ಶಾಂತಿ ಕದಡುವವರು
ಮಾನ್ಯರೆ,
ರಾಜಕಾರಣಿಗಳು ಮಾಡುವ ಪ್ರಚೋದನಾಕಾರಿ ಭಾಷಣಗಳಿಂದಾಗಿಯೇ ರಾಜ್ಯದಲ್ಲಿ ಕೋಮುಗಲಭೆಗಳು ಸಂಭವಿಸುತ್ತಿವೆ. ರಾಜ್ಯದ ರಾಜಕೀಯ ನಾಯಕರು ಇಂದು ಎಲ್ಲೆ ಮೀರಿ ಅನಾಗರಿಕರಂತೆ, ಕೆಟ್ಟ ಪದಗಳಿಂದ ಒಬ್ಬರ ಮೇಲೊಬ್ಬರು ಹರಿಹಾಯ್ದುಕೊಳ್ಳುವ ಮೂಲಕ ಸಾಮಾಜಿಕ ಸ್ವಾಸ್ಥವನ್ನ್ನು ಕೆಡಿಸುತ್ತಿದ್ದಾರೆ. ಇವರು ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಡುವುದರಿಂದಲೇ ಯುವಕರು ಪ್ರಚೋದನೆಗೊಳಗಾಗಿ ಕೋಮುಗಲಭೆಗಳು ಸೃಷ್ಟಿಯಾಗುತ್ತಿವೆ. ರಾಜಕೀಯ ನಾಯಕರು ಮಾತಿನ ಮೇಲೆ ಮತ್ತು ತಾವು ಬಳಸುವ ಪದಗಳ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡುವುದನ್ನು ಕಲಿಯಬೇಕು. ಅಲ್ಲದೆ ಪ್ರಚೋದನಾಕಾರಿ ಭಾಷಣಗಳಿಂದ ಸಮಾಜದಲ್ಲಿ ವಿಷಬೀಜಬಿತ್ತುವುದನ್ನು ಬಿಡಬೇಕು. ಆಗ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಸೀತು.
-ರಾಘವೇಂದ್ರ ದೇವರಮನಿ,ಮಾರಸನಹಳ್ಳಿ
Next Story