-

ಓ ಮೆಣಸೇ...

-

2023ರ ಚುನಾವಣೆಯೇ ನನ್ನ ಕೊನೆಯ ಇಲೆಕ್ಷನ್- ಸಿದ್ದರಾಮಯ್ಯ, ಮಾಜಿ ಸಿಎಂ
2024ರ ಚುನಾವಣಾ ಕುರಿತು ಇಡೀ ಭಾರತವೇ ಹಾಗನ್ನುತ್ತಿದೆ.

ಶೀಘ್ರದಲ್ಲೇ ಏಕರೂಪ ವಿದ್ಯುತ್ ದರ ಜಾರಿ- ಸುನೀಲ್ ಕುಮಾರ್, ಸಚಿವ
ಭ್ರಷ್ಟಾಚಾರ ಇಲಾಖೆಯಲ್ಲಿ ಏಕರೂಪ ಪರ್ಸೆಂಟೇಜ್ ದರ ಜಾರಿಗೊಳಿಸಿದರೆ ಹೇಗೆ?

ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ಇಲ್ಲ, ಪಕ್ಷ ಪೂಜೆ ಇದೆ- ರೇಣುಕಾಚಾರ್ಯ, ಮಾಜಿ ಸಚಿವ
 ಹಾಗಾದರೆ ನಿಮ್ಮ ಪಕ್ಷದೊಳಗೆ ಎಲ್ಲೆಂದರಲ್ಲಿ ಕುರ್ಚಿ ಪೂಜೆಯೇ ಮೆರೆಯುತ್ತಿರುವುದೇಕೆ?

ಕಾಂಗ್ರೆಸ್ ಒಡೆದು ಹೋಳಾಗಲು ಕುಂಬಳಕಾಯಿಯೂ ಅಲ್ಲ, ಮಡಕೆಯೂ ಅಲ್ಲ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಆದ್ದರಿಂದ ಕೊಡಲಿ ಹುಡುಕುತ್ತಿದ್ದೀರಾ?

ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವವೇ ಇಲ್ಲ- ಸಿ.ಟಿ.ರವಿ, ಶಾಸಕ
ನಿಮ್ಮ ತುಂಬಿ ತುಳುಕುವ ನಕಲಿ ಗೌರವಕ್ಕಿಂತ ಅವರ ಅಲ್ಪ ಸ್ವಲ್ಪ ಅಸಲಿ ಗೌರವ ವಾಸಿ.

ಚೀನಾದಲ್ಲಿ ಇಸ್ಲಾಮ್ ಧರ್ಮ ಚೀನೀ ದೃಷ್ಟಿಕೋನದಂತಿರಬೇಕು- ಕ್ಸಿ ಜಿನ್ಪಿಂಗ್, ಚೀನಾ ಅಧ್ಯಕ್ಷ
ಹೆಂಗ್ ಪುಂಗ್ ಲೀ ಅನ್ನುತ್ತಿರಬೇಕೇ?

ಭಾರತ 200 ಕೋಟಿ ಕೊರೋನ ಲಸಿಕೆ ನೀಡಿಕೆ ದಾಟಿ ಇತಿಹಾಸ ನಿರ್ಮಿಸಿದೆ- ನರೇಂದ್ರ ಮೋದಿ, ಪ್ರಧಾನಿ
ಡಾಲರ್, ಸಿಲಿಂಡರ್, ಪೆಟ್ರೋಲ್ ಮುಂತಾದ ರಂಗಗಳ ವಿಶ್ವ ದಾಖಲೆಗಳನ್ನೂ ಪ್ರಸ್ತಾಪಿಸಿ, ಅದಾನಿಯ ಚೌಕಿದಾರರೇ?

ದೇವರು ಮತ್ತು ತಾಯಿಯ ಮಧ್ಯೆ ನಾನು ತಾಯಿಯನ್ನು ಆಯ್ಕೆ ಮಾಡುವೆ- ಬಸವರಾಜ ಬೊಮ್ಮಾಯಿ, ಸಿಎಂ
ಬಂಡವಾಳ ಬಯಲಾಗುವುದು, ಆಯ್ಕೆ ತಾಯಿ ಮತ್ತು ಕುರ್ಚಿಯ ಮಧ್ಯೆ ಇದ್ದಾಗ.

