-

ಓ ಮೆಣಸೇ...

-

ಒಂದು ಇಂಚು ಭೂಮಿಗೂ ಮಹಾರಾಷ್ಟ್ರ ಸರಕಾರ ಹೋರಾಡಲಿದೆ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
ಓಹ್! ಎಲ್ಲಿದೆ ಸಾರ್ ಅಷ್ಟೊಂದು ವಿಷಮ ಸ್ಥಿತಿ? ಚೀನಾ ಗಡಿ ಪ್ರದೇಶದಲ್ಲೇ?

ಮೀಸಲಾತಿ ಕೊಟ್ಟಿರುವ ನಾವು(ಬಿಜೆಪಿ)ಸುಮ್ಮನೆ ಕುಳಿತಿದ್ದೇವೆ. ಏನೂ ಮಾಡದವರು ಇಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ - ಸಿ.ಟಿ.ರವಿ, ಶಾಸಕ
ಹೌದು, ಸ್ವಾತಂತ್ರ ತಂದುಕೊಟ್ಟದ್ದೂ ನೀವೇ ತಾನೇ? ಜನರಿಗೆಲ್ಲಿ ನೆನಪಿರುತ್ತದೆ?

ಭವಿಷ್ಯದ ದೃಷ್ಟಿಯಿಂದ ಬ್ಯಾಟರಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಲಾಗುವುದು - ಆನಂದ್ ಸಿಂಗ್, ಸಚಿವ
ಅಲ್ಲಲ್ಲಿ ಆಗಾಗ ಅದಕ್ಕಿಂತ ಹೆಚ್ಚು ಮಾರಕ ವಿಷ ಕಾರುವ ನಿಮ್ಮ ಪಾಳಯದ ಭಾಷಣಗಾರರ ವಿಲೇವಾರಿಗೆ ಏನಾದರೂ ಮಾಡುತ್ತೀರಾ?

ಕೋವಿಡ್‌ಗೆ ಸಂಬಂಧಿಸಿ ಸರಕಾರಿ ಆಸ್ಪತ್ರೆಗಳಲ್ಲಿ 50,817 ಹಾಸಿಗೆಗಳು ಲಭ್ಯ - ಡಾ.ಸುಧಾಕರ್, ಸಚಿವ
ಎಷ್ಟು ಮಂದಿಗೆ ಕೋವಿಡ್ ತಗಲುತ್ತದೆಂಬ ಬಗ್ಗೆ ಜ್ಯೋತಿಷಿಗಳು ಅಷ್ಟು ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದಾರೆಯೇ?

ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಭಾರತವು ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತವಾಗಬೇಕಿದೆ - ನರೇಂದ್ರ ಮೋದಿ, ಪ್ರಧಾನಿ
ಇಂದು ಕಂಡು ಬರುತ್ತಿರುವ ಪರಮ ಕುರುಡು ದೃಷ್ಟಿಕೋನಗಳನ್ನು ಹಾಗೆಯೇ ಉಳಿಸಿಕೊಳ್ಳೋಣವೇ?

ಮಹಾತ್ಮಾ ಗಾಂಧಿಯವರ ಕನಸನ್ನು ನನಸಾಗಿಸಿದವರು ಪ್ರಧಾನಿ ನರೇಂದ್ರ ಮೋದಿ - ನಳಿನ್ ಕುಮಾರ್ ಕಟೀಲು, ಸಂಸದ
ಮಹಾತ್ಮಾ ಗಾಂಧಿಯವರ ದುಃಸ್ವಪ್ನಗಳಿಗೆ ನಿಮ್ಮ ಮಾತು ಖಂಡಿತ ಅನ್ವಯಿಸುತ್ತದೆ.

ಬೇನಾಮಿ ಆಸ್ತಿ ಮಾಡಲು ನನ್ನಪ್ಪ ಏನೂ ಮುಖ್ಯಮಂತ್ರಿ ಆಗಿರಲಿಲ್ಲ - ಸಿ.ಟಿ.ರವಿ, ಶಾಸಕ
ನಿಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾದವರಿಂದ ಲಾಭವಾಗುವುದು ಯಾರಿಗೆ ಎಂಬುದಂತೂ ಸ್ಪಷ್ಟವಾಯಿತು. ಅಂದಹಾಗೆ ನೀವು ವಿಷ ಕಾರುತ್ತಿರುವುದು ಬೊಮ್ಮಾಯಿ ಕುಟುಂಬದ ವಿರುದ್ಧ ಅಲ್ಲ ತಾನೇ?

ಭಾರತದಲ್ಲಿ ಕೋವಿಡ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಬಡವರು ಮಾತ್ರ ಸಾಯುತ್ತಾರೆ ಎಂಬ ನಂಬಿಕೆಯೇ?

