ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ
-

PHOTO : Rahul Gandhi \ Twitter
ಹೊಸದಿಲ್ಲಿ, ಫೆ. 7: ಅದಾನಿ (Adani) ಸಮೂಹ ಶೇರು ವಂಚನೆ ನಡೆಸಿರುವ ಕುರಿತ ಅಮೆರಿಕದ ಷೇರು ವಿಕ್ರಯ ಸಂಸ್ಥೆ ಹಿಂಡನ್ಬರ್ಗ್ ವರದಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಮಂಗಳವಾರ ಲೋಕಸಭೆಯಲ್ಲಿ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಅದಾನಿ ಸಮೂಹಕ್ಕೆ ಅನುಕೂಲಕರವಾಗಿ ವರ್ತಿಸುತ್ತಿದೆ. 2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಅವರ ಸ್ಥಾನ 609 ಆಗಿತ್ತು. ಈಗ ಕೇವಲ ಮ್ಯಾಜಿಕ್ನಿಂದ ಅವರು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ ಎಂದು ಅವರು ಹೇಳಿದರು. ವಿಮಾನ ನಿಲ್ದಾಣಗಳ ಸ್ವಾಧೀನಪಡಿಸಿಕೊಳ್ಳಲು ಅದಾನಿಗೆ ನೆರವು ನೀಡಲು ಮೋದಿ ಸರಕಾರ ನಿಯಮಗಳನ್ನೇ ಬದಲಾಯಿಸಿತು ಎಂದು ಅವರು ಆರೋಪಿಸಿದರು. ‘‘ವಿಮಾನ ನಿಲ್ದಾಣಗಳ ಬಗ್ಗೆ ಅನುಭವ ಇರುವ ಕಂಪೆನಿ/ವ್ಯಕ್ತಿಗಳಿಗೆ ಮಾತ್ರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹೊಣೆಗಾರಿಕೆ ನೀಡಬೇಕು ಎಂಬ ನಿಯಮವಿದೆ. ಆದರೆ, ಸರಕಾರ ಅದಾನಿ ಸಮೂಹಕ್ಕಾಗಿ ನಿಯಮವನ್ನು ಬದಲಾಯಿಸಿತು ಹಾಗೂ 6 ವಿಮಾನ ನಿಲ್ದಾಣಗಳನ್ನು ಅವರಿಗೆ ಹಸ್ತಾಂತರಿಸಿತು’’ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ಜೊತೆಯಾಗಿ ಪ್ರಯಾಣಿಸುತ್ತಿರುವ ಭಾವಚಿತ್ರವನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಅದಾನಿ ಜೊತೆಯಾಗಿ ಎಷ್ಟು ಬಾರಿ ಪ್ರಯಾಣಿಸಿದ್ದಾರೆ ಎಂದು ತಿಳಿಯ ಬಯಸುವುದಾಗಿ ಹೇಳಿದರು. ಪ್ರಧಾನಿ ಅವರು ಸಂಸತ್ತಿನಲ್ಲಿ ಬುಧವಾರ ಭಾಷಣ ಮಾಡುವ ಸಂದರ್ಭ ನಾನು ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬಯಸುತ್ತೇನೆ. ವಿದೇಶಿ ಪ್ರವಾಸದಲ್ಲಿ ಅದಾನಿ ಅವರು ಎಷ್ಟು ಬಾರಿ ನಿಮ್ಮೆಂದಿಗೆ ಜೊತೆಯಾಗಿದ್ದರು? ನೀವು ವಿದೇಶದಲ್ಲಿ ಇಳಿದಾಗ ಎಷ್ಟು ಬಾರಿ ಅವರು ನಿಮ್ಮನ್ನು ಭೇಟಿಯಾದರು? ನೀವು ಭೇಟಿ ನೀಡಿದ ಬಳಿಕ ವಿದೇಶದಲ್ಲಿ ಅದಾನಿ ಎಷ್ಟು ಬಾರಿ ಗುತ್ತಿಗೆಯನ್ನು ಪಡೆದುಕೊಂಡರು ? ಎಂದು ಅವರು ಪ್ರಶ್ನಿಸಿದರು.
