ಓ ಮೆಣಸೇ...
-

ಸಾಹಿತಿ ಎಸ್.ಎಲ್.ಭೈರಪ್ಪ ಒಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಕೊಟ್ಟರೆ ಅವರು ಸುಮ್ಮನಾಗುತ್ತಾರೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಆ ಬೈರಪ್ಪ ಸುಮ್ಮನಿದ್ದು ಬಿಟ್ಟರೆ ಆತ ಅಜ್ಞಾನ ಪೀಠದ ಹೊರತು ಬೇರಾವುದಕ್ಕೂ ಯೋಗ್ಯನಲ್ಲ ಎಂಬುದು ಜನರಿಗೆ ನಿತ್ಯ ಮನವರಿಕೆಯಾಗುವುದು ಹೇಗೆ?
ಆರೆಸ್ಸೆಸ್ ಕೃಪಾಪೋಷಿತ ಬಿಜೆಪಿ ಆಡಳಿತದಿಂದ ದೇಶ 'ಕಾನೂನುರಹಿತ ಆಡಳಿತ'ದ ದುಸ್ಥಿತಿಗೆ ತಲುಪಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸ್ವತಃ ಆರೆಸ್ಸೆಸ್ ಬಹುಕಾಲ ಕಾಂಗ್ರೆಸ್ ಕೃಪಾ ಪೋಷಿತವಾಗಿತ್ತೆಂಬ ಇತಿಹಾಸ ನೆನಪಿರಲಿ.
ಕೇಂದ್ರ ಸರಕಾರಕ್ಕೆ ಸೇರಿದ 15 ವರ್ಷದಷ್ಟು ಹಳೆಯದಾದ ಎಲ್ಲ ವಾಹನಗಳನ್ನು ಗುಜರಿಗೆ ಹಾಕಲಾಗುವುದು - ನಿತಿನ್ ಗಡ್ಕರಿ, ಕೇಂದ್ರ ಸಚಿವ
60 ವರ್ಷ ಮೀರಿದ ಫುಡಾರಿಗಳಿಗೂ ಈ ನಿಯಮವನ್ನು ವಿಸ್ತರಿಸಿದರೆ ಹೇಗೆ?
ಒಂದು ಭಾಷೆ, ಒಂದು ದೇಶ ಎನ್ನುವ ಬಿಜೆಪಿಯವರಿಗೆ ಬೆಳಗಾವಿ ಎಲ್ಲಿದ್ದರೇನು? - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅವರ ಜೊತೆ ಕೈ ಮಿಲಾಯಿಸಲು ಸಂದರ್ಭ ಕಾಯುತ್ತಿರುವ ನಿಮಗೆ ಅವರು ಯಾವ ನಿಲುವು ತಾಳಿದರೇನಂತೆ?
ಸುರತ್ಕಲ್ ಟೋಲ್ ಗೇಟಿಗೂ ಹೆಜಮಾಡಿ ಟೋಲ್ಗೇಟ್ಗೂ ಯಾವುದೇ ಸಂಬಂಧ ಇಲ್ಲ - ರಘುಪತಿ ಭಟ್, ಶಾಸಕ
ಬಿಜೆಪಿ ಮತ್ತು ಬಜರಂಗದಳದಂತೆ?
ಗಡಿ ಗಲಾಟೆಯಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾಗುತ್ತದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಕೋಮು ಗಲಾಟೆಯಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದನ್ನೂ ಹೇಳಿ ಬಿಡಿ.
ಮುಸ್ಲಿಮರಿಗೆ ತುಪ್ಪವನ್ನು ನೆಕ್ಕಲು ಅಲ್ಲ ಮೂಸಲು ಕೂಡಾ ಬಿಡುವುದಿಲ್ಲ - ಸಿ.ಟಿ.ರವಿ, ಶಾಸಕ
ನಿಮ್ಮಂತಹ ಮಲಮೂತ್ರ ಭಕ್ಷಕರು ಮುಟ್ಟಿದ ತುಪ್ಪವನ್ನು ನೋಡಲು ಕೂಡಾ ಯಾರೂ ತಯಾರಿಲ್ಲ.
ಶ್ರವಣ ದೋಷಮುಕ್ತ ಕರ್ನಾಟಕಕ್ಕೆ ಬದ್ಧ -ಡಾ.ಸುಧಾಕರ್, ಸಚಿವ
ಮೊದಲು ನಿಮ್ಮ ಸರಕಾರದಲ್ಲಿ, ನೊಂದವರ ಆಕ್ರಂದನ ಕೇಳಬಲ್ಲ ಸಾಮರ್ಥ್ಯ ಬೆಳೆಸಿಕೊಳ್ಳಿ.
