ಉತ್ತರಪ್ರದೇಶ: ಖಾಸಗಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಮುಸ್ಲಿಮರನ್ನು ತಡೆದ ಬಜರಂಗದಳ
ಮೊರಾದಾಬಾದ್; ಬಜರಂಗದಳ ಸದಸ್ಯರು ಶನಿವಾರ ಉತ್ತರ ಪ್ರದೇಶದ ಮೊರಾದಾಬಾದ್ ನಗರದ ವೇರ್ಹೌಸ್ ಒಂದರ ಒಳಗಡೆ ರಂಝಾನ್ ಸಂದರ್ಭ ಪ್ರಾರ್ಥನೆ ಸಲ್ಲಿಸುವುದರಿಂದ ಮುಸ್ಲಿಮರನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾರ್ಥನೆ ನಡೆಯುವ ಕುರಿತು ನಗರದ ಲಾಜಪತ್ ಪ್ರದೇಶದ ನಿವಾಸಿಗಳಿಂದ ತಮಗೆ ದೂರು ಬಂದಿತ್ತು ಎಂದು ಮೊರಾದಾಬಾದ್ ಹೇಳಿದ್ದರು. ಪೊಲೀಸರ ಉಪಸ್ಥಿತಿಯಲ್ಲಿ ಈ ಪ್ರಾರ್ಥನಾ ಸಭೆ ನಡೆಸಲು ಅನುಮತಿಸಲಾಗಿದ್ದರೂ, ಪ್ರದೇಶದ ಮುಸ್ಲಿಮರಿಗೆ ಪ್ರಾರ್ಥನೆಗಳನ್ನು ತಮ್ಮ ಮನೆಗಳು ಅಥವಾ ಧಾರ್ಮಿಕ ಸ್ಥಳಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಮ್ಮ ವೇರ್ಹೌಸ್ನಲ್ಲಿ ಈ ಪ್ರಾರ್ಥನಾ ಸಭೆ ಆಯೋಜಿಸಿದ್ದ ಝಾಕಿರ್ ಹುಸೈನ್ ಎಂಬವರು ಪೊಲೀಸರಿಗೆ ಲಿಖಿತ ಹೇಳಿಕೆ ಸಲ್ಲಿಸಿ ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸದೇ ಇರುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ನಿವಾಸದಲ್ಲಿ ಪ್ರಾರ್ಥನಾ ಸಭೆಗಳನ್ನು ಆಯೋಜಿಸುವ ಮೂಲಕ ಹುಸೈನ್ ಹೊಸ ಸಂಪ್ರದಾಯ ಆರಂಭಿಸಿದ್ದರು ಎಂದು ಬಜರಂಗದಳ ಆರೋಪಿಸಿದೆ. ಈ ಪ್ರಾರ್ಥನಾ ಸಭೆಯ ಬಗ್ಗೆ ತಿಳಿದು ಬಂದ ನಂತರ ಬಜರಂಗದಳ ಮತ್ತು ಸ್ಥಳೀಯರು ಮಧ್ಯಪ್ರವೇಶಿಸಿದ್ದರು ಎಂದು ಬಜರಂಗದಳ ರಾಜ್ಯ ಘಟಕದ ಅಧ್ಯಕ್ಷ ರೋಹನ್ ಸಕ್ಸೇನಾ ಹೇಳಿದ್ದಾರೆ.
ಪೊಲೀಸರು ಎಫ್ಐಆರ್ ದಾಖಲಿಸಲು ವಿಫಲರಾದರೆ ಪ್ರತಿಭಟನೆ ನಡೆಸುವುದಾಗಿಯೂ ಬಜರಂಗದಳ ಎಚ್ಚರಿಕೆ ನೀಡಿದೆ.