ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ ಗದ್ದಲ: ಕುಸಿದು ಬಿದ್ದ ಆಪ್ ಕೌನ್ಸಿಲರ್
ಬಿಜೆಪಿ ಗೂಂಡಾಗಳ ಕೆಲಸ ಎಂದ ಆಮ್ ಆದ್ಮಿ ಪಕ್ಷ
ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಶಾಸಕರ ನಡುವೆ ವಾದ ವಿವಾದ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತ ತಲುಪಿದ್ದು, ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಓರ್ವರು ಈ ವೇಳೆ ಕುಸಿದು ಬಿದ್ದ ಘಟನೆ ನಡೆದಿದೆ. ಉಭಯ ಪಕ್ಷಗಳ ಮುಖಂಡರ ನಡುವಿನ ಗದ್ದಲ ಹೆಚ್ಚಾಗಿದ್ದ ಕಾರಣಕ್ಕೆ ನಿನ್ನೆಯೂ ಸಭೆಯನ್ನು ಮುಂದೂಡಲಾಗಿತ್ತು.
ಶುಕ್ರವಾರ ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ನಡೆಸಲು ನಿರ್ಧಾರ ಮಾಡಲಾಗಿತ್ತು. ಈ ವೇಳೆ ವಾದವಿವಾದಗಳು ತಾರಕಕ್ಕೇರಿದ್ದು, ಕೈಕೆ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎಂದು ವರದಿಯಾಗಿದೆ. ಈ ವೇಳೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಅಶೋಕ್ ಮಾನು ಕುಸಿದು ಬಿದ್ದು, ಬಳಿಕ ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಬಿಜೆಪಿಯ ಗೂಂಡಾಗಳು ಈ ಕೃತ್ಯವೆಸಗಿದ್ದಾರೆ. ಅವರು ಮಹಿಳೆಯರು ಮತ್ತು ಮೇಯರ್ ಮೇಲೈ ದಾಳಿ ನಡೆಸಿದ್ದಾರೆ. ಅವರು ನಾಚಿಕೆ ಇಲ್ಲದವರು" ಎಂದು ಮಾಶ್ಯಮಗಳ ಮುಂದೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | Delhi: AAP Councillor, Ashok Kumar Maanu who collapsed at Delhi Civic Centre minutes back, appears before media with other Councillors of his party.
— ANI (@ANI) February 24, 2023
They say, "They are so shameless that they attacked even women and the Mayor. BJP goons did this." pic.twitter.com/dbz4xE8FW9