ಯಾರು ಜನಸಂಖ್ಯಾ ನಿಯಂತ್ರಣ ನೀತಿ ಪಾಲಿಸುವುದಿಲ್ಲವೋ ಅವರಿಗೆ ಸರಕಾರಿ ಸವಲತ್ತು ಮತ್ತು ಮತದಾನದ ಹಕ್ಕು ನೀಡಬಾರದು - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ದೇಶದ ಸಂವಿಧಾನವನ್ನೇ ಒಪ್ಪದ ನಿಮ್ಮಂಥವರನ್ನು ಎಲ್ಲಿಡಬೇಕೆಂದು ಮೊದಲು ತೀರ್ಮಾನಿಸಿ.
ಮುಂದಿನ ಬಾರಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗುತ್ತಾರೆ. ಒಂದು ವೇಳೆ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನೀವು ಹೀಗೆಲ್ಲ ಹೇಳಿದರೆ, ನೀವು ನಿವೃತ್ತರಾಗುವುದನ್ನು ಕಾಣುವುದಕ್ಕಾಗಿಯೇ ಜನ ಕುಮಾರಸ್ವಾಮಿಯನ್ನು ದೂರವಿಡುತ್ತಾರೆ.
ಹಿಂದೂಗಳ ಸಂಕೇತ ಬಳಸಿ ಉಗ್ರ ಕೃತ್ಯ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಗೋಡ್ಸೆಯ ಕಾಲದಿಂದ ನಡೆದು ಬಂದಿರುವ ದೀರ್ಘ ಪರಂಪರೆ ಅದು.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲೆಟ್ ಕಾಂಗ್ರೆಸ್ನ ಆಸ್ತಿ ಇದ್ದಂತೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಅವರ ಪರಸ್ಪರ ಜಗಳವನ್ನು ಬಿಜೆಪಿಯವರು ತಮ್ಮ ಅತಿದೊಡ್ಡ ಆಸ್ತಿ ಎಂದು ಪರಿಗಣಿಸಿದ್ದಾರೆ.
ದೇಶದ ಪ್ರತಿಯೊಬ್ಬರನ್ನೂಒಂದು ಎಂದು ಪರಿಗಣಿಸುವುದು ನಮ್ಮ ಕನಸು - ಮೋಹನ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಇಂತಹ ಸದ್ವಿಚಾರಗಳನ್ನು ನೀವು ಕನಸಿಗೆ ಮಾತ್ರ ಸೀಮಿತವಾಗಿಡುವುದೇಕೆ?
ನಡಾಫ್ಲಿಪಿಡ್ 'ಕಾಶ್ಮೀರ ಫೈಲ್ಸ್' ಚಿತ್ರವನ್ನು ಅಪಪ್ರಚಾರ, ಅಸಭ್ಯ ಎಂದು ಕರೆದಿರುವುದು ನಾಚಿಕೆ ಗೇಡಿನ ಸಂಗತಿ. ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ - ಅನುಪಮ್ ಖೇರ್, ನಟ
ದೇವರು ಅವರಿಗೆ ಇನ್ನಷ್ಟು ಒಳ್ಳೆಯ ಬುದ್ಧಿ ನೀಡಿದರೆ ಅವರು ಆ ಸಿನೆಮಾವನ್ನು ಇನ್ನಷ್ಟು ಉಗ್ರವಾಗಿ ಖಂಡಿಸುತ್ತಾರೆ.
ಮಹಿಳೆಯರು ಉಡುಪು ಧರಿಸಿದರೆ ಚಂದ, ಧರಿಸದಿದ್ದರೆ ಇನ್ನೂ ಚಂದ - ಬಾಬಾ ರಾಮ್ದೇವ್, ಯೋಗ ಗುರು
ನಿಮ್ಮಂತಹ ವಂಚಕರು ಬಾಯಿ ಮುಚ್ಚಿಕೊಂಡಿದ್ದರೆ ಚಂದ, ಜೈಲಲ್ಲಿದ್ದರೆ ಇನ್ನೂ ಚಂದ.
ನಮ್ಮೆಲ್ಲರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಿರ್ಭೀತಿಯಿಂದ ಓಡಾಡಲು ಧೈರ್ಯ ಬಂದಿದ್ದರೆ ಅದಕ್ಕೆ ಕಾರಣ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ - ಯು.ಟಿ.ಖಾದರ್, ಮಾಜಿ ಸಚಿವ
ಹಾಗೆ ಕೇವಲ ಓಡಾಡುತ್ತಿದ್ದರೆ ಯಾರಿಗೇನು ಲಾಭ? ಆ ಸಂವಿಧಾನದ ಮೌಲ್ಯಗಳನ್ನು ಅನುಷ್ಠಾನಿಸುವುದಕ್ಕೆ ಓಡಾಡುತ್ತಿರುವವರೇ ಅದರ ನೈಜ ರಕ್ಷಕರು.