ಬಂದರು, ವಿಮಾನ ನಿಲ್ದಾಣ ಹಾಗೂ ರಕ್ಷಣೆ ಸೇರಿದಂತೆ ಅದಾನಿ ಅವರು ಈಗ ಹಲವು ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ನಾನು ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದ ಸಂದರ್ಭ, ಅದಾನಿ ಅವರ ಆಸ್ತಿ ಮೌಲ್ಯ 2014ರಲ್ಲಿ 8 ಶತಕೋಟಿ ಡಾಲರ್ ಇದ್ದುದು 2022ರಲ್ಲಿ 140 ಶತಕೋಟಿ ಡಾಲರ್ಗೆ ಹೇಗೆ ತಲುಪಿತು ಎಂದು ಯುವಜನರು ನನ್ನನ್ನು ಪ್ರಶ್ನಿಸಿದರು. ಈ ರೀತಿ ಉನ್ನತ ಮಟ್ಟಕ್ಕೆ ಏರಲು ಅದಾನಿ ಅವರ ಹಿಂದಿರುವ ಯಶಸ್ವಿ ಸೂತ್ರ ಯಾವುದು ಎಂದು ನಾವು ತಿಳಿಯಲು ಯುವಜನರು ಆಶಿಸಿದ್ದಾರೆ ಎಂದರು.
ತಮಿಳುನಾಡು, ಕೇರಳದಿಂದ ಹಿಮಾಚಲಪ್ರದೇಶದ ವರೆಗೆ ಎಲ್ಲೆಲ್ಲಿಯೂ ನಾವು ಅದಾನಿ ಎಂಬ ಒಂದೇ ಹೆಸರು ಕೇಳಿದ್ದೇವೆ. ದೇಶಾದ್ಯಂತ ಕೇವಲ ಅದಾನಿ, ಅದಾನಿ, ಅದಾನಿ..’’. ಅದಾನಿ ಅವರು ಯಾವುದೇ ಉದ್ಯಮಕ್ಕೆ ಪ್ರವೇಶಿಸಿದರೆ ವಿಫಲರಾಗದೇ ಇರುವುದರ ಬಗ್ಗೆ ಜನರು ಆಗಾಗ ನನ್ನನ್ನು ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧದ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ ಮರು ದಿನ ಎಸ್ಬಿಐ ಅದಾನಿಗೆ 1 ದಶಲಕ್ಷ ಡಾಲರ್ ಸಾಲ ನೀಡಿದೆ. ಅನಂತರ ಪ್ರಧಾನಿ ಅವರು ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಿದರು. ಬಾಂಗ್ಲಾದೇಶದ ವಿದ್ಯುಚ್ಛಕ್ತಿ ಅಭಿವೃದ್ಧಿ ಮಂಡಳಿ ಅದಾನಿ ಅವರೊಂದಿಗೆ 25 ವರ್ಷಗಳ ಗುತ್ತಿಗೆಗೆ ಸಹಿ ಹಾಕಿತು ಎಂದು ರಾಹುಲ್ ಗಾಂಧಿ ಹೇಳಿದರು.
‘‘ಅಗ್ನಿವೀರ್ ಕಲ್ಪನೆ ಆರ್ಎಸ್ಎಸ್ನಿಂದ ಬಂದಿದೆ ಹಾಗೂ ಸೇನೆಯ ಮೇಲೆ ಹೇರಿದಂತೆ ಕಾಣುತ್ತದೆ’’ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ‘‘ಅಗ್ನಿವೀರ್ ಯೋಜನೆ ಸೇನೆಯಿಂದ ಹುಟ್ಟಿಕೊಂಡಿಲ್ಲ. ಅದನ್ನು ಎನ್ಎಸ್ಎ ದೋವಲ್ ಸೇನೆಯ ಮೇಲೆ ಹೇರಿದ್ದಾರೆ ಎಂದು ನಿವೃತ್ತ ಸೈನಿಕರು ಹೇಳಿದ್ದಾರೆ. ಅಗ್ನಿವೀರ್ ಯೋಜನೆ ರಾಷ್ಟ್ರಪತಿ ಭಾಷಣದಲ್ಲಿ ಒಮ್ಮೆ ಮಾತ್ರ ಪ್ರಸ್ತಾವವಾಗಿದ್ದು ಹೇಗೆ ? ನಿರುದ್ಯೋಗ ಹಾಗೂ ಹಣದುಬ್ಬರ ಮುಂತಾದ ಪದಗಳು ಅಲ್ಲಿ ಯಾಕೆ ಪ್ರಸ್ತಾವವಾಗಿಲ್ಲ ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಅದಾನಿ ಅವರಿಗೆ ಯಾವುದೇ ಅನುಭವ ಇಲ್ಲ. ಅದಾನಿ ಯಾವತ್ತೂ ಡ್ರೋನ್ಗಳನ್ನು ನಿರ್ಮಿಸಿಲ್ಲ. ಆದರೆ, ಎಚ್ಎಎಲ್ ಹಾಗೂ ಇತರ ಕಂಪೆನಿಗಳು ಡ್ರೋನ್ಗಳನ್ನು ನಿರ್ಮಿಸಿವೆ. ಇದರ ಹೊರತಾಗಿಯೂ ಅದಾನಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಗುತ್ತಿಗೆ ಪಡೆದುಕೊಂಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.