ಓ ಮೆಣಸೇ ...
-

ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರೇ ಮುರುಘಾಶ್ರೀಗಳನ್ನು ಹಾಳುಮಾಡಿದ್ದಾರೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಅವರು ಹಾಳಾಗಿರುವುದು ಹೌದು ಎಂದು ನೀವು ಒಪ್ಪಿಕೊಂಡಿರುವುದು ಮುಖ್ಯ.
ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷ ಭಾರತದಿಂದ ಕಣ್ಮರೆಯಾಗುತ್ತಿದ್ದು, ಇಲ್ಲಿ ಭವಿಷ್ಯ ಇರುವ ಏಕೈಕ ಪಕ್ಷ ಎಂದರೆ ಬಿಜೆಪಿ ಮಾತ್ರ - ಅಮಿತ್ ಶಾ, ಕೇಂದ್ರಸಚಿವ
ಹಾಗೆ ನಂಬಿಕೊಂಡಿದ್ದವರೆಲ್ಲಾ ಇತಿಹಾಸವಾಗಿ, ನೆನಪುಗಳ ಜಗತ್ತಿನಿಂದಲೂ ಮರೆಯಾಗಿ ಬಿಟ್ಟಿದ್ದಾರೆ.
ಶಬಾನ ಆಝ್ಮಿ ಮತ್ತು ನಾಸಿರುದ್ದೀನ್ ಶಾ ಇಬ್ಬರೂ ತುಕ್ಡೆ ತುಕ್ಡೆ ಗ್ಯಾಂಗಿನ ಸ್ಲೀಪರ್ ಸೆಲ್ಗಳು - ನರೋತ್ತಮ ಮಿಶ್ರಾ, ಮಧ್ಯಪ್ರದೇಶ ಸಚಿವ
ನಿಮ್ಮ ಹೊಲಸು ಗ್ಯಾಂಗ್ ಅನ್ನು ತುಕ್ಡೆ ತುಕ್ಡೆ ಮಾಡುವುದಕ್ಕೆ ಇಂತಹ ಹಿರಿಯ ಕಲಾವಿದರ ಅಗತ್ಯವಿಲ್ಲ. ಆಕ್ರೋಶಿತ ಜನಸಾಮಾನ್ಯರೇ ಆ ಕೆಲಸ ಮಾಡುವುದಕ್ಕೆ ಕಾಯುತ್ತಿದ್ದಾರೆ.
ದಿಲ್ಲಿ ಸಿಎಂ ಕೇಜ್ರಿವಾಲ್ 'ಯೂಟರ್ನ್' ಹೊಡೆಯುವುದರಲ್ಲಿ ದೇಶದಲ್ಲೇ ನಿಸ್ಸೀಮ ನಾಯಕ - ತೇಜಸ್ವಿ ಸೂರ್ಯ, ಸಂಸದ
ಎಲ್ಲರೂ ನಿಮ್ಮಂತೆ ಕೇವಲ ಬೆಣ್ಣೆ ದೋಸೆ ತಿನ್ನುತ್ತಾ ನೆರೆ ವಿನಾಶದ ದೃಶ್ಯಗಳನ್ನು ಎಂಜಾಯ್ ಮಾಡುವ ನಿಸ್ಸೀಮರಾಗಿರುವುದಿಲ್ಲ.
ಬಿಜೆಪಿಯನ್ನು ಎದುರಿಸಬೇಕೆಂದರೆ ಪ್ರತಿಪಕ್ಷಗಳೆಲ್ಲ ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕಾದ ಅನಿವಾರ್ಯತೆ ಇದೆ -ನಿತೀಶ್ ಕುಮಾರ್, ಬಿಹಾರ ಸಿಎಂ
ಯಾರ ನೇತೃತ್ವದಲ್ಲಿ ಒಂದಾಗಬೇಕು ಎಂಬುದನ್ನೂ ಮುಂದಾಗಿಯೇ ತಿಳಿಸಿಬಿಡಿ. ಭವಿಷ್ಯದಲ್ಲಿ ಜಗಳ ಬೇಡ.
ಗುಜರಾತ್ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಕಾರ್ಯಕರ್ತರಿಗೆ ಬಂಪರ್ ಕೊಡುಗೆ ನೀಡಲಿದೆ - ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
ಯಾವುದೇ ರಾಜ್ಯದಲ್ಲಿ ಬಿಜೆಪಿ ಗೆದ್ದರೂ ನಿಮ್ಮ ಪಕ್ಷ ಗೆದ್ದರೂ ಲಾಭವಾಗುವುದು ಆರೆಸ್ಸೆಸ್ ಎಂಬ ಮಾತೃ ಪಕ್ಷಕ್ಕೆ.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದು ವಿರೋಧಿಗಳಿಗೆ ಗೊತ್ತಾಗಲಿದೆ - ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಚುನಾವಣೆಗೆ ನಿಂತಿದ್ದು ಬಿಜೆಪಿ ಪರವಾಗಿ ಎಂಬುದು ಸರಕಾರ ರಚನೆಯ ವೇಳೆ ಜನತೆಗೆ ತಿಳಿಯಲಿದೆಯೇ?