ಕರ್ನಾಟಕ - ಮಹಾರಾಷ್ಟ್ರ ಗಡಿ ವಿಷಯ ಮುಗಿದ ಅಧ್ಯಾಯ. ಅನಗತ್ಯವಾಗಿ ಅದನ್ನು ಕೆದುಕುವ ಕೆಲಸಕ್ಕೆ ಯಾರೂ ಮುಂದಾಗಬಾರದು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮುಗಿದ ಅಧ್ಯಾಯಗಳನ್ನು ಕೆದಕಿ ಸಮಾಜಕ್ಕೆ ಬೆಂಕಿ ಹಚ್ಚುವ ಸಂಸ್ಕೃತಿಯನ್ನು ಪೋಷಿಸಿದ್ದೇ ನೀವು ತಾನೇ?
ಬಿಜೆಪಿ ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ - ನಳಿನ್ಕುಮಾರ್ ಕಟೀಲು, ಸಂಸದ
ದೇಶವನ್ನು ಮಾರಿ ವ್ಯಕ್ತಿಗಳ ಉದ್ಧಾರ ಮಾಡುವುದು ಸತ್ಕಾರ್ಯವೇ?
ನಾನು ಮತ್ತೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್ನೊಳಗೆ ನಿಮಗೆ ಬೆಂಬಲ ಸಿಗುವುದು ಖಚಿತವಿದೆಯೇ?
ಸೂರ್ಯ-ಚಂದ್ರರನ್ನು ಸಾಕ್ಷಿಯಾಗಿ ಹೇಳುತ್ತೇನೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ - ಯಡಿಯೂರಪ್ಪ, ಮಾಜಿ ಸಿಎಂ
ಸೂರ್ಯ-ಚಂದ್ರರನ್ನು ಹಣದಿಂದ ಕೊಂಡು ಕೊಳ್ಳುವ ಧೈರ್ಯವೇ?
ನಾನು ಜೈಲಿಗೆ ಹೋದಾಗ ನನ್ನ ಸಮುದಾಯದವರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದು ಅದಕ್ಕೆ ನಾನು ಋಣಿಯಾಗಿದ್ದೇನೆ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಮ್ಮ ಮೇಲಿನ ಕಳಂಕವನ್ನು ನಿಮ್ಮ ಸಮುದಾಯದ ಜನರ ಮೇಲೆ ಏಕೆ ಅಂಟಿಸುತ್ತೀರಿ?
ನಮ್ಮ ಬಸ್ಗೆ ಮಹಾರಾಷ್ಟ್ರದವರು, ಮಹಾರಾಷ್ಟ್ರದ ಬಸ್ಗೆ ನಾವು ಮಸಿ ಬಳಿಯುವುದರಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ಲಾಭವಾಗುತ್ತದೆ - ಶಿವರಾಮ ಹೆಬ್ಬಾರ್, ಸಚಿವ
ಬಸ್ಗಳ ಬದಲು ಎರಡು ರಾಜ್ಯಗಳ ರಾಜಕೀಯ ನಾಯಕರೇ ಪರಸ್ಪರ ಮುಖಕ್ಕೆ ಮಸಿ ಬಳಿದುಕೊಂಡರೆ ಹೇಗೆ?
ರಾಜ್ಯಾದ್ಯಂತ ನೂತನವಾಗಿ 30 ಆಡಳಿತ ಸೌಧ ನಿರ್ಮಿಸುವ ಪ್ರಸ್ತಾವವನ್ನು ಸಿಎಂಗೆ ಸಲ್ಲಿಸಲಾಗಿದೆ - ಆರ್.ಅಶೋಕ್, ಸಚಿವ
ಪ್ರಸ್ತಾವದಲ್ಲಿ ರಾಜಕಾರಣಿಗಳ ಶೇ.40 ಕಮಿಷನ್ ಉಲ್ಲೇಖವಾಗಿದೆಯೇ?
ಮಹಿಳಾ ಆಯೋಗವು ಹಲ್ಲಿಲ್ಲದ ಹಾವು, ಶಸ್ತ್ರವಿಲ್ಲದ ಸೈನ್ಯವಾಗಬಾರದು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಹಲ್ಲಿದ್ದಿದ್ದರೆ ಅಶ್ಲೀಲ ಸೀಡಿ ಪ್ರಕರಣದಲ್ಲಿ ಭಾಗವಹಿಸಿದವರೆಲ್ಲ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.