ಓ ಮೆಣಸೇ...
-

ಸಿಎಂ ಆಗಲು ಯೋಗ ಬೇಕು, ಜೊತೆಗೆ ವರಿಷ್ಠರ ಆಶೀರ್ವಾದವೂ ಬೇಕು - ಬಿ.ಸಿ.ಪಾಟೀಲ್, ಸಚಿವ
ಯೋಗ ಕಲಿಸಲು ಸಾಕ್ಷಾತ್ ಪ್ರಧಾನಮಂತ್ರಿಯೇ ಇದ್ದಾರೆ. ಇನ್ನು ವರಿಷ್ಠರ ಆಶೀರ್ವಾದ - ದೊಡ್ಡ ಸೂಟ್ ಕೇಸ್ ಕಳಿಸಿದರೆ ಸಿಗದ ಆಶೀರ್ವಾದ ಎಲ್ಲಿದೆ?
ಶಿವರುದ್ರಪ್ಪ, ಅನಂತಮೂರ್ತಿ ಮತ್ತು ಸಿದ್ದಲಿಂಗಯ್ಯ ಅವರ ಸಮಾಧಿಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುವುದು - ವಿ.ಸೋಮಣ್ಣ, ಸಚಿವ
ಆ ಮೂಲಕ ಸಾಹಿತಿಗಳಿಗೆ, ಸಮಾಧಿಯೇ ನಿಮಗೆ ಸೂಕ್ತ ಸ್ಥಳ ಎಂಬ ಸಂದೇಶ ಕೊಡುತ್ತೀರಾ?
ನಾವು ಯಾವುದೇ ರಾಜಕೀಯ ಪಕ್ವವನ್ನು ‘ಎ’ ಅಥವಾ ‘ಬಿ’ ಎಂದು ಇಟ್ಟುಕೊಂಡಿಲ್ಲ - ಸಿ.ಟಿ.ರವಿ, ಶಾಸಕ
ಜನತೆ ನಿಮ್ಮ ಪಕ್ಷವನ್ನು ‘ಸಿ’ ಕೆಟಗರಿಯಲ್ಲಿ ಇಟ್ಟುಕೊಂಡಿದೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಾರ್ಕಳ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವೆ - ಎಂ.ವೀರಪ್ಪ ಮೊಯ್ಲಿ, ಮಾಜಿ ಸಿಎಂ
ದೇಶ, ರಾಜ್ಯ ಎಲ್ಲ ಬಿಟ್ಟು ಕಾರ್ಕಳಕ್ಕೆ ಸೀಮಿತರಾಗಿ ಬಿಟ್ಟಿರಾ?
ನಾಗರಿಕ ಸಮಾಜದಲ್ಲಿ ಸಮಾಜಘಾತುಕ ವ್ಯಕ್ತಿಗಳಿಗೆ ಜಾಗವಿಲ್ಲ- ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ
ಅವರಿಗೆ ಜಾಗವಿರುವುದು ಸಿ.ಎಂ. ಕಚೇರಿಯಲ್ಲಿ.
ಹಿಂದೆ ಖಾದಿ ಹಾಕಿಕೊಂಡು ಬಂದರೆ ಕಾಲಿಗೆ ಬೀಳುತ್ತಿದ್ದರು. ಈಗ ಅವರನ್ನು ಕಾಣುವ ದೃಷ್ಟಿಯೇ ಬದಲಾಗಿದೆ- ಎಸ್.ಎಸ್. ಪಾಟೀಲ್, ಮಾಜಿ ಸಚಿವ
ಈಗ ಖಾದಿ ಕಂಡವರು ಕಾಲಿಗೆ ಬುದ್ಧಿ ಹೇಳುತ್ತಾರೆ.
ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಬೇಕಾದರೆ ಹಳ್ಳಿಗಳ ಅಭಿವೃದ್ಧಿ ಅತ್ಯಗತ್ಯ - ಅಮಿತ್ ಶಾ, ಕೇಂದ್ರ ಸಚಿವ
ಅವುಗಳ ಅಭಿವೃದ್ಧಿ ಬಡ ಹಳ್ಳಿಗರಿಂದ ಸಾಧ್ಯವಿಲ್ಲ. ಆದ್ದರಿಂದ ಅಭಿವೃದ್ಧಿಗಾಗಿ ಅವುಗಳನ್ನು ಕಾರ್ಪೊರೇಟ್ಗಳ ವಶಕ್ಕೆ ಒಪ್ಪಿಸಲಾಗುವುದು.
ಮುಂದಿನ ದಿನಗಳಲ್ಲಿ ಜೆಡಿಎಸ್ ನಂಬರ್ 1, ಬಿಜೆಪಿ ನಂಬರ್ 2, ಕಾಂಗ್ರೆಸ್ ನಂಬರ್ 3ನೇ ಸ್ಥಾನಕ್ಕೆ ಇಳಿಯಲಿದೆ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಕಾಂಗ್ರೆಸ್ಸನ್ನು ನಂಬರ್ 3ನೇ ಸ್ಥಾನಕ್ಕೆ ಇಳಿಸುವುದಕ್ಕೆ ನಂಬರ್ 2 ನವರು ನಂಬರ್ 1 ನವರಿಗೆ ಎಷ್ಟು ಮೊತ್ತ ಪಾವತಿಸುತ್ತಾರೆ? ಡೀಲ್ ವಿವರ ತಿಳಿಸಿ.
ಪಠ್ಯ ಪುಸ್ತಕವನ್ನು ವಿರೋಧಿಸುವವರು ಪಠ್ಯ ಪುಸ್ತಕವನ್ನು ನೋಡಿಯೇ ಇಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ನೋಡಿದ್ದರೆ ಅವುಗಳನ್ನು ತಯಾರಿಸಿದವರನ್ನು ಗಲ್ಲಿಗೇರಿಸಬೇಕೆಂದು ಪಟ್ಟು ಹಿಡಿಯುತ್ತಿದ್ದರು.
ಪ್ರಧಾನಿ ಮೋದಿ ಆಡಳಿತದಿಂದ ದೇಶದಲ್ಲಿ ಭಯೋತ್ಪಾದನೆ ನಿಂತಿದೆ, ಎಲ್ಲಿಯೂ ಬಾಂಬ್ ಸಿಡಿದಿಲ್ಲ, ನಕ್ಸಲ್ ಚಟುವಟಿಕೆ ಸಂಪೂರ್ಣ ನಿಂತಿದೆ - ನಳಿನ್ ಕುಮಾರ್ ಕಟೀಲು, ಸಂಸದ
ವಿಧ್ವಂಸ ಮತ್ತು ಹಿಂಸಾಚಾರದ ಎಲ್ಲ ಚಟುವಟಿಕೆಗಳ ಮೇಲೆ ಆಡಳಿತಗಾರರೇ ತಮ್ಮ ಏಕಸ್ವಾಮ್ಯ ಸಾಧಿಸಿರುವಾಗ ಇತರ ಹಿಂಸಾವಾದಿಗಳು ನಿವೃತ್ತರಾಗುವುದು ಸಹಜ.
ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವುದು, ತ್ಯಾಗ ಮಾಡುವುದು ನಿಜವಾದ ಶಿಕ್ಷಣ - ಸಿ.ಟಿ.ರವಿ, ಶಾಸಕ
ನೀವು ಪ್ರಾಮಾಣಿಕತೆ, ವಿವೇಕ, ಸಂಸ್ಕಾರ, ಗೌರವ ಇತ್ಯಾದಿಗಳನ್ನು ತ್ಯಾಗ ಮಾಡಿದ್ದನ್ನು ಜನರು ಈಗಾಗಲೇ ಗಮನಿಸಿದ್ದಾರೆ.