5 ಲಕ್ಷ ರೂ.ವರೆಗಿನ ವಿದ್ಯುತ್ ಗುತ್ತಿಗೆ ಸ್ಥಳೀಯರಿಗೆ ಮೀಸಲು- ಸುನೀಲ್ ಕುಮಾರ್, ಸಚಿವ
ಇರುವೆ ಊರವರಿಗೆ. ಆನೆ ನೆರೆಯವರಿಗೆ?

2047ಕ್ಕೆ ಹಿಂದೂಸ್ತಾನವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ನಡೆದಿದೆ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
  ಛೆ ಛೆ. ನೀವು ತುಂಬಾ ಪುರುಸೊತ್ತಲ್ಲಿದ್ದಂತಿದೆ. ಷಡ್ಯಂತ್ರ ನಡೆಸುವವರು ತುಂಬಾ ಆತುರದಲ್ಲಿದ್ದಾರೆ.

ಭಾರತದಲ್ಲಿ ರಾಜಕೀಯ ವಿರೋಧವು ಹಗೆತನವಾಗಿ ಪರಿವರ್ತನೆಯಾಗುತ್ತಿದೆ- ಎನ್.ವಿ.ರಮಣ, ಸು.ಕೋ. ನ್ಯಾಯಮೂರ್ತಿ
ಭಿನ್ನತೆಯ ಧ್ವನಿ ಎತ್ತಿದವರನ್ನು ಸುಳ್ಳು ಕೇಸುಗಳ ಮೂಲಕ ಕಾರಾವಾಸಕ್ಕೆ ತಳ್ಳುವ ನ್ಯಾಯಾಧೀಶರುಗಳ ಪಾತ್ರವೂ ಅದರಲ್ಲಿದೆ.

ಕೃಷಿ ಕ್ಷೇತ್ರವು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ- ಬಡಗಲಪುರ ನಾಗೇಂದ್ರ, ರೈತ ಸಂಘದ ಅಧ್ಯಕ್ಷ
ಅದಕ್ಕೆ ರಾಜಕಾರಣಿಗಳು ಆ ಕ್ಷೇತ್ರದಿಂದ ದೂರ ಇರುವುದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಿರುವುದು ನಿಜ- ಟಿ.ಎಸ್.ನಾಗಾಭರಣ, ಕ.ಅ.ಪ್ರಾ. ಅಧ್ಯಕ್ಷ
ನೀರು ಹಾವು ಎಂದರೆ ಇನ್ನಷ್ಟು ಚೆನ್ನಾಗಿರುತ್ತದೆ.

ಬಣ ರಾಜಕೀಯವು ಮೂಲ ಶಿವಸೇನೆಯ ಬಲವನ್ನು ಎಂದಿಗೂ ಕುಗ್ಗಿಸುವುದಿಲ್ಲ- ಸಂಜಯ್ ರಾವುತ್, ಸಂಸದ
ಬೃಹತ್ ಸೂಟ್ ಕೇಸ್‌ಗಳಿಗೇನು ಮಾಡುತ್ತೀರಿ?

ಗೋದಾವರಿ ತೀರದಲ್ಲಿ ಇಷ್ಟೊಂದು ಹೆಚ್ಚಿನ ಮಳೆ ಸುರಿದಿರುವುದರ ಹಿಂದೆ ವಿದೇಶಿ ಪಿತೂರಿ ಇದ್ದರೂ ಅಚ್ಚರಿ ಇಲ್ಲ- ಚಂದ್ರಶೇಖರ ರಾವ್, ತೆಲಂಗಾಣ ಸಿಎಂ
ಹೌದು, ಪಾಪಿಗಳಿದ್ದಲ್ಲಿ ಮೊಣ ಕಾಲು ನೀರು ಎನ್ನುವ ಗಾದೆಯೇ ಇರುವಾಗ ಇಷ್ಟೊಂದು ಮಳೆ ಸುರಿಯಲು ಹೇಗೆ ಸಾಧ್ಯ?

