-

ಓ ಮೆಣಸೇ ....

-

ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಕಾಶ್ಮೀರ ಪಂಡಿತರ ಸ್ಥಿತಿ ಅರ್ಥವಾಗುವುದಿಲ್ಲ - ಸಿ.ಟಿ.ರವಿ, ಶಾಸಕ
ಆದ್ದರಿಂದ ಸತ್ಯ ಏನೆಂಬುದನ್ನು ಕಾಶ್ಮೀರ ಪಂಡಿತರೇ ಜಗತ್ತಿಗೆ ತಿಳಿಸುತ್ತಿದ್ದಾರೆ.

 
ವೀರಪ್ಪ ಮೊಯ್ಲಿ ಹಿಂದುಳಿದ ವರ್ಗದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ಕನಸು ಬಿತ್ತಿದರು - ಸುನೀಲ್‌ಕುಮಾರ್, ಸಚಿವ
ಆ ಕನಸನ್ನು ಛಿದ್ರಗೊಳಿಸುತ್ತಿರುವವರೇ ಅದನ್ನು ನೆನಪಿಸಿಕೊಳ್ಳುತ್ತಿದ್ದಾರಲ್ಲಾ? ಅದುವೇ ಗಮ್ಮತ್ತು.

  
ಕಾಶ್ಮೀರ ಪಂಡಿತರ ಕಷ್ಟದ ದಿನಗಳನ್ನು ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಸುದೀರ್ಘ ಅವಧಿಯ ಬಳಿಕ ಅಗಿದೆ - ನಳೀನ್‌ಕುಮಾರ್ ಕಟೀಲು, ಸಂಸದ
ಅವರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಇನ್ನೆಷ್ಟು ದೀರ್ಘ ಕಾಲ ಬೇಕಾದೀತೋ!

ಕೇಂದ್ರ ಸರಕಾರ 2024ರೊಳಗೆ ಸೂರಿಲ್ಲದ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಗುರಿ ಇಟ್ಟುಕೊಂಡಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕಳೆದ ಬಾರಿ ಯಾರೆಲ್ಲರ ಖಾತೆಯಲ್ಲಿ 15 ಲಕ್ಷ ರೂ. ಜಮೆ ಆಗಿತ್ತೋ ಅವರಿಗೆ ಮಾತ್ರ ಸೂರು ಎಂಬ 'ಜುಮ್ಲಾ' ವನ್ನೂ ಸೇರಿಸಿ.

ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮುನ್ನ ಸಿಎಂ ಘೋಷಣೆ ಮಾಡುವ ಸಂಪ್ರದಾಯವಿಲ್ಲ - ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಚುನಾವಣೆಗೆ ಮುನ್ನವೇ ಮಾಡಿ ಬಿಟ್ಟರೆ ಒಳ್ಳೆಯದು. ಅನಂತರ ಎಲ್ಲಿ ಅವಕಾಶ ಸಿಗುತ್ತೆ?

ಕಾಂಗ್ರೆಸ್ ಸೇರಿದಂತೆ ದೇಶದಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಸಮಾಜವನ್ನು ಒಡೆಯುವುದರಲ್ಲಿ ನಿರತವಾಗಿದೆ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ
ಇದು, ನೀವು ಕಾಂಗ್ರೆಸ್ ಅನ್ನು ಒಡೆಯಲು ಹೊರಟಿರುವುದಕ್ಕೆ ಸಮರ್ಥನೆಯೇ?

ಭಗವದ್ಗೀತೆ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದವರೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನೀವು ಮಾತನಾಡುತ್ತಿರುವಷ್ಟು ದಿನ ಸಂಘಿಗಳು ಆರಾಮವಾಗಿ ಮೌನ ವೃತ ಆಚರಿಸುತ್ತಿರಬಹುದು.

ನನಗೂ ಮುಖ್ಯಮಂತ್ರಿಯಾಗುವ ಸಾಮರ್ಥ್ಯವಿದೆ. ನನ್ನ ಬಳಿಯೂ ಹಣವಿದೆ, ಶಕ್ತಿ ಇದೆ. ಹಾಗಾಗಿ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ - ಶಾಮನೂರು ಶಿವಶಂಕರಪ್ಪ, ಶಾಸಕ

ಇದು ಪ್ರಜಾಸತ್ತೆ. ಯಾರ ಬಳಿ ಹೆಚ್ಚು ಹಣ ಮತ್ತು ಹೆಚ್ಚು ಶಕ್ತಿ ಇದೆ ಎಂಬ ಸ್ಪರ್ಧೆ ನಡೆಸಿ ಗೆದ್ದವರಿಗೆ ಸಿ.ಎಂ ಹುದ್ದೆ ಕೊಟ್ಟುಬಿಡೋಣ.

