ಓ ಮೆಣಸೇ ..
-

ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಪ್ರಾಡಕ್ಟ್ ಮಾದರಿಯಲ್ಲಿ ರೂಪಿಸುವುದು ಸರಿಯಲ್ಲ- ಬಿ.ಸಿ.ನಾಗೇಶ್, ಸಚಿವ
ಪ್ರಾಡಕ್ಟ್ ಮಾದರಿಯಲ್ಲಿ ರೂಪಿಸಿದರೆ ಅವರನ್ನು ಹಿಂಸೆ, ಗಲಭೆ ಇತ್ಯಾದಿಗಳಿಗಾಗಿ ಬಳಸಲು ಸಾಧ್ಯವಾಗುವುದಿಲ್ಲವೇ?
ಕೊಲ್ಲಲು, ಕದಿಯಲು, ನಾಶ ಮಾಡಲು ಸಾಧ್ಯವಾಗದೇ ಇರುವ ಒಂದೇ ಆಸ್ತಿ ಜ್ಞಾನ- ಸುಧಾಮೂರ್ತಿ, ಸಂಸ್ಥಾಪಕರು ಇನ್ಫಿ ಫೌಂಡೇಶನ್
ಹಿಂದೊಮ್ಮೆ ಅಂತಹ ನಂಬಿಕೆಯೊಂದು ಇದ್ದದ್ದು ನಿಜ. ಆದರೆ ನಿಮಗೆ ತುಂಬಾ ಬೇಕಾದ ಕೆಲವರು ಜ್ಞಾನವನ್ನು ಬೇಕಾಬಿಟ್ಟಿ ತಿರುಚಿ, ವಿಂಗಡನೆ ಮತ್ತು ವಿಭಜನೆಯ ಅಸ್ತ್ರವಾಗಿ ಬಳಸಿಕೊಂಡ ಬಳಿಕ ಆ ನಂಬಿಕೆ ಧ್ವಂಸವಾಗಿದೆ.
ಬಿಜೆಪಿ ನಾಯಕರು ನನ್ನನ್ನು ಮಂತ್ರಿ ಮಾಡಲಿ, ಬಿಡಲಿ ನಾನಂತೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ- ರಮೇಶ್ ಜಾರಕಿಹೊಳಿ, ಶಾಸಕ
ಅನುಭವಸ್ಥರು ಇಂತಹ ಹೇಳಿಕೆಗಳನ್ನು ಪಕ್ಷ ಬಿಟ್ಟೋಡುವುದಕ್ಕೆ ಮುನ್ನುಡಿಯಾಗಿ ಪರಿಗಣಿಸುತ್ತಾರೆ.
ಯಾವುದೇ ದೇಶವು ಏಕಾಂಗಿಯಾಗಿ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿಲ್ಲ- ಅಮಿತ್ ಶಾ, ಕೇಂದ್ರ ಸಚಿವ
ಆದರೆ ಅದಕ್ಕಾಗಿ ದೇಶದ ಒಂದು ದೊಡ್ಡ ಭಾಗವನ್ನು ಚೀನಾದವರಿಗೆ ಬಿಟ್ಟುಕೊಡಬೇಕಾಗಿಲ್ಲ.
ತಮಿಳಿನ ಪರಂಪರೆಯನ್ನು ಉಳಿಸಿ ಬೆಳೆಸುವುದು 130 ಕೋಟಿ ಭಾರತೀಯರ ಜವಾಬ್ದಾರಿಯಾಗಿದೆ- ನರೇಂದ್ರ ಮೋದಿ, ಪ್ರಧಾನಿ
ಇದಕ್ಕೆ ಬದಲಾಗಿ ಯಾರದೂ ಅಲ್ಲದ ಸಂಸ್ಕೃತವನ್ನು ಉಳಿಸಿ ಬೆಳೆಸಲು ತಮಿಳರು ಒಪ್ಪುತ್ತಾರೆಯೇ?
ಭಾರತ ಯಶಸ್ವಿ ರಾಷ್ಟ್ರ ಆಗಬೇಕಾದರೆ ದಾಸ್ಯದ ಕುರುಹುಗಳನ್ನು ಅಳಿಸಿ ಹಾಕಬೇಕು- ಡಿ.ವಿ.ಸದಾನಂದ ಗೌಡ, ಸಂಸದ
ದಾಸ್ಯ ಹೇರಿದವರನ್ನು ದಾಸ್ಯದ ಕುರುಹುಗಳೆಂದು ಕರೆಯುತ್ತೀರಾ?
