ಓ ಮೆಣಸೇ....
-

ನಮ್ಮದು ಯಾವುದೇ ಒಂದು ಧರ್ಮದ ಸರಕಾರ ಅಲ್ಲ
-ಡಾ.ಕೆ.ಸುಧಾಕರ್, ಸಚಿವ
ಹೌದು ಸಾರ್. ನಿಮ್ಮದು ಒಂದು ಜಾತಿಯವರ ಸರಕಾರವಾದ್ದರಿಂದ ಈ ಸ್ಪಷ್ಟನೆಯ ತುರ್ತು ಅಗತ್ಯವಿತ್ತು.
ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ ಆದರ ಬಗ್ಗೆ ಆಸಕ್ತಿಯೇ ಬೆಳೆಯಲಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜನರಿಗೂ ಅಷ್ಟೇ. ಒಂದು ಕಾಲದಲ್ಲಿ ನಿಮ್ಮ ಪಕ್ಷದ ಬಗ್ಗೆ ಆಸಕ್ತಿ ಇತ್ತು. ಕ್ರಮೇಣ ಕಳೆದುಕೊಂಡರು.
ಪ್ರಧಾನಿ ಮೋದಿ ಹೇಳಿದಂತೆ ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು -ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ಅವರ ಮಾತನ್ನು ನಂಬಿ ಪ್ರಶ್ನಿಸಲು ಹೊರಟ ಅನೇಕರು ಪಾಪ ಜೈಲಲ್ಲಿದ್ದಾರೆ.
ಟಿಪ್ಪು ಸುಲ್ತಾನ್ ಕುರಿತ ಸತ್ಯಗಳನ್ನು ಸುಳ್ಳಾಗಿಸಲು ಸಾಧ್ಯವಿಲ್ಲ -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸುಳ್ಳುಗಳ ದಟ್ಟಡವಿಯಲ್ಲಿ ಆ ಸತ್ಯಗಳನ್ನು ಜನತೆಗೆ ತಲುಪಿಸುವುದು ಹೇಗೆಂಬುದೇ ಸವಾಲು.
ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಲು 'ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿ ಅಗತ್ಯ' -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಒಂದು ಪಕ್ಷ ಎಂಬೊಂದು ಪದವನ್ನೂ ಸೇರಿಸಿದರೆ ಘೋಷಣೆ ಪರ್ಫೆಕ್ಟ್ ಆಗಿ ಬಿಡುತ್ತೆ.
ಯಾರೇ ಇರಲಿ ಸಮಾಜದ ಸಾಮರಸ್ಯ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಮಟ್ಟ ಹಾಕುತ್ತೇವೆ -ಆರಗ ಜ್ಞಾನೇಂದ್ರ, ಸಚಿವ
ಮಟ್ಟ ಹಾಕುವುದೆಂದರೆ ಪಟ್ಟಾಭಿಷೇಕ ಮಾಡುವುದೆಂದು ಅರ್ಥವಲ್ಲವೇ?
ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಶೋಭಾ ಕರಂದ್ಲಾಜೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು -ವಿನಯಕುಮಾರ್ ಸೊರಕೆ, ಮಾಜಿ ಸಚಿವ
ಅಷ್ಟು ಕಾಲ ಕಾಯಬೇಕೆ?
ನಾನಿನ್ನೂ ಬಿಜೆಪಿ ಸೇರುವ ಬಗ್ಗೆ ಖಚಿತ ನಿರ್ಧಾರ ಮಾಡಿಲ್ಲ -ಬಸವರಾಜ ಹೊರಟ್ಟಿ, ವಿ.ಪ. ಸಭಾಪತಿ
ಡೀಲ್ ಪೂರ್ತಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿ.
ದೊಡ್ಡವರು ಆಡುವ ಕೆಲವು ಸಣ್ಣ ಮಾತಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಸಣ್ಣ ಮಾತುಗಳನ್ನಾಡುವವರನ್ನು ದೊಡ್ಡವರೆಂದು ಕರೆಯುವವರಿಗೆ ಉತ್ತರ ಸಿಗಲೇಬೇಕು.
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ -ಜೆ.ಸಿ.ಮಾಧುಸ್ವಾಮಿ, ಸಚಿವ
ಯಾವುದೇ ಬೆಳವಣಿಗೆ ಓಟು ತಂದರೆ ಸಾಕು. ಶೋಭೆ ಯಾರಿಗೆ ಬೇಕು?
ಪಾಕಿಸ್ತಾನದ ನಿಜವಾದ ಸ್ವಾತಂತ್ರ ಹೋರಾಟ ಇನ್ನು ಪ್ರಾರಂಭ -ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಇಲ್ಲಿ 2014ರಲ್ಲೇ ಸ್ವಾತಂತ್ರ ಸಿಕ್ಕಿದೆ. ನೀವಿನ್ನೂ ಹಿಂದೆಯೇ ಉಳಿದಿದ್ದೀರಿ.
ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ರಾಮನವಮಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕೈಯಲ್ಲೊಂದು ತ್ರಿಶೂಲವನ್ನೂ ಹಿಡಿದುಕೊಂಡು ಜೈ ಮೋದಿ ಎಂದು ಘೋಷಣೆ ಕೂಗತೊಡಗಿದರೆ ಕಾಯಕ ಪೂರ್ತಿಯಾಗುತ್ತೆ.
