ಓ ಮೆಣಸೇ...
-

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೂರು ಬಾರಿ ಬಂದು ಹೋದರೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಬಂದರೆ ಜೆಡಿಎಸ್ ಬೆಂಬಲಿತ ಬಿಜೆಪಿ ಸರಕಾರ ಮಾತ್ರ ಎಂಬ ನಿಮ್ಮ ಕನಸನ್ನು ಪೂರ್ಣವಾಗಿ ಹಂಚಿಕೊಳ್ಳಿ.
ಆಡಳಿತದಲ್ಲಿ ತಂತ್ರಜ್ಞಾನ ಇಂದಿನ ಅಗತ್ಯ ಮತ್ತು ಅನಿವಾರ್ಯ - ಕೋಟ ಶ್ರೀನಿವಾಸ ಪೂಜಾರಿ , ಸಚಿವ
ತಂತ್ರಜ್ಞಾನ ಎಂಬ ಪದವನ್ನು ಕುತಂತ್ರಕ್ಕೆ ಪರ್ಯಾಯವಾಗಿ ಬಳಸುತ್ತಿದ್ದೀರಾ?
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಎರಡಲ್ಲ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸುವುದಿಲ್ಲ - ಕೆ.ಎಸ್.ಈಶ್ವರಪ್ಪ, ಶಾಸಕ
ನಿಮ್ಮ ಸದ್ಯದ ಹತಾಶೆಯಲ್ಲಿ ನೀವು ರಾಜಕೀಯ ಬಿಟ್ಟು ಜ್ಯೋತಿಷ್ಯ ಆರಂಭಿಸಿ ಬಿಟ್ರೇನು?
ಅರ್ಕಾವತಿ ಹಗರಣ ಬಯಲಿಗೆ ಬಂದರೆ ಮುಖ್ಯಮಂತ್ರಿ ಕನಸು ಕಾಣುವ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ -ನಳಿನ್ ಕುಮಾರ್ ಕಟೀಲು, ಸಂಸದ
ನಿಮ್ಮ ಹಗರಣಗಳ ಕಥೆಯೇನು? ಪೂರ್ವಭಾವಿ ವಿನಾಯಿತಿ ಘೋಷಿಸಲಾಗಿದೆಯೇ?
ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟು ಮಾತನಾಡುವುದನ್ನು ಮುಂದುವರಿಸಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ - ಮುರುಗೇಶ್ ನಿರಾಣಿ , ಸಚಿವ
ಕಡಿಯುವುದು, ಕೊಲ್ಲುವುದು ಇವೆಲ್ಲಾ ನಿಮ್ಮ ಪಾಳಯದ ನಿತ್ಯ ಚಟುವಟಿಕಗಳಾದ್ದರಿಂದ ನೀವು ಕೇವಲ ಕತ್ತರಿಸುವ ಮಾತನಾಡಿದರೆ ಜನ ಆ ಕಡೆ ಗಮನ ಹರಿಸುವುದಿಲ್ಲ.
ಕಾಂಗ್ರೆಸ್ನಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಪೈಪೋಟಿ ಇಲ್ಲ. - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ನಾನು ಮೂರನೇ ಅಭ್ಯರ್ಥಿ ಅಲ್ಲ ಅಂತ ಘೋಷಿಸಿ, ಜನರಿಗೆ ಒಂದಷ್ಟು ನೆಮ್ಮದಿಯಾಗುತ್ತದೆ.
ಬಿಜೆಪಿ ಸರಕಾರಗಳಲ್ಲಿ ಯಾವುದೇ ಮಾಧ್ಯಮಗಳ ಮೇಲೆ ನಿಷೇಧ ಹೇರಿಲ್ಲ - ರಾಜನಾಥ ಸಿಂಗ್ , ಕೇಂದ್ರ ಸಚಿವ
ಅನಧಿಕೃತವಾಗಿಯೇ ಎಲ್ಲ ಹಕ್ಕು ಮತ್ತು ಸ್ವಾತಂತ್ರಗಳನ್ನು ಸಂಪೂರ್ಣ ಮೆಟ್ಟಿ ನಿಲ್ಲಲು ಸಾಧ್ಯವಿರುವಾಗ ಅಧಿಕೃತ ನಿಷೇಧದ ಕಿರಿಕಿರಿ ಏತಕ್ಕೆ?