ಮಂಡ್ಯದಲ್ಲೂ ಸ್ಥಳೀಯ ಪ್ರತಿನಿಧಿಗಳು ಟೆಂಡರ್ ಆಗುತ್ತಿದ್ದಂತೆ ಕಮಿಶನ್ ಕೇಳುತ್ತಿದ್ದಾರೆ -ಸುಮಲತಾ ಅಂಬರೀಷ್, ಸಂಸದೆ
ನೀವು ಪುಣ್ಯವಂತರು. ಎಷ್ಟೋ ಕಡೆ ಟೆಂಡರ್ಗಿಂತಲೂ ಮುನ್ನವೇ ಕಮಿಶನ್ ಎಂಬ ನಿಯಮವಿದೆ.
ದೇಶದ ಜನ ಇಂದು ಏನೇ ಕೊಂಡುಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಇದು ಟೀ ಶರ್ಟ್ಗೂ ಅನ್ವಯಿಸುತ್ತದೆಯೇ?
ನಾವು ಯಾರೂ ಕಾನೂನು ಪಾಲನೆಯಲ್ಲಿ ಪೊಲೀಸರು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಬಾಯಿ ಹಾಕುವುದಿಲ್ಲ -ಮಾಧುಸ್ವಾಮಿ, ಸಚಿವ
ಮೂಗು ಮಾತ್ರ ತೂರಿಸುತ್ತೀರಾ?
ಜಮ್ಮು - ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ಮರಳಿ ಕೊಡಿಸುವುದೇ ನಮ್ಮ ಪಕ್ಷದ ಮೂಲ ಧ್ಯೇಯ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮಾಜಿ ನಾಯಕ
ಸದ್ಯ ಯಾವ ಪಕ್ಷದ ಕಡೆಯಿಂದ ಮಾತಾಡ್ತಿದ್ದೀರಿ?
ಸಂಸಾರಿಗಳೇ ಮಠದ ಸ್ವಾಮೀಜಿಗಳಾಗಲಿ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಪತ್ನಿ ಹತ್ಯೆಯಂತಹ ಹಗರಣಗಳು ಮಠಗಳಲ್ಲಿ ನಡೆಯಲಾರಂಭಿಸಿದರೆ?
ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕೇವಲ ಟ್ರೇಲರ್ ಮಾತ್ರ - ಡಾ.ಕೆ.ಸುಧಾಕರ್, ಸಚಿವ
ಇನ್ನಷ್ಟು ನಿರಾಶಾದಾಯಕ ದೃಶ್ಯಗಳಿಗಾಗಿ ಜನರು ಮುಂದಿನ ಸಭೆಯ ತನಕ ಕಾಯಬೇಕೇ?
ರಾಜಕೀಯದಲ್ಲಿ ಯಾವುದನ್ನು ಬೇಕಾದರೂ ಸಹಿಸಬಹುದು ಆದರೆ ವಿಶ್ವಾಸ ದ್ರೋಹವನ್ನು ಸಹಿಸಲಾಗದು -ಅಮಿತ್ ಶಾ, ಕೇಂದ್ರ ಸಚಿವ
ಆದ್ದರಿಂದಲೇ ಜನರು ನಿಮ್ಮ ವಿರುದ್ಧ ಅಷ್ಟೊಂದು ಆಕ್ರೋಶಿತರಾಗಿರುವುದು.
ದೋಷಪೂರಿತ ರಸ್ತೆ ವಿನ್ಯಾಸಗಳೇ ಕೆಲವು ಅಪಘಾತಗಳಿಗೆ ಕಾರಣ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಉಳಿದವುಗಳಿಗೆಲ್ಲಾ ನೆಹರೂ ಸರಕಾರ ಕಾರಣವೇ?
ರಾಹುಲ್ ಗಾಂಧಿ ಉಕ್ರೇನ್ - ರಶ್ಯ ಯುದ್ಧದ ಬಳಿಕ ಜಾಗತಿಕವಾಗಿ ಉದ್ಭವಿಸಿರುವ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮತ್ತು ನೀವು, ಯುಪಿಎ ಅಧಿಕಾರದಲ್ಲಿದ್ದಾಗ ಏನೆಲ್ಲಾ ಹೇಳಿದ್ದಿರೆಂಬುದನ್ನು ನೆನಪಿಸಿಕೊಂಡು ಮಾತನಾಡಬೇಕು.
ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ ಪಕ್ಷವು ಬುಡಕಟ್ಟು ಮುಖ್ಯಮಂತ್ರಿಯಿಂದ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ -ಹೇಮಂತ್ ಸೋರೇನ್, ಜಾರ್ಖಂಡ್ ಸಿಎಂ
ನಿರಕ್ಷರಿಯನ್ನು ಪ್ರಧಾನಿಯಾಗಿಸಿದ್ದರಿಂದ ನಿರಕ್ಷರಿಗಳ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಆದ್ದರಿಂದ ಬುಡಕಟ್ಟು ಮುಖ್ಯಮಂತ್ರಿಯೊಬ್ಬ ಹುದ್ದೆ ಕಳಕೊಂಡರೆ ಬುಡಕಟ್ಟಿನವರಿಗೇನೂ ನಷ್ಟವಾಗುವುದಿಲ್ಲ.