ಕರ್ನಾಟಕಕ್ಕೆ ತಾಳ್ಮೆ, ಗಾಂಭೀರ್ಯದಿಂದ ಆಡಳಿತ ನಡೆಸುವ ಅತ್ಯುತ್ತಮ ಮುಖ್ಯಮಂತ್ರಿ ಸಿಕ್ಕಿದ್ದಾರೆ -ಶ್ರೀನಿವಾಸಪ್ರಸಾದ್, ಸಂಸದ
ಈ ಬಗೆಯ ತಾಳ್ಮೆ ಮತ್ತು ಗಾಂಭೀರ್ಯ ಶವಗಳಲ್ಲಿ ಮಾತ್ರ ಕಾಣಸಿಗುತ್ತದೆ.
ಸಣ್ಣಪುಟ್ಟ ಕಾರಣಕ್ಕೆ ಪಕ್ಷ ತೊರೆದವರು ಮರಳಿ ಬಂದರೆ ಸ್ವಾಗತಿಸುತ್ತೇನೆ -ಕುಮಾರಸ್ವಾಮಿ, ಮಾಜಿ ಸಿಎಂ|
ಬಿಜೆಪಿಗೆ ಬೆಂಬಲ ನೀಡಿದ್ದನ್ನು ವಿರೋಧಿಸಿ ಹೊರನಡೆದವರನ್ನು ಸ್ವಾಗತಿಸಿದರೆ ಅವರೇನು ಮತ್ತೆ ಹೊರ ನಡೆಯುವ ಸಾಧ್ಯತೆ ಇದೆಯೇ?
ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಸೇರುವ ಬಗ್ಗೆ ಮಂಡ್ಯದ ಜನ ಹೇಳಬೇಕು -ಸುಮಲತಾ, ಸಂಸದೆ
ಸುಮಲತಾರಲ್ಲಿ ಕಮಲದ ವಾಸನೆ ಹೊಡೆಯುತ್ತಿದೆ ಎಂದು ಮಂಡ್ಯ ಕೂಗಿ ಹೇಳುತ್ತಿದೆ.
ಇತ್ತೀಚೆಗೆ ರಾಜ್ಯದಲ್ಲಿ ಕಂಡುಬರುತ್ತಿರುವ ಅಹಿತಕರ ಬೆಳವಣಿಗೆಗಳಿಗೆ ನನ್ನ ಬೆಂಬಲವಿಲ್ಲ -ಯಡಿಯೂರಪ್ಪ, ಮಾಜಿ ಸಿಎಂ
ಪಟ್ಟ ಕಳೆದುಕೊಂಡ ನಂತರ ಬೊಮ್ಮಾಯಿ ಸಾರ್ ಕೂಡಾ ಇದನ್ನೇ ಹೇಳಲಿದ್ದಾರೆ.
ನೈತಿಕ ಶಿಕ್ಷಣಕ್ಕೆ ಒತ್ತುನೀಡುವ ಉದ್ದೇಶದಿಂದ ಈ ವರ್ಷದಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಜೊತೆಗೆ ಮನು ಸ್ಮತಿಯನ್ನೂ ಅಳವಡಿಸಿದರೆ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತೆ.
ಜನ ಬಯಸಿದರೆ ರಾಜಕೀಯಕ್ಕೆ ಧುಮುಕುಲು ಸಿದ್ಧ -ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ಪತಿ
ಮುಳುಗುವುದಕ್ಕೆ ಬೇರೆ ಜಾಗ ಸಿಗಲಿಲ್ಲವೇ?
ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಅದೇನು ಕೊತ್ತಂಬರಿ ಸೊಪ್ಪಲ್ಲ -ಶ್ರೀರಾಮುಲು, ಸಚಿವ
ತುರಿಕೆ ಸೊಪ್ಪು ಎನ್ನುವುದು ಜನರಿಗೂ ಗೊತ್ತಾಗಿ ಬಿಟ್ಟಿದೆ.
ಹಿಂದೂ ಮತ ಬ್ಯಾಂಕ್ ಕ್ರೋಡೀಕರಣ ಮಾಡುವಂತಹ ಅವಶ್ಯಕತೆ ಬಿಜೆಪಿಗಿಲ್ಲ -ನಳಿನ್ ಕುಮಾರ್ ಕಟೀಲು, ಸಂಸದ
ಮುಸ್ಲಿಮ್ ದ್ವೇಷ ಹಬ್ಬಿದರೆ ಸಾಕು, ಬೇರೆಲ್ಲವೂ ತನ್ನಿಂತಾನೇ ಆಗಿ ಬಿಡುತ್ತದೆ.
ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳಿಗೆ ರಶ್ಯವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ -ವ್ಲಾದಿಮಿರ್ ಪುಟಿನ್, ರಶ್ಯ ಅಧ್ಯಕ್ಷ
ನೀವಿರುವಾಗ ವಿದೇಶಿ ಶಕ್ತಿಗಳ ಅಗತ್ಯವೂ ಇಲ್ಲ.
ದೇಶದ ಜನತೆಯ ಕಲ್ಯಾಣಕ್ಕಾಗಿ ಪಕ್ಷಭೇದ ಮೀರಿ ಶ್ರಮಿಸೋಣ -ಅಮಿತ್ ಶಾ, ಕೇಂದ್ರ ಸಚಿವ
ಪಕ್ಷ ಭೇದಗಳನ್ನು ಸೃಷ್ಟಿಸಿ ಜನತೆಯ ಕೊಲ್ಲೋಣ ಎಂದು ಕೇಳಿಸುತ್ತಿದೆ.
ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜ್ಯದಲ್ಲಿ ನಡೆಯುತ್ತಿರುವ ದೊಂಬಿ, ಗಲಾಟೆಯ ಬಗ್ಗೆ ಮೌನವಾಗಿರುವ ಕಾರಣ ತಿಳಿಯಿತು ಬಿಡಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.