Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಾಕಿಸ್ತಾನದಲ್ಲಿ ಅತ್ಯಾಚಾರ ಭೀತಿಯಿಂದ...

ಪಾಕಿಸ್ತಾನದಲ್ಲಿ ಅತ್ಯಾಚಾರ ಭೀತಿಯಿಂದ ಸಮಾಧಿಗಳಿಗೆ ಬೀಗ ಹಾಕಲಾಗಿದೆ ಎಂದು ಸುಳ್ಳು ವರದಿ ಮಾಡಿದ ಮಾಧ್ಯಮಗಳು: ನಿಜವೇನು?

30 April 2023 10:52 PM IST
share
ಪಾಕಿಸ್ತಾನದಲ್ಲಿ ಅತ್ಯಾಚಾರ ಭೀತಿಯಿಂದ ಸಮಾಧಿಗಳಿಗೆ ಬೀಗ ಹಾಕಲಾಗಿದೆ ಎಂದು ಸುಳ್ಳು ವರದಿ ಮಾಡಿದ ಮಾಧ್ಯಮಗಳು: ನಿಜವೇನು?

ಹೈದರಾಬಾದ್: ಸಮಾಧಿಗಳಿಗೆ ಬೀಗ ಜಡಿದಿರುವ ಚಿತ್ರವೊಂದು ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಶವವನ್ನು ಅತ್ಯಾಷಾರ ಮಾಡುವ ಭೀತಿಯಿಂದಾಗಿ, ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗಳಿಗೆ ಬೀಗ ಜಡಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ. 

 ANI, Ndtv, times now ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು, ಹಾಗೂ ಪ್ರಾದೇಶಿಕ ಮಾಧ್ಯಮಗಳು ಇದೇ ಪ್ರತಿಪಾದನೆಯೊಂದಿಗೆ ವರದಿ ಮಾಡಿವೆ.  ANI ಟ್ವಿಟರ್ ಖಾತೆದಾರರೊಬ್ಬರು ಹಾಕಿರುವ ಟ್ವೀಟ್ ಆಧಾರದಲ್ಲಿ ವರದಿ ಮಾಡಿದ್ದರೆ, Times of India ಸೇರಿದಂತೆ ಬಹುತೇಕ ಉಳಿದ ಮಾಧ್ಯಮಗಳು ANI ವರದಿಯನ್ನು ಆಧರಿಸಿ ವರದಿ ಮಾಡಿವೆ. 
 


TV9 Kannada, Mirror Now, ThePrint, India Today, Wion, IndiaTV, Times Now, DNA India, OpIndia Hindi, News24, ABP News, Amar Ujala, News18, Firstpost ಮತ್ತು Jagran ಸೇರಿದಂತೆ ಇತರೆ ಮಾಧ್ಯಮಗಳು ತಮ್ಮ ತಮ್ಮ ವರದಿಗಳಲ್ಲಿ ಇದೇ ಚಿತ್ರವನ್ನು ಬಳಸಿಕೊಂಡಿವೆ.  

Photo: Twitter/Zoo_bear

ಈ ಟ್ವೀಟ್ ಅನ್ನು ಇಸ್ಲಾಂ ಧರ್ಮ 'ವಿಮರ್ಷಕ', ಲೇಖಕ ಹಾರಿಸ್ ಸುಲ್ತಾನ್ ಮಾಡಿದ್ದು, ಪಾಕಿಸ್ತಾನದ ಸಮಾಜವು ಶವ ಸಂಭೋಗಿಸುವಂತಹ ಹತಾಶ ಲೈಂಗಿಕತೆಯನ್ನು ಸೃಷ್ಟಿಸಿದೆ ಎಂದು ಬರೆದಿದ್ದರು. ಬಹುತೇಕ ಮಾಧ್ಯಮಗಳು ಈ ಟ್ವೀಟ್ ಅನ್ನು ತಮ್ಮ ವರದಿಗಳಲ್ಲಿ ಬಳಸಿತ್ತು. 