ಚೀನಾವನ್ನು ಬೆದರಿಕೆ, ಎದುರಾಳಿ, ಶತ್ರು ಎಂದು ಪರಿಗಣಿಸುವುದು ಐತಿಹಾಸಿಕ ಪ್ರಮಾದವಾಗಲಿದೆ - ಜ.ವೆಯ್ ಫೆಂಗೆ, ಚೀನಾ ರಕ್ಷಣಾ ಸಚಿವ
ನೆರೆಯವರ ಮನೆಗೆ ನುಗ್ಗಿ ಬಾವುಟ ಊರಿದವರನ್ನು ಅಳಿಯನೆಂದು ಪರಿಗಣಿಸಿ ಸತ್ಕರಿಸಬೇಕೇ?
ರಾಷ್ಟ್ರೀಯ ಮಿಲಿಟರಿ ಶಾಲೆ ‘ವೈವಿಧ್ಯದಲ್ಲಿ ಏಕತೆ’ಯ ಪ್ರತೀಕವಾಗಿದೆ - ರಾಮನಾಥ ಕೋವಿಂದ್, ರಾಷ್ಟ್ರಪತಿ
ಆದ್ದರಿಂದಲೇ ಆಕ್ರೋಶಿತ ಯುವಜನರು ವ್ಯವಸ್ಥೆಯ ವಿರುದ್ಧ ವೈವಿಧ್ಯಮಯ ಗಾತ್ರದ ಕಲ್ಲುಗಳನ್ನು ಎಸೆಯುತ್ತಿದ್ದಾರೆ.
ರಾಜ್ಯದಲ್ಲಿ ಗಲಭೆಕೋರರ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವ ಅನಿವಾರ್ಯತೆ ಇಲ್ಲ - ಆರಗ ಜ್ಞಾನೇಂದ್ರ, ಸಚಿವ
ಯಾಕೆ? ಎ.ಕೆ. 47ಗಳು ಸಜ್ಜಾಗಿವೆಯೇ?
ರಾಜಕಾರಣದಲ್ಲಿ ಸರಕಾರ ವಿಫಲವಾದಾಗ ಪ್ರತಿಪಕ್ಷಗಳು ಈ.ಡಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುತ್ತದೆ - ಅಖಿಲೇಶ್ ಯಾದವ್, ಎಸ್ಪಿ ನಾಯಕ
ಪ್ರತಿಪಕ್ಷಗಳು ರಾಜಕೀಯದಲ್ಲೂ ಫೈಲ್ ಆಗಿದ್ದರಿಂದ ತಾನೇ ಪ್ರತಿಪಕ್ಷದಲ್ಲಿರುವುದು?
ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ನಿತ್ಯ ಏರುತ್ತಿದ್ದರೂ ಜನ ಭಯಪಡುವ ಅಗತ್ಯವಿಲ್ಲ - ಡಾ.ಸುಧಾಕರ್, ಸಚಿವ
ಏಕೆಂದರೆ ಬಡವರ ಸಂಖ್ಯೆ ಕುಗ್ಗಿಸುವುದಕ್ಕೆ ಅದುವೇ ಕ್ಷಿಪ್ರ ಮಾರ್ಗ
ಅಗ್ನಿಪಥ್ ಯೋಜನೆಯಿಂದ ಯುವ ಜನರಲ್ಲಿ ರಾಷ್ಟ್ರೀಯತೆಯ ಭಾವನೆಗಳು ಬಲಗೊಳ್ಳಲಿವೆ - ಅಶ್ವಿನಿ ಚೌಬೆ, ಕೇಂದ್ರ ಸಚಿವ
ಆಡಳಿತಗಾರರಲ್ಲಿ ರಾಷ್ಟ್ರೀಯ ಭಾವನೆ ಯಾಕಿಲ್ಲ ಎಂಬ ಕುರಿತು ಆತ್ಮಾವಲೋಕನದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತೇ?
