ಗಾಂಧಿ ಸಿದ್ಧಾಂತಕ್ಕಾಗಿ ಹೋರಾಡುವೆ: ಮೀರಾ ಕುಮಾರ್
ಅಹ್ಮದಾಬಾದ್, ಜೂ. 30: ಮಹಾತ್ಮಾ ಗಾಂಧಿ ಅವರ ಸಬರ್ಮತಿ ಆಶ್ರಮದಿಂದ ರಾಷ್ಟ್ರಪತಿ ಚುನಾವಣೆಗೆ ಶುಕ್ರವಾರ ಪ್ರಚಾರ ಆರಂಭಿಸಿರುವ ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್, ರಾಷ್ಟ್ರಪಿತನ ಸಿದ್ಧಾಂಕ್ಕಾಗಿ ಹೋರಾಡಲಿದ್ದೇನೆ ಎಂದಿದ್ದಾರೆ.
ನಾನು ಶಕ್ತಿ ಗಳಿಸಲು ಇಲ್ಲಿಗೆ ಆಗಮಿಸಿದ್ದೇನೆ. ಆಶ್ರಮದಲ್ಲಿರುವ ಗಾಂಧೀಜಿ ಅವರ ನಿವಾಸ ಹೃದಯ ಕುಂಜ್ನಲ್ಲಿ ಕೆಲವು ಸಮಯ ಕಳೆದಿದ್ದೇನೆ. ಚುನಾವಣೆ ಎಂಬ ಯುದ್ಧದಲ್ಲಿ ಮುಂದುವರಿಯಲು ನನಗೆ ಇಂದು ಶಕ್ತಿ ದೊರೆಂತಾಗಿದೆ ಎಂದು ಅವರು ಹೇಳಿದ್ದಾರೆ.
ಮೀರಾ ಕುಮಾರ್ ಅವರು ಕಾಂಗ್ರೆಸ್ ನಾಯಕರಾದ ಭರತ್ ಸಿನ್ಹಾ ಸೋಲಂಕಿ ಹಾಗೂ ಶಂಕರ್ ಸಿನ್ಹಾ ವಾೇಲ ಅವರೊಂದಿಗೆ ಇಲ್ಲಿ ಸುಮಾರು 40 ನಿಮಿಷ ಕಳೆದರು. ಈ ಸಂದರ್ಭ ಚರಕದಲಿ್ಲ ನೂಲು ತೆಗೆಯಲು ಪ್ರಯತ್ನಿಸಿದರು.
ಆಶ್ರಮದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಿದ್ದರು.
ಜುಲೈ 17ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರು ಎನ್ಡಿಎ ಅಭ್ಯರ್ಥಿ ರಾಮ್ನಾಥ್ ಕೊೀವಿಂದ್ ಅವರನ್ನು ಎದುರಿಸಲಿದ್ದಾರೆ.