ಹಣದುಬ್ಬರವು ನಿಯಂತ್ರಿಸಬಹುದಾದ ಮಟ್ಟಕ್ಕೆ ಇಳಿಕೆಯಾಗಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಆದರೂ ನೀವೇಕೆ ನಿಯಂತ್ರಿಸುತ್ತಿಲ್ಲ ಎಂದು ಜನ ಅಚ್ಚರಿ ಪಡುತ್ತಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ನಾವು ಸಣ್ಣ-ಪುಟ್ಟ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ -ಸಿ.ಟಿ.ರವಿ, ಶಾಸಕ|
ಆದ್ದರಿಂದ ದೊಡ್ಡ ದೊಡ್ಡ ಸಮಸ್ಯೆಗಳನ್ನೆಲ್ಲ ನಿರ್ಲಕ್ಷಿಸಿ ಬಿಡುತ್ತೇವೆ.
ಅಗ್ನಿವೀರರಾಗಿ ಸೇವೆ ಸಲ್ಲಿಸಿದ ರಾಜ್ಯದ ಯುವಕರಿಗೆ ರಾಜ್ಯದ ಸರಕಾರಿ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡುವ ಚಿಂತನೆ ಇದೆ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ರಾಜಕಾರಣಿಗಳ ಮನೆ ಗೇಟು ಕಾಯುವುದಕ್ಕೆ ಸೆಕ್ಯೂರಿಟಿ ಗಾರ್ಡ್ ಕೊರತೆ ಇರಬೇಕು.
ಬದುಕಲು ಬೇಕಾದ ಜ್ಞಾನವನ್ನು ಕಲಿಸಿದ ಗುರುಗಳಿಗೆ ನನ್ನ ಮೊದಲನೇ ನಮಸ್ಕಾರಗಳು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜಕೀಯದಲ್ಲಿ ಬದುಕಲು ಕಲಿಸಿದ ಗುರುಗಳಿಗೆ ಇರಬೇಕು.
ದೇಶ ರಕ್ಷಣೆಗೆ ರಾಜ್ಯದ ಪ್ರತೀ ಮನೆಯ ಕನಿಷ್ಠ ಒಬ್ಬನಾದರೂ ಸೈನಿಕ ಸೇವೆಗೆ ಸೇರ್ಪಡೆಯಾಗಬೇಕು - ಎಸ್.ಅಂಗಾರ, ಸಚಿವ
ನಿಮ್ಮ ಮನೆಯಿಂದಲೇ ಆರಂಭವಾಗಲಿ.
ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕುದುರೆ ಎಂದು ಕತ್ತೆಯನ್ನು ಕೊಡುವವರಿದ್ದಾರೆ. ಎಚ್ಚರಿಕೆ.
ಕಾಂಗ್ರೆಸ್ ಆರೆಸ್ಸೆಸ್ ತತ್ವವನ್ನು ಅಳವಡಿಸಿಕೊಂಡರೆ ಆ ಪಕ್ಷದ ಪರವಾಗಿ ಕೆಲಸಮಾಡಲು ಸಿದ್ಧ -ಅರುಣ್ ಕುಮಾರ್, ಆರೆಸ್ಸೆಸ್ ಪ್ರಚಾರ ಪ್ರಮುಖ
ಅಳವಡಿಸಿಕೊಂಡಿಲ್ಲ ಎಂದವರಾರು. ಅದನ್ನು ಬಹಿರಂಗಪಡಿಸಿಲ್ಲ ಅಷ್ಟೇ.
ಸಂಕಷ್ಟ ಕಾಲದಲ್ಲೂ ಸಹಾಯ ಮಾಡಬಲ್ಲ ಅತ್ಯಂತ ನಂಬುಗೆಯ ದೇಶ ಭಾರತ - ಶೇಕ್ ಹಸೀನಾ, ಬಾಂಗ್ಲಾ ಪ್ರಧಾನಿ
ರಾಜಕಾರಣಿಗಳ ರಾಜಕೀಯ ಸಂಕಷ್ಟ ಕಾಲದ ಕೊಡು ಕೊಳ್ಳುವಿಕೆಯ ಬಗ್ಗೆ ಹೇಳುತ್ತಿರಬೇಕು.
ದಲಿತರು ತಮ್ಮಳಗಿನ ಒಳಪಂಗಡಗಳ ವ್ಯತ್ಯಾಸ ಮರೆತು ಒಂದಾದಾಗ ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಕೂಗಿಗೆ ಸಮರ್ಥನೆ ಸಿಗುತ್ತದೆ - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಒಟ್ಟಿನಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ದಲಿತರು ಒಂದಾಗಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.