ತನ್ನನ್ನು ಅಪಹರಿಸಿ ಹತ್ಯೆ ಮಾಡುವುದೇ ಪಾಕಿಸ್ತಾನ ಪೊಲೀಸರ ನಿಜವಾದ ಉದ್ದೇಶವಾಗಿತ್ತು: ಇಮ್ರಾನ್ ಖಾನ್
ಲಾಹೋರ್: ತನ್ನನ್ನು ಅಪಹರಿಸಿ ಹತ್ಯೆ ಮಾಡುವುದೇ ಪಾಕಿಸ್ತಾನ ಪೊಲೀಸರ ನಿಜವಾದ ಉದ್ದೇಶವಾಗಿದ್ದು, ಬಂಧನದ ಯೋಜನೆ ಕೇವಲ ನಾಟಕವಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಂದು ಆರೋಪಿಸಿದ್ದಾರೆ.
ಖಾನ್ ಅವರ ಬೆಂಬಲಿಗರು ಖಾನ್ ಅವರನ್ನು ಲಾಹೋರ್ ನಿವಾಸದಿಂದ ಬಂಧಿಸುವ ಪೊಲೀಸರ ಪ್ರಯತ್ನಗಳನ್ನು ತಡೆದ ನಂತರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕ ಟ್ವಿಟರ್ ಪೋಸ್ಟ್ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು,ಅದಕ್ಕೆ ಅವರು ಜಲ ಫಿರಂಗಿ ಪ್ರಯೋಗಿಸಿದರು. ಖಾನ್ ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದಿದೆ.
ಖಾನ್ ಇಂದು ಬುಲೆಟ್ ಶೆಲ್ಗಳ ದೃಶ್ಯಗಳನ್ನು ಟ್ವೀಟ್ ಮಾಡಿದ್ದು, ಪೊಲೀಸರ
"ಉದ್ದೇಶ" ವನ್ನು ಇದು ಸಾಬೀತುಪಡಿಸಿದೆ ಎಂದರು.
Clearly "arrest" claim was mere drama because real intent is to abduct & assassinate. From tear gas & water cannons, they have now resorted to live firing. I signed a surety bond last evening, but the DIG refused to even entertain it. There is no doubt of their mala fide intent. pic.twitter.com/5LZtZE8Ies
— Imran Khan (@ImranKhanPTI) March 15, 2023