ಮಹಾರಾಷ್ಟ್ರದಲ್ಲಿ ಸರಕಾರಿ ಪ್ರಾಯೋಜಿತ ಗಲಭೆ: ಸಂಜಯ್ ರಾವತ್ ಆರೋಪ
ಮುಂಬೈ: ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಮಹಾರಾಷ್ಟ್ರದಲ್ಲಿ ಸರಕಾರ, ಪೊಲೀಸ್ ಹಾಗೂ ಆಡಳಿತದ ಅನುಪಸ್ಥಿತಿಯೇ ಕಾರಣ ಎಂದು ರಾಜ್ಯಸಭಾ ಸಂಸದ ಹಾಗೂ ಉದ್ಧವ್ ಸೇನಾ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ. ಇವು ಸರಕಾರಿ ಪ್ರಾಯೋಜಿತ ಗಲಭೆಗಳಾಗಿವೆ ಎಂದು ಅವರು ದೂಷಿಸಿದರು.
''ಮಹಾರಾಷ್ಟ್ರದಲ್ಲಿ ಸರಕಾರ, ಪೊಲೀಸ್, ಗೃಹ ಸಚಿವರಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿದೆ, ಸಿಎಂ, ಗೃಹ ಸಚಿವರು ಎಲ್ಲಿದ್ದಾರೆ? ಸಂಭಾಜಿನಗರದಲ್ಲಿ ಅ.2ರಂದು ಮಹಾವಿಕಾಸ ಅಘಾಡಿ ರ್ಯಾಲಿ ಇದ್ದ ಕಾರಣ ಅನಾವಶ್ಯಕ ಗಲಭೆ ನಡೆದಿದೆ. ಇದು ಸರಕಾರ ಪ್ರಾಯೋಜಿತ ಗಲಭೆ" ಎಂದು ರಾವುತ್ ಹೇಳಿದರು.
महाराष्ट्र में कानून व्यवस्था की समस्या है क्योंकि यहां सरकार, पुलिस, गृह मंत्री का अस्तित्व नहीं है। कहां हैं CM व गृहमंत्री? संभाजीनगर में बेवजह दंगा इसलिए हुआ क्योंकि 2 अप्रैल को वहां महाविकास अघाड़ी की एक रैली है। यह सरकार प्रायोजित दंगा है: उद्धव ठाकरे गुट के नेता संजय राउत pic.twitter.com/tW7wl5BtKF
— ANI_HindiNews (@AHindinews) March 31, 2023