Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಲಿತ ಬುದ್ಧಿಜೀವಿಗಳೆಂಬ ಸೆಲೆಕ್ಟಿವ್...

ದಲಿತ ಬುದ್ಧಿಜೀವಿಗಳೆಂಬ ಸೆಲೆಕ್ಟಿವ್ ಹೋರಾಟಗಾರರು!

-ಅಪ್ಪಗೆರೆ ಡಿ.ಟಿ. ಲಂಕೇಶ್-ಅಪ್ಪಗೆರೆ ಡಿ.ಟಿ. ಲಂಕೇಶ್20 Nov 2017 12:08 AM IST
share

ಮಾನ್ಯರೆ,

ಕೆಲವು ದಲಿತ ಬುದ್ಧಿಜೀವಿಗಳ ವಲಯ ಅಂತ ಕರೆಸಿಕೊಳ್ಳುವ, ಕರೆದುಕೊಳ್ಳುವ ಈ ನಾಡಿನ ಒಂದು ಚಿಂತನಾ ವಲಯ ಈ ಕಾಲಕ್ಕೂ ಸಹ, ಇನ್ನೂ ಕಮ್ಯುನಿಸ್ಟ್ಟ್ ಚಿಂತನೆಗಳಿಂದ ತಮ್ಮನ್ನು ತಾವು ಬಾಯಿ, ಮನಸ್ಸು ಕಟ್ಟಿಕೊಂಡು ಹೋರಾಟಗಳನ್ನು ರೂಪಿಸುವುದರಲ್ಲಿ ಕೂಡ ಸೆಲೆಕ್ಟಿವ್ ಆಗಿರುವುದನ್ನು ಗಮನಿಸಿದಾಗ ಇವರೆಲ್ಲಾ ಸಮುದಾಯಗಳಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಸಾಹಿತಿಯಾಗಿ, ಬರಹಗಾರರಾಗಿ ತಮ್ಮ ಬರವಣಿಗೆಯಿಂದ ಶಬ್ದ ಮಾಡಬೇಕಿದ್ದವರೆಲ್ಲಾ ಇವತ್ತಿಗೆ ತಾವು ಯಾವ ಹಿರಿಯ ಮೇಲ್ಜಾತಿಗೆ ಸೇರಿದ ಸಾಹಿತಿಗಳ ಜೊತೆಯಿದ್ದೇವೆ, ಯಾವ ವಾದದಡಿಯಲ್ಲಿ ಗುರುತಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗಿ ಹೋದಂತಿದೆ. ಅಷ್ಟರ ಮಟ್ಟಿಗೆ ಇಂದು ಒಂದು ರೀತಿಯ ಸಾಂಸ್ಕೃತಿಕ, ಸಾಹಿತ್ಯಕ, ವೈಚಾರಿಕ ಜೀತಗಾರಿಕೆ ಚಾಲ್ತಿಯಲ್ಲಿದೆ ಎಂಬ ಅನುಮಾನವಿದೆ.

ದಲಿತ ಸಾಹಿತಿಯಾದವನು ಎಡಪಂಥೀಯನಾಗಿಯೇ ಇರಬೇಕೆಂಬ ಕಟ್ಟುಕತೆಯನ್ನು ನಿಜವೆಂದು ಒಪ್ಪಿಕೊಂಡು, ಅಕಾಡಮಿಕ್ ಕಾರಣಗಳ ಸಲುವಾಗಿ ನಾಳಿನ ಯಾವುದೋ ಸರಕಾರ ನೀಡುವ ಪುರಸ್ಕಾರಗಳಿಗೋ, ಯಾವುದೋ ಅಧ್ಯಕ್ಷಗಾದಿಗೋ, ಹೆಸರಿನ ಹುಚ್ಚಿಗೋ ಬಿದ್ದಂತಿರುವ ಈ ವಲಯ ಆ ಕಾರಣಕ್ಕೆ ತನ್ನ ಸಮುದಾಯದ ಹಿತಚಿಂತನೆಯನ್ನು ಸಂದರ್ಭಕ್ಕೆ ತಕ್ಕ ಹಾಗೆ ಮಾತ್ರವೇ ಬಳಸುವ ಚಾಣಾಕ್ಷತನ ಮಾತ್ರ ಹೇಸಿಗೆ ಹುಟ್ಟಿಸುವಂತದ್ದು. ಪರಿಶಿಷ್ಟರ ಭಡ್ತಿ ಮೀಸಲಾತಿ ಕುರಿತಂತೆ, ಗೋ.ಮಧುಸೂದನ್ ಅವರ ಸಂವಿಧಾನದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಆ ವಲಯದ ಧ್ವನಿಯೇ ಇಲ್ಲವಾಗಿದ್ದು ಮಾತ್ರ ನಿಜಕ್ಕೂ ವಿಷಾದನೀಯ. ಇಲ್ಲಿ ಇಂತಹ ಘಟನೆಗಳ ಬಗ್ಗೆ ಒಬ್ಬ ಸಮುದಾಯದ ನಿಷ್ಠ ಕಾಳಜಿಯುಳ್ಳವನಾಗಿ ಆ ವಲಯದ ಧ್ವನಿಯನ್ನು ಯಜಮಾನಿಕೆ ನಡೆಸುತ್ತಿರುವ ಈ ಚಿಂತನೆಗಳು ನಯವಾಗಿ ದಮನ ಮಾಡಿಬಿಟ್ಟಿವೆ.

