ಜೋಸ್ ಅಲುಕ್ಕಾಸ್ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ನಟ ಆರ್. ಮಾಧವನ್ ನೇಮಕ
-

ಜೋಸ್ ಅಲುಕ್ಕಾಸ್ ಗ್ರೂಪ್ನ ಬ್ರಾಂಡ್ ಅಂಬಾಸಿಡರ್ಗಳಾಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ನಟ ಆರ್. ಮಾಧವನ್ ಮತ್ತು ನಟಿ ಕೀರ್ತಿ ಸುರೇಶ್ ಅವರೊಂದಿಗೆ ಜೋಸ್ ಅಲುಕ್ಕಾಸ್ ಆಭರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳಾದ ವರ್ಗೀಸ್ ಅಲುಕ್ಕಾ, ಪೌಲ್ ಜೆ ಅಲುಕ್ಕಾ ಮತ್ತು ಜಾನ್ ಅಲುಕ್ಕಾ
ಮುಂಬೈ: ದೇಶದ ಮುಂಚೂಣಿ ಆಭರಣ ಸಂಸ್ಥೆಯಾಗಿ ಬೆಳೆದಿರುವ ಜೋಸ್ ಅಲುಕ್ಕಾಸ್ನ ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಲು ದಕ್ಷಿಣ ಭಾರತದ ಪ್ರಸಿದ್ಧ ನಟ ಆರ್.ಮಾಧವನ್ ಈ ಸಂಸ್ಥೆಯ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಜನಪ್ರಿಯ ನಟಿ ಕೀರ್ತಿ ಸುರೇಶ್ ಅವರು ಈ ಪ್ರಮುಖ ಆಭರಣ ಸಮೂಹದ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯಲಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ಇಬ್ಬರೂ ಸಿನಿಮಾ ಕಲಾವಿದರು ಒಪ್ಪಂದಕ್ಕೆ ಜೋಸ್ ಅಲುಕ್ಕಾಸ್ ಜತೆ ಸಹಿ ಹಾಕಿದ್ದಾರೆ.
ಭಾರತದಾದ್ಯಂತ ನಮ್ಮ ಆಭರಣ ಸಮೂಹದ ಬ್ರಾಂಡ್ ಫಿಲಾಸಫಿಯನ್ನು ಪಸರಿಸುವ ಉದ್ದೇಶದಿಂದ
ಮಾಧವನ್ ಅವರನ್ನು ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಜೋಸ್ ಅಲುಕ್ಕಾಸ್ ಮೂಲಗಳು ತಿಳಿಸಿವೆ.
ಜೋಸ್ ಅಲುಕ್ಕಾಸ್ ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಯೋಜನೆಗಳನ್ನು ಹೊಂದಿದೆ. ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಅವರು ಜೋಸ್ ಅಲುಕ್ಕಾಸ್ನ ಚಿನ್ನ ಮತ್ತು ವಜ್ರದ ಆಭರಣಗಳ ಬ್ರಾಂಡ್ಗಳನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ ಎಂದು ಸಮೂಹದ ಅಧ್ಯಕ್ಷ ಜೋಸ್ ಅಲುಕ್ಕಾ ಹೇಳಿದರು.
ಕಳೆದ 58 ವರ್ಷಗಳಿಂದ ಬದ್ಧತೆಯ ಸಮರ್ಪಣೆ ಮತ್ತು ನೀತಿಗಳ ಬಲವಾದ ಸ್ತಂಭಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ಜೋಸ್ ಅಲುಕ್ಕಾಸ್ ಸಮೂಹದ ಭವಿಷ್ಯದ ಅಭಿಯಾನಗಳಿಗೆ ಇಬ್ಬರೂ ತಾರೆಯರು ತಮಗೆ ಸಿಕ್ಕಿರುವ ತಾರಾ ವರ್ಚಸ್ಸನ್ನು ಕೊಡುಗೆಯಾಗಿ ನೀಡುವ ನಿರೀಕ್ಷೆಯಿದೆ. ಜೋಸ್ ಅಲುಕ್ಕಾಸ್ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಪುದುಚೇರಿಯಲ್ಲಿ ಚಿನ್ನಾಭರಣಗಳ ವ್ಯವಹಾರವನ್ನು ನಿರಂತರವಾಗಿ ಮುನ್ನಡೆಸುತ್ತಿದೆ.
ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಆರ್. ಮಾಧವನ್ ಅವರು ವ್ಯವಹಾರದಲ್ಲಿ ಪ್ರಾಮಾಣಿಕತೆ ಪದಕ್ಕೆ ಸಮಾನಾರ್ಥಕವಾಗಿ ನಿಲ್ಲುವ ಬ್ರಾಂಡ್ನೊಂದಿಗೆ ಸಹಕರಿಸಲು ಸಂತೋಷವಾಗಿದೆ ಎಂದು ಹೇಳಿದರು.
"ಇಂದಿನ ಆಧುನಿಕ ಹೊಸ ಜಮಾನಾದಲ್ಲಿ ಹೆಚ್ಚುತ್ತಿರುವ ಮಹಿಳೆಯರ ವಿಭಿನ್ನ ವಿನ್ಯಾಸದ ಆಭರಣಗಳ ಬೇಡಿಕೆಗಳನ್ನು ಜೋಸ್ ಅಲುಕ್ಕಾಸ್ ಈಡೇರಿಸುತ್ತದೆ’’ ಎಂದು ನಟಿ ಕೀರ್ತಿ ಸುರೇಶ್ ನುಡಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೋಸ್ ಅಲುಕ್ಕಾಸ್ನ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಅಲುಕ್ಕಾ, ಪೌಲ್ ಜೆ ಅಲುಕ್ಕಾ ಮತ್ತು ಜಾನ್ ಅಲುಕ್ಕಾ ಅವರು ಈ ಒಪ್ಪಂದ ಪತ್ರವನ್ನು ಕಲಾವಿದರಿಬ್ಬರಿಗೆ ಹಸ್ತಾಂತರಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.