ಕಸ್ತೂರಿ ರಂಗನ್ ವರದಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು- ಆರಗ ಜ್ಞಾನೇಂದ್ರ, ಸಚಿವ
ಕಾನೂನೆಲ್ಲಾ ಯಾಕೆ ಸಾರ್? ದೇವರು ಧರ್ಮಗಳನ್ನು ಎಳೆದು ತನ್ನಿ. ಎಲ್ಲವೂ ಸುಗಮವಾಗಿ ಬಿಡುತ್ತೆ.

ಈ ಬಾರಿ ನಾನು ಹುಟ್ಟು ಹಬ್ಬ ಆಚರಿಸುವುದಿಲ್ಲ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಆಚರಿಸಿ ಆಚರಿಸಿ ದಣಿದು ಬಿಟ್ಟಿರಾ?

ಮಾಜಿ ಸಿಎಂ ಸಿದ್ದರಾಮಯ್ಯ ಈಗ ಅರೆ ಅಲೆಮಾರಿಯಾಗಿದ್ದಾರೆ- ಈಶ್ವರಪ್ಪ, ಮಾಜಿ ಸಚಿವ
ಶೇ.40 ಎಂಬ ಮಹಾಮಾರಿಯಾಗಿಲ್ಲವಲ್ಲ !

ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಹಸಿವು ನಿರೋಧಕ ಲಸಿಕೆ ತಯಾರಿಸಿಟ್ಟಿದ್ದೀರಾ?

ಜಿಎಸ್‌ಟಿ ವಿರೋಧಿಸುವವರು ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್‌ಗಳ ಆರ್ಥಿಕ ಸ್ಥಿತಿಗತಿ ಗಮನಿಸಲಿ- ಡಿ.ಎಸ್. ಅರುಣ್, ವಿ.ಪ. ಸದಸ್ಯ
ಅಲ್ಲೆಲ್ಲ ಪಾಠ ಇರುವುದು ಜಿಎಸ್‌ಟಿ ಬೆಂಬಲಿಗ ಅಂಧಭಕ್ತರಿಗೆ.

ಅನ್ಯ ಪಕ್ಷದವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ಆ್ಯಕ್ಷನ್ ಪ್ಲಾನ್ ಸಿದ್ಧವಾಗಿದೆ- ಆರ್.ಅಶೋಕ್, ಸಚಿವ
ನೋಟಿನ ಚೀಲಗಳನ್ನು ಯಾವ ರೆಸಾರ್ಟ್‌ನಲ್ಲಿ ಅಡಗಿಸಿಟ್ಟಿದ್ದೀರಿ?

ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡುವುದು ಬಿಜೆಪಿಯವರ ಗುಣ- ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಅವರ ಜೊತೆಗಿನ ನಿಮ್ಮ ಸಖ್ಯದ ಇತಿಹಾಸ ನೋಡಿದರೆ ಅವರ ಗುರು ಯಾರೆಂಬ ಸಂಶಯ ಮೂಡುತ್ತದೆ.

ನಾನು ಕ್ರಿಮಿನಲ್ ಅಲ್ಲ- ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ತಪ್ಪೊಪ್ಪಿಗೆಯ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ.

ಸರಕಾರ ತನ್ನ ಮಹತ್ವಾಕಾಂಕ್ಷಿ 'ಮಾದರಿ ಶಾಲೆ'ಗಳ ನಿರ್ಮಾಣಕ್ಕಾಗಿ ಈಗಿರುವ ಶಾಲೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ- ಬಿ.ಸಿ.ನಾಗೇಶ್, ಸಚಿವ
ವಿದ್ಯಾರ್ಥಿಗಳ ಸಂಖ್ಯೆಯನ್ನೂ ಕಡಿಮೆ ಮಾಡಿದರೆ 'ಮಾದರಿ ಗೋಶಾಲೆ'ಗಳ ಸ್ವಪ್ನ ಸಾಕಾರವಾದೀತು.

ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ 1,500 ಬಸ್‌ಗಳನ್ನು ಖರೀದಿಸಲಾಗುವುದು- ಶ್ರೀರಾಮುಲು, ಸಚಿವ
ವ್ಯವಹಾರ ಅಂದ ಮೇಲೆ ಸಂಖ್ಯೆಗಿಂತ ಪರ್ಸೆಂಟೇಜ್ ಮುಖ್ಯ.

ರೈತರು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಬೇಕು- ಪ್ರಭು ಚವ್ಹಾಣ್, ಸಚಿವ
ಯಾಕೆ, ಹಸಿದು ನರಳಿ ಸಾಯಲಿಕ್ಕೆಂದೇ?

ಶವ ಹೊರುವುದಕ್ಕೂ ಜಿಎಸ್‌ಟಿ ವಿಧಿಸುವ ದಿನ ದೂರವಿಲ್ಲ- ಯು.ಟಿ.ಖಾದರ್, ಶಾಸಕ
ಜನಸಾಮಾನ್ಯನನ್ನು ಶವವಾಗಿಸುವುದಕ್ಕಾಗಿ ಜಿಎಸ್‌ಟಿ ಹೇರಿದ ದಯಾಳುಗಳು ಅಂತಹ ಕ್ರೌರ್ಯ ಮೆರೆದರೆ ಅಚ್ಚರಿ ಏನಿಲ್ಲ.

ವಿರಾಟ್ ಕೊಹ್ಲಿ ಅವರು ಹಳೆಯ ಲಯಕ್ಕೆ ಮರಳಲು ಬೇಕಾದ ಸಲಹೆಗಳನ್ನು ನೀಡಲು ಸಿದ್ಧ- ಸುನಿಲ್ ಗವಾಸ್ಕರ್, ಭಾರತದ ಮಾಜಿ ಕ್ರಿಕೆಟಿಗ
ಸೋತ ಕುದುರೆ ಅದು. ಲಾಯಕ್ಕೆ ಮರಳುವುದೇ ವಾಸಿ. ಶ್ರೀಲಂಕಾ ಅಧ್ಯಕ್ಷರಂತೆ ನರೇಂದ್ರ ಮೋದಿ ದೇಶ ಬಿಟ್ಟು ಓಡುವ ದಿನ ದೂರವಿಲ್ಲ- ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಹಾಗಾದರೆ ಪರವಾಗಿಲ್ಲ. ನೂರ ಮೂವತ್ತು ಕೋಟಿ ಮಂದಿಯನ್ನು ದೇಶದಿಂದ ಓಡಿಸುವ ಸಂಚು ಹೂಡಿದರೇನು ಮಾಡುವಿರಿ?

ಪಕ್ಷ ಬಹುಮತ ಪಡೆದಾಗ ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವ ಸಾಧ್ಯತೆ ಹೆಚ್ಚು- ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಹಾಗೆ ಪಕ್ಷ ಬಹುಮತ ಪಡೆಯುವ ಕಾಲದಲ್ಲಿ ನಿಮ್ಮ ಸುಪುತ್ರ ಕೆಪಿಸಿಸಿ ಅಧ್ಯಕ್ಷರಾಗಿರುವಂತೆ ನೋಡಿಕೊಳ್ಳಿ.

ಮನೆ ದೇವರು, ತಾಯಿ ಚೌಡೇಶ್ವರಿ ನನ್ನನ್ನು (40 ಶೇ.) ಆರೋಪದಿಂದ ಮುಕ್ತಳಾಗಿಸಿದ್ದಾಳೆ- ಕೆ.ಎಸ್.ಈಶ್ವರಪ್ಪ, ಶಾಸಕ
ನಿಮ್ಮ ಕಮಿಷನ್ ಕಳಂಕವನ್ನು ತಾಯಿ ಚೌಡಮ್ಮನಿಗೆ ಯಾಕೆ ಅಂಟಿಸುತ್ತೀರಿ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top