ಆ ವಲಯ ಮೇಲ್ಜಾತಿಗರ ಪಾಠಗಳಿಗಾಗಿ ಜಾಹೀರಾತು ಮಾಡಿಕೊಂಡು, ಬಾಬಾಸಾಹೇಬರಿಗಿಂತಲೂ ಹೆಚ್ಚಿನದಾದ ಅದೇನೋ ಅದ್ಭುತಗಳನ್ನು ಕಾಣುತ್ತಿರುವಂತೆ ಧಾವಂತಗಳಲ್ಲಿ ಕುಣಿದಾಡಿಕೊಂಡು ಈ ಕಾಲದಲ್ಲಿಯೂ ಸಹ ಅದೇ ಬಂಡವಾಳಶಾಹಿ, ಆರ್ಥಿಕ ನೀತಿಗಳು, ಜಿಎಸ್‌ಟಿ ಬಗೆಗಿನ ಮಾರ್ಕ್ಸ್‌ವಾದಿ ಚಿಂತನೆಗಳಿಗಾಗಿಯೇ ತಮ್ಮ ಕಿವಿಗಳನ್ನು ಅಡವಿಟ್ಟುಕೊಂಡು ಎದೆಯ ಬಾಗಿಲನ್ನು ಬಂದ್ ಮಾಡಿಕೊಂಡಿರುವುದು ಮಾತ್ರ ವಿಪರ್ಯಾಸ.

ಹಾಗಾಗಿ ಇವರಿಗೆ ದಲಿತ ವಿಷಯಗಳ ಬಗ್ಗೆ ಮಾತನಾಡುವ ವಿಷಯಗಳಾಗುವುದಿಲ್ಲ. ಇವರು ಗೋ.ಮಧುಸೂದನ್ ಬಗ್ಗೆ ಖಂಡಿಸುವುದಿಲ್ಲ. ಭಡ್ತಿ ಮೀಸಲಾತಿ ಬಗ್ಗೆ ಚರ್ಚೆ ಮಾಡುವುದಿಲ್ಲ ಯಾಕೆಂದರೆ, ಇದು ಜಾತಿ ಸಂಬಂಧಿತ. ಕಮ್ಯುನಿಸ್ಟ್ಟರು ಜಾತಿಯ ಇರುವಿಕೆಗಿಂತ ವರ್ಗದ ಇರುವಿಕೆ ಬಗ್ಗೆ ಮಾತ್ರ ತಾನೇ ಮಾತನಾಡುವುದು. ಹಾಗಾಗಿ ಇವರಿಗೆ ಇಂತಹ ವಿಷಯಗಳ ಬಗ್ಗೆ ಬಾಯಿ ಬಂದ್ ಆಗಿಬಿಡುತ್ತದೆ ಅಂತ ಅನ್ನಿಸುತ್ತದೆ. ಒಟ್ಟಾರೆಯಾಗಿ ದಲಿತ ಬುದ್ಧ್ದಿಜೀವಿಗಳು ಸಹ ದಲಿತಸಂಬಂಧಿತ ಹೋರಾಟಗಳ ವಿಚಾರದಲ್ಲಿ ಸೆಲೆಕ್ಟಿವ್ ಹೋರಾಟಗಾರರಾಗಿಬಿಟ್ಟರಲ್ಲ ಎಂಬುದು ಮಾತ್ರ ಈ ಹೊತ್ತಿನ ದೊಡ್ಡ ಮೋಸ. ಜಾತಿ ಎಂಬುದು ಆವಶ್ಯಕತೆಗೆ ಮಾತ್ರ ಸ್ವಾರ್ಥಕ್ಕೆ ಬಳಕೆ ಮಾಡುವ ನಾಣ್ಯ ಆಗಿರುವುದು ದುರಂತ. ಆದಷ್ಟು ಬೇಗ ಇಂತಹವರಿಗೆ ಜ್ಞಾನೋದಯವಾಗಲಿ.

share
-ಅಪ್ಪಗೆರೆ ಡಿ.ಟಿ. ಲಂಕೇಶ್
-ಅಪ್ಪಗೆರೆ ಡಿ.ಟಿ. ಲಂಕೇಶ್
Next Story
X