ನಿಜವಾದ ಸಾಧಕರ ಬದಲು ಸಮಯ ಸಾಧಕರೇ ಪ್ರಶಸ್ತಿಗಳಿಗೆ ಅರ್ಹರಾಗುವ ಕಾಲವಿದು- ಮಹೇಶ್ ಜೋಷಿ, ಕಸಾಪ ಅಧ್ಯಕ್ಷ
ಈ ಮಾತು ಪರಿಷತ್ ಅಧ್ಯಕ್ಷ ಸ್ಥಾನಕ್ಕೂ ಅನ್ವಯಿಸುವುದಿಲ್ಲವೇ?
ಮುಂದೊಂದು ದಿನ ಶ್ರೀರಾಮುಲು ಮುಖ್ಯಮಂತ್ರಿಯಾಗುವ ಕಾಲ ಬರುತ್ತೆ- ಬಸವರಾಜ ಬೊಮ್ಮಾಯಿ, ಸಿಎಂ
ನೀವು ಮುಖ್ಯಮಂತ್ರಿಯಾದಾಗಲೇ ಜನತೆಗೆ ಆ ತರದ ಭಯ ಉಂಟಾಗಿತ್ತು.
ಮುಂದಿನ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಖರ್ಗೆ ಮತ್ತು ಹೈಕಮಾಂಡ್ಗೆ ಮಾತ್ರ ಇದೆ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಮ್ಮ ಕೆಲಸ ಪಟ್ಟಿ ತಯಾರಿಸಿ ಅವರ ಕೈಗೆ ಕೊಟ್ಟು 'ಇದನ್ನೊಮ್ಮೆ ಜೋರಾಗಿ ಓದಿ ಬಿಡಿ' ಎಂದು ಆದೇಶಿಸುವುದು ಮಾತ್ರವೇ?
ಜೆಡಿಎಸ್ನಲ್ಲಿ ಎಚ್.ಡಿ.ಕುಮಾರ ಸ್ವಾಮಿ ಬಳಿಕ ನಾನೇ ಸಿಎಂ ಅಭ್ಯರ್ಥಿ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನೀವು ಹೀಗೆಲ್ಲಾ ಹೇಳಿ ಜನರಿಗೆ ಬೆದರಿಕೆ ಒಡ್ಡಿದರೆ ಅವರೆಲ್ಲಾ ಸೇರಿ ಕುಮಾರ ಸ್ವಾಮಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾರಂಭಿಸುತ್ತಾರೆ.
ಭಯೋತ್ಪಾದನೆಯ ಮೂಲವನ್ನು ಹುಡುಕುವ ಕೆಲಸವಾಗಬೇಕು- ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಂದಾಳು
ನಿಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಹೇಗೆ?
ಬಿಜೆಪಿಗೆ ಸಂಘಟನಾತ್ಮಕ ಶಕ್ತಿ ತುಂಬುವಲ್ಲಿ ಉಡುಪಿಗೆ ಐತಿಹಾಸಿಕ ಹಿನ್ನೆಲೆ ಇದೆ -ರಘುಪತಿ ಭಟ್, ಶಾಸಕ
ಕೋಮು ಧ್ರುವೀಕರಣವನ್ನೇ ತನ್ನ ಸಂಘಟನಾ ಶಕ್ತಿಯಾಗಿಸಿಕೊಂಡ ಪಕ್ಷಕ್ಕೆ, ಧ್ರುವೀಕರಣದಲ್ಲಿ ತಜ್ಞರಾಗಿರುವ ನಿಮ್ಮ ಬಳಗದ ಕೊಡುಗೆ ನಿಜಕ್ಕೂ ಗಣ್ಯ.
ಕಾಂಗ್ರೆಸ್ನವರ ಸುಳ್ಳಿನ ವಿರುದ್ಧ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಇಂದಿನ ಅಗತ್ಯ - ತೇಜಸ್ವಿ ಸೂರ್ಯ, ಸಂಸದ
ಅದ್ಕಕಾಗಿ ನೀವು ಜೀವನದಲ್ಲಿ ಒಂದೆರಡು ಬಾರಿಯಾದರೂ ಸತ್ಯ ಹೇಳಿ ಹೊಸ ಅನುಭವ ಪಡೆದುಕೊಳ್ಳಬೇಕಾಗುತ್ತದೆ.