ಸ್ಯಾಂಟ್ರೊ ರವಿಯಂಥವರಿಂದ ಹಣ ಪಡೆದುಕೊಳ್ಳುವ ಸ್ಥಿತಿ ಬಂದರೆ ಆತ್ಮ ಹತ್ಯೆ ಮಾಡಿಕೊಳ್ಳುವೆ - ಆರಗ ಜ್ಞಾನೇಂದ್ರ , ಸಚಿವ
ಈ ವರೆಗೂ ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ಹಣ ಕೊಟ್ಟವರೇ ಹೊರತು ತಕ್ಕೊಂಡವರಲ್ಲ. ಆದ್ದರಿಂದ ನಿಮಗೇಕೆ ಚಿಂತೆ?
ಗಂಗಾ ಮತಸ್ಥರಿಗೆ ಶೀಘ್ರವೇ ಪರಿಶಿಷ್ಟ ವರ್ಗದ ಮೀಸಲಾತಿ ನೀಡಲಾಗುವುದು - ಬಸವರಾಜ ಬೊಮ್ಮಾಯಿ, ಸಿಎಂ
ನಿಮ್ಮ ಔದಾರ್ಯ ಮೆರೆಯುವುದಕ್ಕೆ ಯಾರು ಯಾರದೋ ಹಕ್ಕುಗಳ ದುರುಪಯೋಗ ಏಕೆ?
ಬಿಜೆಪಿ ಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ - ಎಚ್.ಎಂ . ರೇವಣ್ಣ, ಮಾಜಿ ಸಚಿವ
ಆ ಮೂರು ಬಾಗಿಲುಗಳು ಕಾಣಿಸಿದ್ದು ಒಳಪ್ರವೇಶಿಸುವ ತಯಾರಿಯ ವೇಳೆಯೇ ?
ಯಾರೋ ಒಬ್ಬಿಬ್ಬರು ಬಿಜೆಪಿ ಬಿಟ್ಟು ಹೋದ ಮಾತ್ರಕ್ಕೆ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ - ಬಿ.ವೈ. ವಿಜಯೇಂದ್ರ , ಬಿಜೆಪಿ ಉಪಾಧ್ಯಕ್ಷ
ಯಡಿಯೂರಪ್ಪನವರು ಪಕ್ಷ ಬಿಡುತ್ತಾರೆಂಬ ವದಂತಿ ಹಬ್ಬಿದಾಗಲೆಲ್ಲ ಪಕ್ಷದ ಕಡೆಯಿಂದ ಇದೇ ರೆಡಿಮೇಡ್ ಹೇಳಿಕೆ ಬರುತ್ತಿತ್ತು.
ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ವಿತ್ತ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ - ಸುನೀಲ್ ಕುಮಾರ್ , ಸಚಿವ
ಹೊಟ್ಟೆ ತುಂಬಾ ಗೊಬ್ಬರ ತಿಂದು ಗೋಮೂತ್ರ ಕುಡಿದು ಮಲಗಬೇಕೆಂಬ ನಿಯಮವನ್ನು ಅವರು ಹೇರಿರಲಿಲ್ಲವಲ್ಲಾ? ಥ್ಯಾಂಕ್ಸ್ ಅನ್ನೋಣ.
ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ರೂಪಿಸಲಾಗುವುದು - ನಿರ್ಮಲಾ ಸೀತಾರಾಮನ್ , ಕೇಂದ್ರ ಸಚಿವೆ
ಅವರ ಹಿತಾಸಕ್ತಿಗಳೇನೆಂಬುದನ್ನು ಅದಾಣಿ ಅಂಬಾನಿಗಳು ನೀಡುವ ಸವಿಸ್ತಾರ ಮಾರ್ಗದಏಶನ ಆಧಾರದಲ್ಲಿ ತೀರ್ಮಾನಿಸಲಾಗುವುದು - ಅಲ್ಲವೇ?
