ಓ ಮೆಣಸೇ...
-

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಧಿಕಾರಿಗಳು ಮತ್ತು ಜನರ ನಡುವಿನ ಸಂಪರ್ಕ ಸೇತುವೆಯಾಗಿದೆ -ಆರ್.ಅಶೋಕ್, ಸಚಿವ
ಇತ್ತೀಚೆಗೆ ಯಾಕೋ ಸೇತುವೆ ಅಂದೊಡನೆ ಜನರು ಜೀವ ಭಯದಿಂದ ಕಂಪಿಸತೊಡಗುತ್ತಾರೆ.
---------------
ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ತೋರಿದ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಲದು -ರಾಜನಾಥ ಸಿಂಗ್, ಕೇಂದ್ರ ಸಚಿವ
ಆದರೆ ಅವರ ಶೌರ್ಯದ ತೆರೆ ಪುಢಾರಿಗಳ ಇಬ್ಬಂದಿತನವನ್ನು ಮರೆಸುವಷ್ಟು ವಿಶಾಲವಾಗಿಲ್ಲ.
---------------
ಸರ್ವರಿಗೂ ಉದ್ಯೋಗ ಕೊಡುವ ಏಕೈಕ ರಾಜ್ಯ ಕರ್ನಾಟಕ -ಡಾ.ಅಶ್ವತ್ಥನಾರಾಯಣ, ಸಚಿವ
ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಆ ಲಕ್ಷಾಂತರ ಕನ್ನಡಿಗರನ್ನು ವಿದೇಶಿಗಳೆಂದು ಘೋಷಿಸುವ ಆಲೋಚನೆ ಇದೆಯೇ?
---------------
ನಾನು ಸತ್ತರೆ ನನ್ನನ್ನು ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೇ ಹೂಳಬೇಕು -ಬಸವರಾಜ ಬೊಮ್ಮಾಯಿ, ಸಿಎಂ
ನಿಮ್ಮನ್ನು ತನ್ನ ಪುತ್ರನೆಂದು ನಂಬಿಕೊಂಡಿದ್ದ ಕನ್ನಡ ನಾಡಿನ ಇತರ ಭಾಗಗಳಿಗೆ ಆ ಭಾಗ್ಯ ಬೇಡವೇ?
---------------
ಸಂವಿಧಾನದ ಮೇಲೆ ಗೌರವ ಇಲ್ಲದವರು ರಾಜಕಾರಣಿಯಾಗಲು ಅರ್ಹರಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ
ಹೀನ ಚಾರಿತ್ರ, ವಿಷಕಾರುವ ನಾಲಿಗೆ ಮತ್ತು ಚೀಲ ತುಂಬಾ ದುಡ್ಡಿದ್ದರೆ ಸದ್ಯ, ರಾಜಕಾರಣಿಯಾಗುವುದಕ್ಕೆ ಬೇರಾವ ಅರ್ಹತೆಯೂ ಬೇಡ.
---------------
ಸುಳ್ಳನ್ನು ಪದೇ ಪದೇ ಹೇಳಿ ಸತ್ಯವನ್ನಾಗಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ -ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡ
ಸತ್ಯವನ್ನು ಅನಾಥವಾಗಿಸಿದವರು, ಸುಳ್ಳುಗಳನ್ನು ನಂಬಿಸುವ ತಾಕತ್ತುಳ್ಳವರನ್ನು ಟೀಕಿಸಬಾರದು.
---------------
ಸಾವರ್ಕರ್ ಕುರಿತಂತೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೆ ಜ್ಞಾನೋದಯವಾಗಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಅದಕ್ಕಿಂತ ಮುನ್ನ ಅವರು ಕೂಡಾ ಅಜ್ಞಾನದಿಂದ ಆ ಹೆಸರನ್ನು ಜಪಿಸುತ್ತಿದ್ದರು.
---------------
ಡಿಕೆಶಿಯವರಿಗೆ ಮಂಗಳೂರು ಮತ್ತು ಬೆಳಗಾವಿ ಕುಕ್ಕರ್ ಮೇಲೆ ಬಹಳ ಪ್ರೀತಿ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಆದ್ದರಿಂದಲೇ ಅವರು ಅದನ್ನು ಸ್ಫೋಟಿಸಿದವರ ವಿರುದ್ಧ ಆಕ್ರೋಶಿತರಾಗಿದ್ದಾರೆ.
---------------
ನಾವೆಲ್ಲ ಹುಟ್ಟುವಾಗಲೂ ಹಿಂದೂಗಳು, ಸಾಯುವಾಗಲೂ ಹಿಂದೂಗಳೇ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಗತ ಮತ್ತು ಭವಿಷ್ಯದ ಬಗ್ಗೆ ಮಾನವ ಜ್ಞಾನ ತೀರಾ ಸೀಮಿತ.
