ಭಾರತವನ್ನು ಹಿಂದೂರಾಷ್ಟ್ರ ಮಾಡಲು 'ಮಹಾಯಜ್ಞ' ಆರಂಭಿಸಿರುವ ಧೀರೇಂದ್ರ ಶಾಸ್ತ್ರಿಯನ್ನು ಭೇಟಿಯಾದ ಕಮಲ್ ನಾಥ್
ಹೊಸದಿಲ್ಲಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡಲು 'ಮಹಾಯಜ್ಞ' ಆರಂಭಿಸಿರುವ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಆಚಾರ್ಯ ಧೀರೇಂದ್ರ ಶಾಸ್ತ್ರಿಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸೋಮವಾರ ಭೇಟಿಯಾಗಿದ್ದಾರೆ.
ಭಾಗೇಶ್ವರ ಧಾಮಕ್ಕೆ ಭೇಟಿ ನೀಡಿರುವ ಕಮಲ್ ನಾಥ್ ರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿದೆ. 9 ಬಾರಿಯ ಸಂಸದ ಕಮಲ್ ನಾಥ್ ಹಿಂದುತ್ವವಾದಿ ಸ್ವಾಮಿಯನ್ನು ಭೇಟಿಯಾಗಿರುವುದರ ಬಗ್ಗೆ ಅಪಸ್ವರಗಳೆದ್ದಿವೆ.
ಮೌಢ್ಯ ಹಾಗೂ ದ್ವೇಷವನ್ನು ಪ್ರಚೋದಿಸುವ ವಿವಾದಾತ್ಮಕ ವ್ಯಕ್ತಿಯಾಗಿರುವ ಆಚಾರ್ಯ ಧೀರೇಂದ್ರ ಶಾಸ್ತ್ರಿಯನ್ನು ಕಮಲ್ ನಾಥ್ ಭೇಟಿಯಾಗಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿದೆ.
MP : छतरपुर में बागेश्वर धाम से मिलने पहुंचे कांग्रेस नेता कमलनाथ
— News24 (@news24tvchannel) February 13, 2023
आज से बागेश्वर धाम के आचार्य धीरेंद शास्त्री ने हिंदू राष्ट्र के लिए महायज्ञ शुरू किया है@JournalistVipin | @OfficeOfKNath pic.twitter.com/qdwp55wsT3