9 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವುದರಿಂದ 2023 ನಮಗೆ ಬಹಳ ಮುಖ್ಯ - ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಚುನಾವಣೆ ಗೆಲ್ಲುವುದಕ್ಕೆ ಹಿಂಸೆ, ಗಲಭೆ ಇತ್ಯಾದಿಯನ್ನೆಲ್ಲಾ ಸಂಘಟಿಸಬೇಕು, ಇಷ್ಟಾಗಿಯೂ ಸೋತರೆ, ಕತ್ತೆಗಳನ್ನು ಖರೀದಿಸುವ ಹೊಲಸು ವ್ಯಾಪಾರಕ್ಕೆ ಇಳಿಯಬೇಕು - ಕೆಲಸ ನಿಜಕ್ಕೂ ತುಂಬಾ ಇದೆ.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಹಲಾಲ್ ಕಟ್ ಆಗೋದು ಖಚಿತ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಅದಕ್ಕಾಗಿ ನೀವು ಝಟ್ಕಾದವರಜೊತೆ ಕೈಮಿಲಾಯಿಸಿಕೊಂಡಿ ದ್ದೀರಂತೆ?
ಭಾರತದೊಂದಿಗಿನ ಮೂರು ಯುದ್ಧಗಳಿಂದ ಪಾಕಿಸ್ತಾನ ಬಹಳಷ್ಟು ಪಾಠ ಕಲಿತಿದೆ- ಶಹಬಾಝ್ ಷರೀಫ್,ಪಾಕ್ ಪ್ರಾಧಾನಿ
ಕಲಿತ ಪಾಠದ ಆಧಾರದಲ್ಲಿ, ಮುಂದಿನ ಎಲ್ಲ ಯುದ್ಧಗಳನ್ನು ಪಾಕಿಸ್ತಾನದ ಗಡಿಗಳ ಒಳಗೆ, ಒಳಗಿನ ಪಕ್ಷಗಳ ಮಧ್ಯೆಯೇ ನಡೆಸುತ್ತೇವೆಂದು ತೀರ್ಮಾನಿಸಿರುವಿರಾ?
ಸಂತೋಷದ ವಿಷಯ. ದುಶ್ಚಟಗಳ ದಾಸರಾಗದಂತೆ ಮಾನವೀಯ ಸಜ್ಜನರನ್ನು ರೂಪಿಸುವ ರಾಷ್ಟ್ರೀಯ ಶಿಕ್ಷಣ ನೀತಿ ತರುವ ಕೆಲಸ ನಡೆಯುತ್ತಿದೆ- ಬಿ.ಸಿ.ನಾಗೇಶ್, ಸಚಿವ
ಎಲ್ಲ ಪದಗಳನ್ನು ವಿರೋದಾರ್ಥದಲ್ಲಿ ಬಳಸುವ ನಿಮ್ಮ ಪ್ರಾಚೀನ ಕಲೆಯ ಅರಿವುಳ್ಳವರು ಯಾರೂ ಈ ನಿಮ್ಮ ಮಾತುಗಳನ್ನು ನಂಬಿ ಬಂದು ನಿಮ್ಮ ಬಲೆಗೆ ಬೀಳುವುದಿಲ್ಲ.
‘ನಾ ನಾಯಕಿ’ ಯಂತಹ ಕಾಂಗ್ರೆಸ್ ಕಾರ್ಯಕ್ರಮಗಳ ಭರವಸೆಗಳಿಗೆ ಮರುಳಾಗುವಷ್ಟು ನಮ್ಮ ರಾಜ್ಯದ ಮಹಿಳಾ ಮತದಾರರು ದಡ್ಡರಲ್ಲ- ಶಶಿಕಲಾ ಜೊಲ್ಲೆ, ಸಚಿವೆ
ಹೌದು. ಆದರೂ ಅವರು 40ಶೇ ಗಿಂತ ಕಡಿಮೆ ಮಟ್ಟದ ಭ್ರಷ್ಟಾಚಾರದ ಪರ ಒಲವು ತೋರುತ್ತಿದ್ದಾರೆ.