ಸರ್ವ ಧರ್ಮಗಳ ಸಾರವೂ ಒಂದೇ ಆಗಿದ್ದು ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು, ಪ್ರೀತಿಸಬೇಕು - ಸ್ಮತಿ ಇರಾನಿ, ಕೇಂದ್ರ ಸಚಿವೆ
ಸಿಲಿಂಡರ್ ಕುರಿತಾದ ನಿಮ್ಮ ಮಾತನ್ನೇ ಲೇವಡಿ ಮಾಡುವ ಜನತೆ ಧರ್ಮದ ವಿಷಯದಲ್ಲಿ ನಿಮ್ಮ ಮಾತಿಗೆ ಯಾವ ಬೆಲೆ ಕೊಡುತ್ತಾರೆ?
ಗುಜರಾತ್ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವಿನ ಸಂಬಂಧ, ಮದುವೆಗೆ ಮುನ್ನ ರಹಸ್ಯವಾಗಿ ಭೇಟಿಯಾಗುವ ಹುಡುಗ -ಹುಡುಗಿಯಂತಿದೆ - ಅರವಿಂದ ಕ್ರೇಜಿವಾಲ್, ದಿಲ್ಲಿ ಸಿಎಂ
ನಿಮ್ಮ ಪಕ್ಷ ಈಗಾಗಲೇ ಬಿಜೆಪಿಯನ್ನು ವರಿಸಿ ಹಲವು ಮಕ್ಕಳನ್ನು ಹಡೆದಿರುವಂತೆ ವರ್ತಿಸುವುದೇಕೆ?
'ದಿ ಕಾಶ್ಮೀರ್ ಫೈಲ್ಸ್' ಸಿನೆಮಾದಿಂದ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯ ಜಗತ್ತಿಗೇ ತಿಳಿಯುವಂತಾಯಿತು - ಅನುಪಮ್ ಖೇರ್, ನಟ
ಜೊತೆಗೆ ನಿಮ್ಮ ಬಿಳಿ ಚರ್ಮದ ಹಿಂದೆ ಅವಿತಿದ್ದ ಕರಾಳ ಮಾನಸಿಕತೆ ಕೂಡಾ ಬಯಲಾಯಿತು.
2047ರ ವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಟಾಪ್ 3ನೇ ಸ್ಥಾನಕ್ಕೆ ಏರಲಿದೆ - ಮುಕೇಶ್ ಅಂಬಾನಿ, ಉದ್ಯಮಿ
ಅದಕ್ಕೆ ಮುನ್ನ ಇಡೀ ದೇಶವನ್ನು ಖಾಸಗೀಕರಿಸಿ ವಶಪಡಿಸಿಕೊಳ್ಳುವ ತಯಾರಿಯಲ್ಲಿದ್ದೀರಾ?
ಎಸ್.ಸಿ, ಎಸ್.ಟಿ ಪಂಗಡಕ್ಕೆ ಮೀಸಲಾತಿ ತಂದುಕೊಟ್ಟ ಗಂಡೆದೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ - ಯಡಿಯೂರಪ್ಪ, ಮಾಜಿ ಸಿಎಂ
ಆದ್ದರಿಂದ ಅಂಬೇಡ್ಕರ್ ಚಿತ್ರ, ವಿಗ್ರಹ ಇತ್ಯಾದಿಗಳನ್ನೆಲ್ಲ ಕಿತ್ತೆಸೆದು ಆ ಜಾಗಗಳಲ್ಲಿ ಬೊಮ್ಮಾಯಿ ಚಿತ್ರ, ವಿಗ್ರಹ ಇತ್ಯಾದಿಗಳನ್ನು ಸ್ಥಾಪಿಸೋಣವೇ?
ದೇಶದೊಳಗೆ ಇರುವ ಕಾರಣಕ್ಕೆ ಬೆಳಗಾವಿ ಪ್ರದೇಶಗಳು ಸುರಕ್ಷಿತವಾಗಿವೆ -ಸಿ.ಟಿ.ರವಿ ಶಾಸಕ
ಇಲ್ಲೂ ವಿದೇಶಿ ಕೈವಾಡಕ್ಕೆ ಆಸ್ಪದ ಕಾಣುತ್ತಿದ್ದೀರೇನು?
ಮದುವೆ ಯಾಕೆ ಆಗಬೇಕೆಂದು ನನಗೆ ಅರ್ಥವಾಗುತ್ತಿಲ್ಲ - ರಮ್ಯ, ನಟಿ
ನಮ್ಮ ಸುತ್ತ ಮುತ್ತ ಇರುವ ದನ, ನಾಯಿ, ಹಂದಿ ಇತ್ಯಾದಿಗಳಲ್ಲಿ ನಮಗೆ ಸಾಕಷ್ಟು ಮಾದರಿ ಇದೆ.
