ದನಗಳನ್ನು ಕದಿಯುತ್ತಿದ್ದ ಇಬ್ಬರಿಗೆ ಥಳಿತ,ಬಂಧನ
ಗ್ರೇಟರ್ ನೊಯ್ಡ,ಜು.17: ಇಲ್ಲಿಯ ನವೌಲಿ ಗ್ರಾಮದಲ್ಲಿ ದನಗಳನ್ನು ಕದಿಯುತ್ತಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಥಳಿಸಿ ಪೊಲೀಸರಿಗೊಪ್ಪಿಸಲಾಗಿದೆ.
ದಂಕೌರ್ ಗ್ರಾಮದ ನಿವಾಸಿಗಳಾದ ನವಬಹಾರ್ ಮತ್ತು ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಶನಿವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಎಲ್ಜಿ ಚೌಕ್ ಬಳಿ ಕೆಲವು ವ್ಯಕ್ತಿಗಳು ಮೇಯಲು ಬಿಟ್ಟಿದ್ದ ಮೂರು ದನಗಳನ್ನು ವ್ಯಾನೊಂದಕ್ಕೆ ಹತ್ತಿಸುತ್ತಿದ್ದಾಗ ಅದನ್ನು ಗಮನಿಸಿದ ಗ್ರಾಮಸ್ಥರು ಹಿಡಿಯಲು ಪ್ರಯತ್ನಿಸಿದ್ದರು. ಇಬ್ಬರು ಸಿಕ್ಕಿಬಿದ್ದಿದ್ದು, ಇತರರು ಪರಾರಿಯಾಗಿದ್ದಾರೆ. ಗ್ರಾಮಸ್ಥರು ಅವರನ್ನು ಥಳಿಸಿ ಬಳಿಕ ಠಾಣೆಗೆ ಕರೆತಂದಿದ್ದರು ಎಂದು ಪೊಲೀಸರು ತಿಳಿಸಿದರು.
ದನಗಳನ್ನು ಮಾರಾಟಕ್ಕಾಗಿ ಬುಲಂದಶಹರ್ಗೆ ಸಾಗಿಸುತ್ತಿದ್ದುದಾಗಿ ಆರೋಪಿಗಳು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದರು.
Next Story