ನಮಗೆ ಯಾವ ಪಕ್ಷದ ಜೊತೆಯೂ ಮೈತ್ರಿಯ ಅಗತ್ಯವಿಲ್ಲ, 150 ಸ್ಥಾನಗಳನ್ನು ಪಡೆದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಸಿಕ್ಕಷ್ಟನ್ನು ಉಳಿಸಿಕೊಳ್ಳುವುದಕ್ಕೆ ಸೂಕ್ತ ರೆಸಾರ್ಟ್ ಅನ್ನು ಈಗಲೇ ಬುಕ್ ಮಾಡಿಟ್ಟುಕೊಳ್ಳಿ.
ಜಗತ್ತಿಗೆ ಶಕ್ತಿಯ ಭಾಷೆ ಮಾತ್ರ ಅರ್ಥವಾಗುವುದು ಎಂದಾದರೆ ಭಾರತ ಅಹಿಂಸೆಯ ಬಗ್ಗೆ ಮಾತನಾಡುವಂತೆಯೇ ದಂಡವನ್ನೂ ಹೊಂದಿರಬಲ್ಲದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಅಕ್ಕಪಕ್ಕದವರು ಅತ್ಯಾಧುನಿಕ ಅಸ್ತ್ರಗಳೊಂದಿಗೆ ಸನ್ನದ್ಧರಾಗಿರುವಾಗ ನೀವಿನ್ನೂ ಹರಕು ಚಡ್ಡಿ ಮುರುಕು ದೊಣ್ಣೆಗಳ ಗುಂಗಿನಲ್ಲೇ ಮೈ ಮರೆತಿರುವಿರಲ್ಲಾ !
ಕಾಂಗ್ರೆಸ್ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀತಿ ನಮ್ಮ ಕುಟುಂಬಕ್ಕೆ ಅನ್ವಯಿಸುವುದಿಲ್ಲ. ನಾನು ಕೇಳಿದರೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ - ಶಾಮನೂರು ಶಿವಶಂಕರಪ್ಪ, ಶಾಸಕ
ನೀವು ಇರುವುದೆಲ್ಲಿ? ಪಕ್ಷದಲ್ಲೋ, ಥಿಯೇಟರ್ನಲ್ಲೋ?
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ ಫಲವಾಗಿ ಈಗ ಐ.ಟಿ., ಈ.ಡಿ. ಗಾಳಕ್ಕೆ ಸಿಲುಕಿದೆ - ಶ್ರೀರಾಮುಲು, ಸಚಿವ
ಅವರು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದೇ ಇದ್ದಿದ್ದರಿಂದಲೇ, ಕಂಬಿ ಎಣಿಸುತ್ತಿರಬೇಕಾಗಿದ್ದವರು ಇಂದು ಐ.ಟಿ, ಈ.ಡಿ.ಗಳನ್ನು ಗಾಳವಾಗಿ ಬಳಸುತ್ತಿದ್ದಾರೆ.
ಹಿಂದೆ ತುಕ್ಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ರಾಜ್ಯದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದೆ - ಬಿ.ಸಿ.ನಾಗೇಶ್, ಸಚಿವ
ಚಿಂತಿಸಬೇಡಿ. ಅವರೆಷ್ಟೇ ಶ್ರಮಿಸಿದರೂ ಸಮಾಜವನ್ನು ತುಕುಡೆ ತುಕುಡೆ ಮಾಡುವ ವಿಷಯದಲ್ಲಿ ನಿಮ್ಮನ್ನು ಮೀರಲು ಅವರಿಗೆ ಎಂದೆಂದೂ ಸಾಧ್ಯವಿಲ್ಲ.
ನಾವು ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇವೆ- ಸಿದ್ದರಾಮಯ್ಯ, ಮಾಜಿ ಸಿಎಂ
ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ವರದಿ ಸ್ವೀಕಾರ ಮಾಡಿಲ್ಲವೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.