ಫ್ಯಾಕ್ಟ್ ಚೆಕ್

ಈ ಸುದ್ದಿಯ ಸತ್ಯಾಸತ್ಯತೆಯನ್ನು Altnews.in ಮಾಡಿದ್ದು, ಮಾಧ್ಯಮಗಳು ಬಳಸಿದ ಈ ಸಮಾಧಿಯ ಚಿತ್ರ ಪಾಕಿಸ್ತಾನದ್ದು ಅಲ್ಲ ಎಂದು ತಿಳಿದು ಬಂದಿದೆ.  ವಾಸ್ತವವಾಗಿ, ಈ ಚಿತ್ರ ಭಾರತದ್ದಾಗಿದ್ದು, ಹೈದರಾಬಾದ್ ನ ಮುಸ್ಲಿಂ ದಫನಭೂಮಿಯ ಸಮಾಧಿಯಾಗಿದೆ.

ಈ ದಫನ ಭೂಮಿಯು ಹೈದರಾಬಾದ್‌ನ ಮಾದನ್ನಪೇಟೆಯ ದರಾಬ್ ಜಂಗ್ ಕಾಲೋನಿಯಲ್ಲಿರುವ ಮಸೀದಿ ಇ ಸಲಾರ್ ಮುಲ್ಕ್ ಎದುರಿನಲ್ಲಿ ಇದೆ ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. 
  
ಆಲ್ಟ್ ನ್ಯೂಸ್ ಹೈದರಾಬಾದ್ ನಿವಾಸಿಯಾಗಿರುವ ಅಬ್ದುಲ್ ಜಲೀಲ್ ಎಂಬ ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿ, ಈ ದಫನಭೂಮಿಯ ಬಗ್ಗೆ ಖಚಿತಪಡಿಸಿದ್ದು,   ಜಲೀಲ್ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಯ ಇನ್ನಷ್ಟು ಫೋಟೋಗಳನ್ನು ಆಲ್ಟ್ ನ್ಯೂಸ್ ಗಾಗಿ ಸಂಗ್ರಹಿಸಿದ್ದಾರೆ. 

ಈ ಚಿತ್ರಗಳು ಹಾಗೂ ವೈರಲ್ ಫೋಟೋ ಒಂದೇ ಆಗಿದ್ದು, ಹೈದರಾಬಾದ್ ನಲ್ಲಿರುವ ಸಮಾಧಿ ಫೋಟೋವನ್ನೇ ಪಾಕಿಸ್ತಾನದ ಸಮಾಧಿ ಎಂದು ತಪ್ಪಾಗಿ ಬಳಸಲಾಗಿದೆ ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. 

ಸಮಾಧಿಗೆ ಬೀಗ ಜಡಿದಿರುವ ಬಗ್ಗೆ ಜಲೀಲ್ ಅವರು ಮಸ್ಜಿದ್ ಇ ಸಲಾರ್ ಮುಲ್ಕ್ ನ ನುಅಝಿನ್ ಮುಕ್ತಾರ್ ಸಾಹಬ್ ಜೊತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ. 

ಈ ಸಮಾಧಿಯು ಸುಮಾರು 1.5 ರಿಂದ 2 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು  ಬೀಗ ಸಂಬಂಧಪಟ್ಟ ಸಮಿತಿಯ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಮುಕ್ತಾರ್ ಸಾಹಬ್ ಹೇಳಿದ್ದಾರೆ.  ಇದು ದಫನಭೂಮಿಯ ಪ್ರವೇಶದ್ವಾರದ ಬಳಿಯೇ ಇದ್ದು, ಬಹಳಷ್ಟು ಜನರು ಇಲ್ಲಿಗೆ ಬಂದು ಅನುಮತಿಯಿಲ್ಲದೆ ಹಳೆಯ ಸಮಾಧಿಗಳಲ್ಲೇ ಬೇರೆ  ಶವಗಳನ್ನು ಹೂಳುತ್ತಾರೆ.  ಇತರರು ಯಾವುದೇ ದೇಹವನ್ನು ಮತ್ತಷ್ಟು ಹೂಳುವುದನ್ನು ತಡೆಯುವ ಸಲುವಾಗಿ, ಮೃತರ ಕುಟುಂಬ ಅಲ್ಲಿ ಗ್ರಿಲ್ ಅಳವಡಿಸಿ ಬೀಗ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೃಪೆ: Altnews.in

Pakistani parents lock daughters' graves to avoid rape

Read @ANI Story | https://t.co/2vbtYavyj5#Pakistan #necrophiliacases #sexualharassment #crime pic.twitter.com/1AndHMUXlZ

— ANI Digital (@ani_digital) April 29, 2023

Pakistani parents lock daughters' graves to avoid rape https://t.co/YarziUwwWI

— The Times Of India (@timesofindia) April 29, 2023
share
Next Story
X