ಪ್ರಧಾನಿ ಮೋದಿಯಂತಹ ಪ್ರಭಾವಿ, ಬಲಶಾಲಿ ನಾಯಕರಿಲ್ಲದೇ ಹೋಗಿದ್ದರೆ ದೇಶದ ಪ್ರತೀ ನಗರದಲ್ಲಿ ಅಫ್ತಾಬ್ನಂತಹ ಕಿರಾತಕರು ಸೃಷ್ಟಿಯಾಗುತ್ತಿದ್ದರು- ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಸಿಎಂ
2002ರ ಗುಜರಾತ್ ನ ಕಿರಾತಕರು ನಮ್ಮ ಹೆಮ್ಮೆ ಎಂದು ಬಿಡುಗಡೆ ಮಾಡಿರುವುದು ಇದೇ ಕಾರಣಕ್ಕೆ ಇರಬಹುದೇ ?
ಪ್ರಧಾನಿ ಮೋದಿ ಆರೆಸ್ಸೆಸ್ ಸ್ವಯಂ ಸೇವಕ. ಆದರೆ ಸಂಘ ಅವರನ್ನು ನಿಯಂತ್ರಣ ಮಾಡುವುದಿಲ್ಲ- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಸೇವಕ ಎಂದು ನೀವೇ ಕರೆದ ಮೇಲೆ ಇನ್ನೇನು ಉಳಿಯಿತು ?
ಕೇದ್ರದ ಎನ್ಡಿಎ ಸರಕಾರವೇ ಈ ದೇಶದ ಅತ್ಯಂತ ದೊಡ್ಡ ವಸೂಲಾಗದ ಸಾಲ (ಎನ್ಪಿಎ) - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್ ಪಕ್ಷವೆನ್ನುವ ಬ್ಯಾಂಕ್ ದಿವಾಳಿ ಕೂತಿರುವುದು ಇದೇ ಕಾರಣಕ್ಕೆ ಇರಬಹುದು.
ದಿಲ್ಲಿಯಲ್ಲಿ ಯಮುನಾ ನದಿಯು ಆಪ್ ಪಕ್ಷದ ಪಾಪದಿಂದಾಗಿಯೇ ಮಲಿನವಾಗಿದೆ - ಮೀನಾಕ್ಷಿ ಲೇಖಿ , ಕೇಂದ್ರ ಸಚಿವೆ
ಗಂಗಾನದಿಯ ಮಾಲಿನ್ಯದ ಬಗ್ಗೆಯೂ ಹೇಳಿ.
2023ರ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಕೇಳಿದರೆ ನಮ್ಮ ಕುಟುಂಬಕ್ಕೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ- ಡಾ .ಶಾಮನೂರು ಶಿವಶಂಕರಪ್ಪ, ಶಾಸಕ
ಯಾವುದೋ ಡಬ್ಬಾ ಸಿನೆಮಾದ ಟಿಕೆಟ್ ಬಗ್ಗೆ ಹೇಳುತ್ತಿರಬೇಕು.
ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರಿಗೆ ಡಿಸಿಎಂ ಹುದ್ದೆ ನೀಡಲಾಗುವುದು- ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಕೇಂದ್ರದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಯಾರಿಗೆ ಏನು ಸಿಗುತ್ತೆ ಎಂಬುದನ್ನೂ ಘೋಷಿಸಿ. ಜನರಿಗೆ ಮನರಂಜನೆಯಾದರೂ ಸಿಗಲಿ.
ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಶೂಟೌಟ್ ಮಾಡುವವರೆಗೂ ಸಮಾಜ ಸುಧಾರಣೆ ಆಗುವುದಿಲ್ಲ -ಕೆ.ಎಸ್.ಈಶ್ವರಪ್ಪ, ಶಾಸಕ
ಹತಾಶೆಯಲ್ಲಿ ಆತ್ಮಾಹುತಿ ಕಾರ್ಯಾಚರಣೆಗೆ ರೆಡಿಯಾದಂತಿದೆಯಲ್ಲಾ!
ಸೂರ್ಯ-ಚಂದ್ರರಿರುವ ತನಕ ಶಿವಾಜಿ ಮಹಾರಾಷ್ಟ್ರದ ಮಾದರಿ ನಾಯಕರಾಗಿ ಉಳಿಯುತ್ತಾರೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಅಷ್ಟು ದೊಡ್ಡ ನಾಯಕನನ್ನು ಜುಜುಬಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವಾಗ ನಾಚಿಕೆ ಆಗುವುದಿಲ್ಲವೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.