ಮೋದಿ ಭಾರತದಲ್ಲಿ ಹವಾಯಿ ಚಪ್ಪಲಿ ಹಾಕುವವನು ಕೂಡಾ ವಿಮಾನದಲ್ಲಿ ಪ್ರಯಾಣಿಸ ಬಲ್ಲ - ಧರ್ಮೇದ್ರ ಪ್ರಧಾನ್ ಕೇಂದ್ರ ಸಚಿವ
ಕೆಂಪು ಬಸ್ಸಿನ ಟಿಕೆಟು ಖರೀದಿಸಲು ದುಡ್ಡಿಲ್ಲದೆ ರಾತ್ರಿಯೆಲ್ಲಾ ಬಸ್ ನಿಲ್ದಾಣದ ಹೊರಗೆ ಮಲಗಿರುವ ಹತಾಶ ಮಂದಿಗೆ ಈ ಕನಸನ್ನು ಮಾರುತ್ತಿದ್ದೀರಾ?
ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿರಲಿಲ್ಲ, ಅವರು ಕ್ಷಮೆಯನ್ನೂ ಯಾಚಿಸಿಲ್ಲ- ಅಣ್ಣಾ ಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ
ಸದಾ ಸರಕಾರಿ ಬಸ್ಸಿನಲ್ಲಿ ಮಾತ್ರ ಪ್ರಯಾಣಿಸುವ ಆ ಸರಳಜೀವಿ, ಜೀವನದಲ್ಲೆಂದೂ ವಿಮಾನದಲ್ಲಿ ಪ್ರಯಾಣಿಸಿಯೇ ಇಲ್ಲ ಎಂದು ಹೇಳಿ ಬಿಡಿ.
ನಿಮ್ಮ ಗೋದಿ ಮೀಡಿಯಾದವರು ಅದನ್ನೂ ಜಗತ್ತಿಗೆ ತಲುಪಿಸುತ್ತಾರೆ.
ಭಯೋತ್ಪಾದನೆ ಬಿಟ್ಟರೆ ಪಾಕ್ ಜೊತೆ ಸಂಬಂಧಕ್ಕೆ ಭಾರತ ಸಿದ್ಧ - ಅರಿಂದಮ್ ಬಾಗ್ವಿ ವಿದೇಶಾಂಗ ಸಚಿವಾಲಯದ ವಕ್ತಾರ
ಭಯೋತ್ಪಾದನೆ ವಿಷಯದಲ್ಲಿ ಭಾರತ ಸ್ವಾಲಂಬಿಯಾಗುವ ಹಂತದಲ್ಲಿದೆ ಎನ್ನುತ್ತಿರಬೇಕು.
ಹಲವು ರಾಜಕಾರಣಿಗಳ ಜುಟ್ಟು ಸ್ಯಾಂಟ್ರೊ ರವಿ ಕೈಯಲ್ಲಿದೆ- ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಗುಟ್ಟು ಎಂದರೆ ಸ್ಪಷ್ಟವಾಗಿ ಬಿಡುತ್ತದೆ
ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನ ನಮ್ಮ ಮುಖ್ಯೋಪಾಧ್ಯಾಯ ರಲ್ಲ. ಅವರು ಹೆಡ್ಮಾಸ್ಟರ್ ರೀತಿ ವರ್ತಿಸಬಾರದು - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಅವರಿಗೆ ನೀವು ಹಿಂದಿನ ಬೆಂಚಿನ ವಿದ್ಯಾರ್ಥಿ ತರಹ ಕಾಣುತ್ತಿರಬೇಕು.
ಗೃಹ ಸಚಿವ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ತಮ್ಮ ಆತ್ಮ ಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಅದಕ್ಕೆ ಒಳಗೆ ಆತ್ಮ ಎನ್ನುವುದು ಒಂದು ಇರಬೇಕಲ್ಲವೇ? ಅದುವೇ ಮಾರಾಟವಾಗಿದ್ದರೆ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.