---------------
ತನ್ನ ಅಧಿಕಾರಾವಧಿಯಲ್ಲಿ ಭಾರತದ ಜೊತೆಗಿನ ಹಳಸಿದ ಸಂಬಂಧವನ್ನು ಸುಧಾರಿಸಲು ಬಯಸಿದ್ದೆ -ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಕುರ್ಚಿ ಕಳೆದುಹೋದ ಬಳಿಕ ನಮ್ಮ ಮೋದಿ ಸಾಹೇಬರೂ ಇಂತಹ ಮಾತುಗಳನ್ನು ಆಡಲಿದ್ದಾರೆ.
---------------
ಅಂದಿನ ಸೀತಾಮಾತೆಯ ಜೀವನ ಇಂದಿನ ವಿಚ್ಛೇದಿತ ಮಹಿಳೆಯ ಜೀವನದ ಹಾಗಿತ್ತು -ಡಾ.ಮೋಹನ್ ಯಾದವ್, ಮಧ್ಯಪ್ರದೇಶ ಸಚಿವ
ಇಂದಿನ ವಿಚ್ಛೇದಿತ ಮಹಿಳೆಯರಿಗೆ ಊರೊಳಗೆ ವಾಸಿಸುವ ಹಕ್ಕಾದರೂ ಇದೆ.
---------------
ಭಯೋತ್ಪಾದನೆ ವಿರುದ್ಧ ನಮ್ಮ ಸರಕಾರ ಶೂನ್ಯ ಸಹಿಷ್ಣು ನೀತಿ ಹೊಂದಿದೆ -ಅನುರಾಗ್ ಠಾಕೂರ್, ಕೇಂದ್ರ ಸಚಿವ
ದೇಶದ ಬಹುಜನರ ಬಗ್ಗೆ ಮತ್ತು ಎಲ್ಲ ಸತ್ಕಾರ್ಯ, ಸದ್ಮೌಲ್ಯಗಳ ಬಗ್ಗೆ ನಿಮ್ಮ ಶೂನ್ಯ ಸಹಿಷ್ಣುತೆಯ ನೀತಿ ಈಗಾಗಲೇ ಸಾಕಷ್ಟು ಕುಖ್ಯಾತವಾಗಿದೆ.
---------------
ಸಾವರ್ಕರ್ ವಿರೋಧಿಸುವವರು ದೇಶದ್ರೋಹಿಗಳು -ರವಿಕುಮಾರ್, ವಿ.ಪ. ಸದಸ್ಯ
ಸಂಘ ಪರಿವಾರದ ಹೊರಗಿನವರೆಲ್ಲಾ ದೇಶದ್ರೋಹಿಗಳೆಂಬುದು ಬಹಳ ಹಿಂದೆಯೇ ಘೋಷಿತವಾಗಿದೆಯಲ್ಲಾ!
---------------
ಬಿಜೆಪಿ ಬೆಳೆಯಲು ಅನಂತ ಕುಮಾರ್ ಹಾಗೂ ಯಡಿಯೂರಪ್ಪರ ಹೆಗಲಿಗೆ ಹೆಗಲು ಕೊಟ್ಟು ನಾನೂ ಕೆಲಸ ಮಾಡಿದ್ದೇನೆ -ಈಶ್ವರಪ್ಪ, ಶಾಸಕ
ಹೀಗಿರುವಾಗ ಪಕ್ಷದ ನಾಯಕರು ನಿಮ್ಮಡನೆ, ಈಗಲಾದರೂ ಸ್ವಲ್ಪ ವಿಶ್ರಾಂತಿ ಪಡೆಯಿರಿ ಎನ್ನುವುದು ತಪ್ಪೇ?
---------------
ಐಟಿ, ಈ.ಡಿ. ದಾಳಿಯ ಮೂಲಕ ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ -ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ದೇಶಕ್ಕಾಗಿ ಸರ್ವಸ್ವವನ್ನು ಬಲಿದಾನ ಮಾಡಿದವರ ಪಕ್ಷ ತಾನೆಂದು ಬೊಗಳೆಬಿಡುವವರ ಪಾಳಯ, ಈ ರೀತಿ ಐಟಿ, ಈ.ಡಿ.ಗಳಿಗೆ ಅಂಜಿ ರಂಗು ಬದಲಾಯಿಸುವ ಹೇಡಿಗಳಿಂದ ತುಂಬಿ ಹೋಯಿತೇ?
---------------
ತಡವಾಗಿ ಸಭಾಪತಿ ಸ್ಥಾನ ಸಿಗುತ್ತಿರುವ ಬಗ್ಗೆ ಏನನ್ನೂ ಹೇಳುವುದಿಲ್ಲ -ಬಸವರಾಜ ಹೊರಟ್ಟಿ, ಸಭಾಪತಿ
ಮುಂದೆ ಸಿಗಬೇಕಾದ ಇತರ ಹುದ್ದೆಗಳಿಗಾಗಿ ಈ ಎಚ್ಚರವೇ?