ಗಾಂಧೀಜಿಯನ್ನು ಕೊಂದವರಿಗಾಗಿ ದೇವಸ್ಥಾನ ಕಟ್ಟುವವರನ್ನು 'ಭಯೋತ್ಪಾದಕ'ರೆಂದು ಗುರುತಿಸಿ ಕ್ರಮ ಜರುಗಿಸಬೇಕು - ಯು.ಟಿ.ಖಾದರ್, ಶಾಸಕ
ಆನಂತರದ 75 ವರ್ಷಗಳಲ್ಲಿ ಗೋಡ್ಸೆವಾದಿಗಳು ನಡೆಸಿದ ನೂರಾರು ಭಯೋತ್ಪಾದನಾ ಕೃತ್ಯಗಳ ಬಗ್ಗೆ ಏನಾದರೂ ಕ್ರಮದ ಅಗತ್ಯವಿದೆಯೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅತೀಂದ್ರಿಯ ಶಕ್ತಿ' ಹೊಂದಿದ್ದಾರೆ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ
ಇಂತಹ ವೌಢ್ಯವನ್ನು ನೀವು ನಂಬಿದ್ದರೆ ತಾನೇ ಇತರರು ನಂಬುವುದು?

ಭಾರತದ ಇತಿಹಾಸವನ್ನು 'ಸರಿಪಡಿಸಿದ' ರೂಪದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ವರ್ತಮಾನವನ್ನು ನಾಶ ಮಾಡುತ್ತಿರುವವರ ನೆಚ್ಚಿನ ಕಾಯಕ, ಇತಿಹಾಸ ಮಾತು ಭವಿಷ್ಯವನ್ನೂ ಕುಲಗೆಡಿಸುವುದು.

ಒಕ್ಕಲಿಗರು ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಅವರು ಭಿಕ್ಷುಕರೇನಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಜಕ್ಕೂ ಸ್ವಾಭಿನಿಯಾಗಿರುವವರು ಸದ್ಯ ಲಭ್ಯವಿರುವ ಸೀಮಿತ ಮೀಸಲಾತಿಯನ್ನು ಚಿಂದಿ ಚಿಂದಿಯಾಗಿಸಿ ಹಂಚುವ ಬದಲು, ಆನುಪಾತಿಕ ಮೀಸಲಾತಿ, ಖಾಸಗಿ ಕ್ಷೇತ್ರದ ಮೀಸಲಾತಿ ಇತ್ಯಾದಿಗಾಗಿ ಹೋರಾಡುತ್ತಾರೆ.

ಕೋವಿಡ್ ನಿಯಮ ಉಲ್ಲಂಸಿದರೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ - ಆರ್.ಅಶೋಕ್, ಸಚಿವ
ಕೆಲವು ಲಕ್ಷ ಮಂದಿ ಸಾಯುವ ತನಕ ಉಗ್ರ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಭವ್ಯ ಸಂಪ್ರದಾಯಕ್ಕೆ ಒಗ್ಗುವುದಿಲ್ಲ.

ಯಡಿಯೂರಪ್ಪ ಇಂದಿಗೂ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ - ಡಿ.ವಿ.ಸದಾನಂದಗೌಡ, ಸಂಸದ
ಸರ್ವಾಧಿಕಾರಿ ಪಕ್ಷಗಳಲ್ಲಿ ಪ್ರಶ್ನಾತೀತ ನಾಯಕರೇ ನೈಜ ನಾಯಕರಾಗಿರುತ್ತಾರೆ.

ಕಾಂಗ್ರೆಸ್‌ನವರು ಹಿಂದಿನಿಂದಲೂ ತುಷ್ಟೀಕರಣ ರಾಜಕಾರಣ ಮಾಡುತ್ತಾ ಮುಸ್ಲಿಮರನ್ನು ದಿಕ್ಕು ತಪ್ಪಿಸುತ್ತಲೇ ಬಂದಿದ್ದಾರೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಇತರೆಲ್ಲ ಭಾರತೀಯರನ್ನು ದಿಕ್ಕು ತಪ್ಪಿಸುವ ಹೊಣೆಯನ್ನು ನಿಮ್ಮ ಪಕ್ಷ ವಹಿಸಿಕೊಂಡಂತಿದೆ.

ಯೂಸ್ ಆ್ಯಂಡ್ ತ್ರೋ ಮಾಡುವವರು ಇದ್ದರೆ ಅದು ಬಿಜೆಪಿಯವರು ಎನ್ನುವುದಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರೇ ಉದಾಹರಣೆ - ಶಿವರಾಜ್ ತಂಗಡಗಿ, ಮಾಜಿ ಸಚಿವ
ದೇಶ ಮತ್ತು ಜನತೆಗೆ ಒದಗಿದ ಗತಿ ನಿಮಗೆ ಉದಾಹರಣೆಯಾಗಿ ಕಾಣುತ್ತಿಲ್ಲವೇ?