      
ತುಷ್ಟೀಕರಣದ ನೀತಿಯಿಂದಾಗಿ ದೇಶದಲ್ಲಿ ಮೂರು ಬಣ್ಣದ ರಾಷ್ಟ್ರಧ್ವಜ ಬಂತು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
 ನೀವು ಬಯಸುವ ಭಟ್ರೀಕರಣ ನಡೆದರೆ ನಿಮ್ಮ ಬಣ್ಣ ಮಾತ್ರ ಉಳಿದೀತೆ?

ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ - ಜೆ.ಸಿ.ಮಾಧುಸ್ವಾಮಿ, ಸಚಿವ
ಹಿಂದೆ ಇದೆಯೇ?

ಎಐಎಂಐಎಂ ಮತ್ತು ಬಿಜೆಪಿ ಮಧ್ಯೆ ಬಹಿರಂಗಪಡಿಸಲಾಗದ ಒಪ್ಪಂದವಿದೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಿಎಂ

ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಬಹಿರಂಗ ಪಡಿಸಿಯೇ ಒಪ್ಪಂದ ನಡೆದಿರುವಾಗ ಇದೇನು ಮಹಾ ?

ಮಂತ್ರಿಗಳೆಂದರೆ ಅವರು ವಿಧಾನ ಸಭೆಯ ಮೂರನೇ ಮಹಡಿಗೆ ಸೀಮಿತವಾಗಬಾರದು - ಎಂ.ಪಿ.ರೇಣುಕಾಚಾರ್ಯ, ಶಾಸಕ
ಹಾರಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಬೇಕಾಗುವಷ್ಟು ಮಹಡಿಗಳು ಅಲ್ಲಿ ಇಲ್ವಲ್ಲಾ!

'ದಿ ಕಾಶ್ಮೀರ್ ಫೈಲ್ಸ್' ಸಿನೆಮಾವನ್ನು ನೋಡಿದಾಗ ಆಗಿರುವ ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಆದ್ದರಿಂದ ಅಂತಹ ಕೊಳಕನ್ನು ನೋಡಬೇಡಿರೆಂದು ಶಿಷ್ಯರಿಗೂ ಸೂಚಿಸಿ.

 ಗ್ರಾಮ ವಾಸ್ತವ್ಯ ಎಂಬುದು ಪಾಠಶಾಲೆ ಇದ್ದಂತೆ - ಆರ್.ಅಶೋಕ್, ಸಚಿವ
ನೀವು ಅಲ್ಲಿಗೇಕೆ ಹೋಗುತ್ತಿಲ್ಲ ಎಂದು ಕೇಳಿದರೆ, ಇಂದು ಜಗತ್ತೇ ಒಂದು ಪುಟ್ಟ ಗ್ರಾಮವಾಗಿದೆ ಎಂದು ಡೈಲಾಗ್ ಹೊಡೆದು ಬಿಡಿ.

ಭಾರತದಲ್ಲಿ ದ್ವೇಷ ಬಿತ್ತುವ ಸಿನೆಮಾಗಳಿಗೆ ತೆರಿಗೆ ವಿನಾಯಿತಿ ಇದೆ - ಸಾಕೇತ್ ಗೋಖಲೆ, ಟಿಎಂಸಿ ವಕ್ತಾರ
ಟಿಕೇಟು ವಿನಾಯ್ತಿಯೇ ಇದೆಯಲ್ಲಾ!

ಮೋದಿ ಸರಕಾರದಲ್ಲಿ ಕೈಗೆಟಕುವ ದರ ಇರುವುದು ಕೋಮುವಾದ ಮತ್ತು ದ್ವೇಷಕ್ಕೆ ಮಾತ್ರ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಉಚಿತವಾಗಿ ಧಾರಾಳ ಲಭ್ಯವಿರುವ ಸುಳ್ಳು ಮತ್ತು ದ್ವೇಷಕ್ಕೆ ದರ ಇದೆ ಎಂಬ ನಂಬಿಕೆ ನಿಮ್ಮ ಮುಗ್ಧತೆಗೆ ಸಾಕ್ಷಿ.

ಮತ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಭಗವದ್ಗೀತೆಯ ಅರಿವಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ

ಅರಿವಿದ್ದವರು, ಅದನ್ನು ಮೇಲ್ಜಾತಿಯವರು ತಮ್ಮ ಹಿತಾಸಕ್ತಿಗಾಗಿ ಬಳಸುವುದನ್ನು ವಿರೋಧಿಸುತ್ತಾ ಬಂದಿದ್ದಾರೆ.