---------------
ದೇಶದ ಗಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಗಡಿ ಭದ್ರತಾ ಪಡೆಯ ಜೊತೆ ರಾಜ್ಯ ಸರಕಾರಗಳೂ ವಹಿಸಿಕೊಳ್ಳಬೇಕು -ಅಮಿತ್ ಶಾ, ಕೇಂದ್ರ ಸಚಿವ
ರಾಜ್ಯಗಳಲ್ಲಿ ಸಂಗ್ರಹಿಸಲಾದ ಎಲ್ಲ ತೆರಿಗೆಗಳು ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ಸೇರುತ್ತವೆಂಬ ನಿಯಮ ತಂದರೆ ರಾಜ್ಯಗಳು ಈ ನಿಮ್ಮ ಮನವಿಯನ್ನು ಪರಿಗಣಿಸಬಹುದು.
---------------
ಭ್ರಷ್ಟ ಬಿಜೆಪಿ ಸರಕಾರವನ್ನು ಬದಲಾಯಿಸಲು ಈ ರಾಜ್ಯದ ಜನರು ಕಾಯುತ್ತಿದ್ದಾರೆ -ರಣದೀಪ್ಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರ.ಕಾರ್ಯದರ್ಶಿ
ಭ್ರಷ್ಟ ಕಾಂಗ್ರೆಸ್ ಪಕ್ಷದಿಂದ ಜನರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎನ್ನುತ್ತೀರಾ?
---------------
ಗಡಿಯಲ್ಲಿ ಚೀನಾ ಯುದ್ಧ ಮಾಡಲು ಸಿದ್ಧತೆ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ನಿದ್ದೆ ಮಾಡುತ್ತಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ನಿದ್ದೆಯಲ್ಲಿರುವ ತನಕ ಎಡವಟ್ಟು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.
---------------
ಮಹಾತ್ಮಾ ಗಾಂಧೀಜಿ ಸಮ್ಮುಖದಲ್ಲೇ (1924) ಬೆಳಗಾವಿ ನಮ್ಮದೆಂದು ತೀರ್ಮಾನವಾಗಿದೆ -ಗೋವಿಂದ ಕಾರಜೋಳ, ಸಚಿವ
ಅದಕ್ಕೆ ತಾನೇ ಅವರು ಗಾಂಧೀಜಿಯನ್ನೇ ಮುಗಿಸಿರುವುದು.
---------------
ಬಿಜೆಪಿ ಸರಕಾರ ವಿದೇಶದಲ್ಲಿ ಸಿಂಹ, ದೇಶದಲ್ಲಿ ಇಲಿ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಹೆಗ್ಗಣ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು.
---------------
ಕಂಬಳಿ ಹಾಕಿಕೊಂಡು ನಾಟಕ ಮಾಡಿದವರು, ಅಹಿಂದ ಎಂದು ಘೋಷಿಸಿಕೊಂಡವರು ಕುರಿಗಾಹಿಗಳಿಗೆ ಕುರಿ ಕೊಡಲಿಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕುರಿಗಾಹಿಗಳನ್ನು ಕುರಿ ಮಾಡಿ ಕಸಾಯಿ ಖಾನೆಗೆ ಒಪ್ಪಿಸಿದವರ ಮಾತಿದು.
---------------
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಮರಾಠಿ ಭಾಷಿಗರಿಗೆ ಅನ್ಯಾಯ ಆಗದಂತೆ ನಾವು ನೋಡಿಕೊಳ್ಳುತ್ತೇವೆ -ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಮಹಾರಾಷ್ಟ್ರದ ಒಳಗಿರುವ ಮರಾಠಿ ಭಾಷಿಗರಿಗೆ ನಿಮ್ಮ ಸರಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನೋಡಿಕೊಳ್ಳುವವರು ಯಾರು ?
---------------
ಪಂಚಮ ಸಾಲಿಗೆ ಮೀಸಲಾತಿ ನೀಡುವ ಕುರಿತಂತೆ ಸಿಎಂ ಆಗಲೀ, ನಾನಾಗಲೀ ಸುಮ್ಮನೆ ಕುಳಿತಿಲ್ಲ -ಮುರುಗೇಶ್ ನಿರಾಣಿ, ಸಚಿವ
ಒಟ್ಟಿನಲ್ಲಿ ಮೀಸಲಾತಿ ವ್ಯವಸ್ಥೆ ಸರ್ವನಾಶ ಆಗುವವರೆಗೆ ನೀವು ಸುಮ್ಮನೆ ಕೂರುವುದಿಲ್ಲ ಎಂದಾಯಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.