ಭಾರತೀಯ ನಾರಿ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು ಎಂಬುದನ್ನು ನಾನು ತೋರಿಸಿಕೊಟ್ಟಿದ್ದೇನೆ - ಸ್ಮತಿ ಇರಾನಿ, ಕೇಂದ್ರ ಸಚಿವೆ
ಸುಳ್ಳು ಹೇಳಿ ಜನರನ್ನು ವಂಚಿಸುವ ವಿಷಯದಲ್ಲಿ ನಿಮ್ಮ ಮಟ್ಟದ ಪ್ರತಿಭೆ ಬೇರಾವುದೇ ಭಾರತೀಯ ನಾರಿಯಲ್ಲಿ ಇತ್ತೀಚೆಗಂತೂ ಕಂಡುಬಂದಿಲ್ಲ.

ಬಿಜೆಪಿ ಯಡಿಯೂರಪ್ಪರಿಗೆ ಎಲ್ಲವನ್ನೂ ನೀಡಿದ್ದು, ಅವರನ್ನು ನಿರ್ಲಕ್ಷಿಸಿಲ್ಲ - ಬಿ.ವೈ.ರಾಘವೇಂದ್ರ, ಸಂಸದ
ಮಗನಿಗೆ ಏನು ಕೊಟ್ಟಿಲ್ಲ ಎನ್ನುವುದು ಸದ್ಯಕ್ಕೆ ಯಡಿಯೂರಪ್ಪರ ತಕರಾರು.

ರಶ್ಯವನ್ನು ಹರಿದು ಹಾಕಲು ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸುತ್ತಿವೆ - ವ್ಲಾದಿಮಿರ್ ಪುಟಿನ್, ರಶ್ಯ ಅಧ್ಯಕ್ಷ
ಅದಕ್ಕೆ ನೀವೇ ಸಾಕಾಗುವುದಿಲ್ಲವೇ?

ಮಕ್ಕಳ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು ಪ್ರತೀ ಜಿಲ್ಲೆಗೆ ಒಂದರಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ - ಆರಗ ಜ್ಞಾನೇಂದ್ರ, ಸಚಿವ
ನ್ಯಾಯಾಲಯದೊಳಗೆ ನ್ಯಾಯವೂ ಸಿಗುವಂತಿರಲಿ.

ಯಡಿಯೂರಪ್ಪರ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ - ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ಐಟಿ, ಈಡಿ ಅಧಿಕಾರಿಗಳು ಇರುವುದೇ ಆ ಶಕ್ತಿಯನ್ನು ಕಿತ್ತು-ಕೊಲ್ಲುವುದಕ್ಕೆ.

ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿರುವುದರಿಂದ ಅವರಿಗೆ ನಷ್ಟವೇ ಹೊರತು ಬಿಜೆಪಿಗಲ್ಲ - ರೇಣುಕಾಚಾರ್ಯ, ಶಾಸಕ
ಇರಲಿ ಬಿಡಿ. ಅಗತ್ಯ ಬಿದ್ದಾಗ ಪಕ್ಷಾಂತರ ಮಾಡುವುದಕ್ಕೆ ಬೇಕಾಗುತ್ತದೆ.

ಬಿಜೆಪಿ ಮತ್ತು ಆರೆಸ್ಸೆಸ್‌ನವರು ಸೀತೆಯನ್ನು ರಾಮನಿಂದ ಬೇರ್ಪಡಿಸಿದ್ದಾರೆ. ಅದಕ್ಕಾಗಿ ನಾವು 'ಜೈಸೀತಾರಾಮ್' ಎಂದು ಹೇಳುತ್ತೇವೆ - ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಮೊದಲು ಬೇರ್ಪಡಿಸಿರುವ ಸೀತೆಯನ್ನು ಹುಡುಕಿ ತರುವ ಜವಾಬ್ದಾರಿ ಹೊತ್ತು ಕೊಳ್ಳಿ.

ಅಂಗನವಾಡಿಗಳಿಂದಲೇ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಶಿಕ್ಷಕಿಯರು, ಸಹಾಯಕಿಯರಿಗೆ ಶೈಕ್ಷಣಿಕ ಮಾನದಂಡ ನಿಗದಿಗೊಳಿಸಲಾಗಿದೆ - ಹಾಲಪ್ಪ ಆಚಾರ್, ಸಚಿವ
ಮಾನವಿಲ್ಲದವರು ವಿಧಿಸುವ ಮಾನದಂಡ ಬರೇ ದಂಡ.

ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ
ಅದಕ್ಕಾಗಿ ಚೀನಾದ ಬೆಂಬಲ ಕೇಳುವ ಉದ್ದೇಶ ಇದೆಯೇ ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top