ಜಯರಾಮ್ ನಾಯಕ್
ಕಾರ್ಕಳ : ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ, ಬೈಲಗಂಡಿಯ ಸಮಾಜ ಸೇವಕ ಜಯರಾಮ್ ನಾಯಕ್ (63) ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ದೊಂಡೇರಂಗಡಿ ಶ್ರೀರಾಮ ಮಂದಿರದ ಅಧ್ಯಕ್ಷರಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದ ಇವರು, ಮುನಿಯಲ್ ಶ್ರೀವೆಂಕಟರಮಣ ದೇವಸ್ಥಾನ, ಕಾರ್ಕಳ ಶ್ರೀವೆಂಕಟರಮಣ ದೇವಳದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾ ರಮಾನಾಥ ದೇವಳದ ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಕಮಿಟಿಯ ಕಾರ್ಯದರ್ಶಿ ಸೇವೆ ನೀಡಿದ್ದಾರೆ.
Next Story