ಕೇಂದ್ರ ಬಜೆಟ್: ಹೊಸ ತೆರಿಗೆ ಪದ್ದತಿಯಲ್ಲಿ 7ಲಕ್ಷ ದವರೆಗೆ ತೆರಿಗೆ ವಿನಾಯಿತಿ
ಬಂಗಾರ, ಬೆಳ್ಳಿ, ವಜ್ರ, ರೆಡಿಮೆಡ್ ಬಟ್ಟೆ ದುಬಾರಿ
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2023-24ರ ಸಾಲಿನ ಬಜೆಟ್ ಮಂಡನೆಯನ್ನು ಬೆಳಗ್ಗೆ 11 ಗಂಟೆಗೆ ಆರಂಭಿಸಿದ್ದಾರೆ.ಅಮೃತ ಕಾಲದ ಮೊದಲ ಬಜೆಟ್ ಇದಾಗಿದೆ. ಭಾರತದ ಆರ್ಥಿಕತೆ ಸರಿದಾರಿಯಲ್ಲಿದೆ. ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ಸೀತಾರಾಮನ್ ಮಾತು ಆರಂಭಿಸಿದರು.
ಬಜೆಟ್ ಮುಖ್ಯಾಂಶಗಳು
*ಹೊಸ ತೆರಿಗೆ ಪದ್ದತಿಯಲ್ಲಿಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ.
*ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ದುಬಾರಿ
*ರೆಡಿಮೆಡ್ ಬಟ್ಟೆ, ಸಿಗರೇಟು ದುಬಾರಿ
*ವಿದೇಶಿ ವಾಹನಗಳ ಆಮದು ದುಬಾರಿ
*ಹಸಿರು ಕೃಷಿ ಯೋಜನೆಗೆ ಪ್ರಧಾನಿ ಪ್ರಣಾಮ್ ಯೋಜನೆ: ಪರ್ಯಾಯ ರಸಗೊಬ್ಬರಗಳನ್ನು ಬಳಸುವಂತೆ ರಾಜ್ಯಗಳನ್ನು ಉತ್ತೇಜಿಸಲು ಪಿಎಂ-ಪ್ರಣಾಮ್ ಎಂಬ ಕಾರ್ಯಕ್ರಮ ಜಾರಿಗೆ ತರಲಾಗುವುದು.
*ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು
*ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ
*ಆರ್ ಬಿಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ
*ಮಹಿಳಾ ಸಮ್ಮಾನ್ ಸೇವಿಂಗ್ ಪತ್ರ ಯೋಜನೆ ಜಾರಿ. ಈ ಯೋಜನೆಯಲ್ಲಿ 2 ಲಕ್ಷದವರಿಗೆ ಠೇವಣಿಗೆ ಅವಕಾಶ
*ಹಿರಿಯ ನಾಗರಿಕರಿಗೆ 15ರಿಂದ 30 ಲಕ್ಷ ಠೇವಣಿಗೆ ಅವಕಾಶ
*100 ನಿರ್ಣಾಯಕ ಯೋಜನೆಗಳು: ಸಾರಿಗೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದ 100 ನಿರ್ಣಾಯಕ ಯೋಜನೆಗಳ ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ.
ವಾಣಿಜ್ಯ ವಿವಾದ ಪರಿಹಾರ ಕಾರ್ಯಕ್ರಮ
ವಾಣಿಜ್ಯ ವಿವಾದಗಳ ಇತ್ಯರ್ಥಕ್ಕೆ ವಿವಾದ್ ಸೆ ವಿಶ್ವಾಸ್-2 ಅಡಿಯಲ್ಲಿ ವಿವಾದ ಪರಿಹಾರ ಕಾರ್ಯಕ್ರಮ ತರಲು ಸರಕಾರ ತೀರ್ಮಾನ
*47 ಲಕ್ಷ ಯುವಕರಿಗೆ ಕಲಿಕಾ ವೇತನ
*ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಆ್ಯಪ್
* ಪ್ರವಾಸೋದ್ಯಮದ ಸಮಗ್ರ ಮಾಹಿತಿ ಇರುವ ಆ್ಯಪ್
*2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣ ಗುರಿ
*ಮಾಲಿನ್ಯ ನಿಯಂತ್ರಣಕ್ಕೆ ಸರಕಾರದ ಹಳೆ ವಾಹನಗಳು ಗುಜರಿಗೆ, ಹೊಸ ಸರಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ
*ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ
*ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರ ಮೇಲ್ದಂಡೆಗೆ 5300 ಕೋ.ರೂ.
ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋ.ರೂ. ಕೇಂದ್ರದ ನೆರವು
*ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ.66ಕ್ಕೆ(79,000 ಕೋಟಿ)ಹೆಚ್ಚಿಸಲಾಗಿದೆ
* ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,000 ಶಿಕ್ಷಕರ ನೇಮಕ
*ಕೃತಕಬುದ್ದಿಮತ್ತೆ ಸೆಂಟರ್ ಗಳ ಸ್ಥಾಪನೆ
*ಆರೋಗ್ಯ, ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಸೆಂಟರ್
*ನಗರೋತ್ಥಾನಕ್ಕಾಗಿ 10 ಸಾವಿರ ಕೋ.ರೂ. ಮೀಸಲು
*ಎಂಎಸ್ಎಂ ಇ ಯೋಜನೆಗಳಿಗೆ ವಿವಾದ್ ಸೆ ವಿಶ್ವಾಸ ಯೋಜನೆ
*ಸರಕಾರಿ ನೌಕರರಿಗಾಗಿ ಮಿಷನ್ ಕರ್ಮಯೋಗಿ
*ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ
*ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ
*ದೇಶದ ಎಲ್ಲ ನಗರಗಳು ಮ್ಯಾನ್ ಹೋಲ್ ನಿಂದ ಮುಕ್ತ ಗುರಿ
*ದೇಶದಲ್ಲಿ 50 ಹೊಸ ಏರ್ ಪೋರ್ಟ್ ಗಳ ನಿರ್ಮಾಣ
*ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲು
*ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ
*ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋ.ರೂ.
ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ
*ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು ನೀಡಲಾಗುವುದು. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು.
*157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ
*ಮೀನುಗಾರಿಕೆಗೆ 6000 ಕೋ.ರೂ. ಮೀಸಲು
*ಹಿಂದಿನ ಬಜೆಟ್ನಲ್ಲಿ ಹಾಕಿದ ಅಡಿಪಾಯದ ಮೇಲೆ ಬಜೆಟ್ ನಿರ್ಮಿಸಲು ಆಶಿಸುತ್ತೇವೆ. ಅಭಿವೃದ್ಧಿಯ ಫಲಗಳು ಎಲ್ಲಾ ವರ್ಗಗಳನ್ನು ತಲುಪುವ ಸಮೃದ್ಧ, ಅಂತರ್ಗತ ಭಾರತವನ್ನು ನಾವು ಕಲ್ಪಿಸುತ್ತೇವೆ .
*ಈ ಬಾರಿಯ ಬಜೆಟ್ ಸಪ್ತ ಅಂಶಗಳಿರುತ್ತವೆ. ಕೃಷಿಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ
ಮುಂದಿನ 1 ವರ್ಷಕ್ಕೆ ಎಲ್ಲಾ ಆದ್ಯತೆಯ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆ ಜಾರಿ:
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, 80 ಕೋಟಿಗೂ ಹೆಚ್ಚು ಜನರಿಗೆ 28 ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗುವುದಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ಮುಂದಿನ 1 ವರ್ಷಕ್ಕೆ ಎಲ್ಲಾ ಅಂತೋದಯ ಮತ್ತು ಆದ್ಯತೆಯ ಮನೆಗಳಿಗೆ ಜನವರಿ 1, 2023 ರಿಂದ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯನ್ನು ನಾವು ಜಾರಿಗೊಳಿಸುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆಯು ಶೇಕಡಾ 7 ರಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಭಾರತೀಯ ಆರ್ಥಿಕತೆಯು ಸವಾಲುಗಳ ನಡುವೆಯೂ ಸರಿಯಾದ ಹಾದಿಯಲ್ಲಿದೆ ಎಂದು ಅವರು ಹೇಳಿದರು.