ನಾನು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರ ಬೇಕೆನ್ನುವುದು ನಮ್ಮ ಪ್ರತಿಜ್ಞೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಎಷ್ಟೊಂದು ವಿಶಾಲ ಮನಸ್ಸು! ಪಕ್ಷ ಗೆದ್ದರೆ ಮುಖ್ಯಮಂತ್ರಿ ಯಾರೆಂಬುದನ್ನೂ ಘೋಷಿಸಿಬಿಡಿ.

ಆತ್ಮವು ಯಾರನ್ನು ಆಯ್ದುಕೊಳ್ಳುತ್ತದೋ ಅವರು ಮಾತ್ರ ಆತ್ಮ ಸಾಕ್ಷಾತ್ಕಾರವನ್ನು ಪಡೆಯಬಲ್ಲರು - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ಸ್ ಸಂಸ್ಥಾಪಕ
ಅದರ ಜೊತೆ ಹಲವಾರು ಕಾರು,ಬಂಗಲೆ ಮತ್ತು ನೂರಾರು ಕೋಟಿಯ ಆಸ್ತಿಯನ್ನು ಕೂಡಾ.

   
ಕಾವೇರಿ ನೀರಿನ ವಿಷಯವನ್ನು ತಮಿಳುನಾಡು ರಾಜಕೀಯ ದಾಳವಾಗಿ ನಿರಂತರವಾಗಿ ಬಳಸುತ್ತಲೇ ಬಂದಿದೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜಕೀಯ ದಾಳವಾಗಿ ಧರ್ಮ, ದೇವರುಗಳನ್ನು ಮಾತ್ರ ಬಳಸಬೇಕೆಂದು ಅವರಿಗೆ ತಿಳಿ ಹೇಳಿ.

ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಡಿಕೆ ಕಳ್ಳ ಸಾಗಣೆಯ ಮೇಲೆ ನಿಗಾ ಇಡಲಾಗಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ನೆನಪಿಡಿ. ಅಡಿಕೆ ಕದ್ದವನೂ ಕಳ್ಳ, ಆನೆ ಕದ್ದವನೂ ಕಳ್ಳ.

ಉಕ್ರೇನ್ ಮೇಲೆ ರಶ್ಯ ದಾಳಿಯನ್ನು ಖಂಡಿಸಲು ಭಾರತ ಹೆದರಿದಂತಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ನಿಮ್ಮ ಯಾವುದೇ ಬಯಕೆಯನ್ನು ಈಡೇರಿಸಲು, ಬುದ್ಧಿಯುಳ್ಳವರು ಅಂಜುತ್ತಾರೆ.

 
ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳ ಮೇಲೆ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ೊತೆಗೆ ಕೊರೋನ ಹೆಸರಲ್ಲಿ ಮತ್ತೆ ಲಾಕ್ ಡೌನ್ ಹೇರುವ ಉದ್ದೇಶವೂ ಉಂಟಂ ೆ.

ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಆರೆಸ್ಸೆಸ್ ಸೇರುವ ದಿನ ದೂರವಿಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ

ಆರೆಸ್ಸೆಸ್ ನವರು ನಿಮಗೆ ಜನಿವಾರ ತೊಡಿಸಿದ ದಿನ ಹಾಗಾದೀತು.

ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಇನ್ನು ಮೂರು ತಿಂಗಳು ಕಾಯಬೇಕು - ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥೆ
ಅವಸರವೇಕೆ? ಮುಂದಿನ ಮಹಾಚುನಾವಣೆ ಮುಗಿದ ಬಳಿಕ ಪುರುಸೊತ್ತಲ್ಲಿ ಮಾಡಬಹುದಲ್ಲಾ!

ಮುಂದೊಂದು ದಿನ ನಾವು, ನೀವು ಎಲ್ಲರೂ ಆರೆಸ್ಸೆಸ್ ಎಂದು ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ - ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ

ಕೋವಿಡ್ ಬಗ್ಗೆ ಕೂಡಾ ಇಂತಹ ಎಚ್ಚರಿಕೆ ಬಂದಿತ್ತು. ರಶ್ಯ ಮತ್ತು ಉಕ್ರೇನ್ ವಿಷಯದಲ್ಲಿ ನಾವು ಶಾಂತಿಯ ಪರ - ಎಸ್.ಜೈಶಂಕರ್, ಕೇಂದ್ರ ಸಚಿವ
ದೇಶದೊಳಗೆ ಮಾತ್ರ ಅಶಾಂತಿಯ ಪರ?

ದೇಶದ ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ - ಪ್ರತಾಪ ಸಿಂಹ, ಸಂಸದ
ಪಾಪ, ಎಲ್ಲೋ ಗುಟ್ಟಾಗಿ ಹೇಳಿರಬೇಕು. ಬಯಲುಗೊಳಿಸಬೇಡಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top