ಬೈಸಾಕಿಯಂದು ಸಿಕ್ಖ್ ಸಮಾವೇಶಕ್ಕೆ ಕರೆ ನೀಡಿದ ಅಮೃತ್ಪಾಲ್!
-

ಹೊಸದಿಲ್ಲಿ: ಖಲಿಸ್ತಾನ್ ಪ್ರತಿಪಾದಕ ಅಮೃತ್ಪಾಲ್, ಈ ತಿಂಗಳ 14ರಂದು ಬೈಸಾಕಿ ಹಬ್ಬದ ಸಂದರ್ಭ ಪಂಜಾಬ್ನ ತಲವಂಡಿ ಸಾಬೋದಲ್ಲಿರುವ ದಮ್ದಮಾ ಸಾಹಿಬ್ನಲ್ಲಿ ಸರ್ಬತ್ ಖಾಲ್ಸಾ (ಸಿಕ್ಖ್ ಸಮಾವೇಶ) ಆಯೋಜಿಸುವಂತೆ ಅಕಾಲ್ ತಖ್ತ್ ಜಾತೇದಾರ್ಗೆ ಕರೆ ನೀಡಿರುವ ವಿಡಿಯೊ ಬುಧವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಾತೇದಾರ್ ಜ್ಞಾನಿ ಹರ್ಪ್ರೀತ್ ಸಿಂಗ್ ಅವರು "ಅತ್ಯಂತ ಕಠಿಣ ನಿಲುವು" ತೆಗೆದುಕೊಳ್ಳಬೇಕು ಮತ್ತು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಕ್ಖರು ದೊಡ್ಡ ಸಂಖ್ಯೆಯಲ್ಲಿ ಸರ್ಬತ್ ಖಾಲ್ಸಾದಲ್ಲಿ ಭಾಗವಹಿಸಬೇಕು ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ. ಮಾರ್ಚ್ 18ರಿಂದ ಪೊಲೀಸರು ಅಮೃತ್ಪಾಲ್ ಹಾಗೂ ಅವರ ನಾಯಕತ್ವದ ಪಂಜಾಬ್ ಡೇ ಗ್ರೂಪ್ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಡೀ ಸಮುದಾಯದ ಭಾವನೆಗಳನ್ನು ಒಗ್ಗೂಡಿಸುವ ಪ್ರಯತ್ನ ಇದು ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೃತ್ಸರ ಸಮೀಪ 2015ರಲ್ಲಿ ಸರ್ಬತ್ ಖಾಲ್ಸಾ ಆಯೋಜಿಸಿದ್ದ ಜರ್ನೈಲ್ ಸಿಂಗ್ ಸಖೀರಾ ಈ ಈ ಬಗ್ಗೆ ಪ್ರತಿಕ್ರಿಯಿಸಿ, "ಏಕ ವ್ಯಕ್ತಿ ಸರ್ಬತ್ ಖಾಲ್ಸಾಗೆ ಕರೆ ನೀಡುವಂತಿಲ್ಲ. ಇದು ನಡೆದು ಬಂದಿರುವ ಸಂಪ್ರದಾಯಕ್ಕೆ ವಿರೋಧ" ಎಂದು ಹೇಳಿದ್ದಾರೆ. ಅಮೃತ್ಪಾಲ್ ಜತೆ ಗುರುತಿಸಿಕೊಂಡ 360 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಅಮೃತ್ಪಾಲ್ ತಪ್ಪಿಸಿಕೊಂಡಿದ್ದಾರೆ.
ಈಗಾಗಲೇ ಬಂಧಿಸಿರುವ ಎಲ್ಲ ಅಮೃತ್ಪಾಲ್ ಬೆಂಬಲಿಗರನ್ನು ಬಿಡುಗಡೆ ಮಾಡಲು 24 ಗಂಟೆಗಳ ಗಡುವು ವಿಧಿಸಿ ವಿಶ್ವ ಸಿಕ್ಖ್ ಸಂಘಟನೆಯಾದ ಅಕಾಲ್ ತಖ್ತ್ ಜಾತೇದಾರ್ ಪಂಜಾಬ್ ಸರ್ಕಾರವನ್ನು ಆಗ್ರಹಿಸಿದೆ. ಪೊಲೀಸರು ಬಂಧಿಸಿರುವ 360 ಮಂದಿಯ ಪೈಕಿ 348 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಉಳಿದವರನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
#BREAKING: Khalistani Radical Amritpal Singh releases a new video from hiding in Punjab. Requests Jathedar of Akal Takht to call Sarbad Khalsa (congregation of Sikhs) to discuss issues to save Punjab. Dares Punjab CM Bhagwant Mann and Punjab Police.
— Aditya Raj Kaul (@AdityaRajKaul) March 29, 2023
pic.twitter.com/vhcDN1lBaE
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.