ಪಡೆದು ನನಗೆ ನೀಡಲಾಯಿತು. ನೀವು ಇನ್ನೂ ಸುಧಾರಿಸಬೇಕೆಂಬುದು ಖಚಿತ," ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಕ್ಷಮೆಯಾಚಿಸಿದೆಯಲ್ಲದೆ ಈ ವಿಚಾರದ ಕುರಿತು ಚೆನ್ನೈ ವಿಮಾನ ನಿಲ್ದಾಣದಲ್ಲಿನ ತನ್ನ ತಂಡದ ಜೊತೆ ಮಾತನಾಡುವುದಾಗಿ ತಿಳಿಸಿದೆ.
Next Story