-

ಓ ಮೆಣಸೇ...

-

ಜೆಡಿಎಸ್‌ನವರ ‘ಪಂಚರತ್ನ ಯಾತ್ರೆ’ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ -ನಳಿನ್ ಕುಮಾರ್ ಕಟೀಲು

ನಿಮ್ಮ ರೈಲಿನ ಅಪಾಯ ಏನೆಂದರೆ ಅದು ಬ್ರೇಕ್ ಫೇಲ್ ಆದ ಬಳಿಕವೂ ಕುರುಡಾಗಿ ಓಡುತ್ತಲೇ ಇದೆ.

---------------------
 ನನಗೆ 80 ವರ್ಷ ಪ್ರಾಯವಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ -ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
 ನಾನಿನ್ನು ಮನೆಯಲ್ಲಿ ಕೂರುತ್ತೇನೆ ಎಂದು ಘೋಷಿಸುವುದಕ್ಕೆ ಇನ್ನೆಷ್ಟು ದಶಕಗಳು ಉರುಳಬೇಕು?

---------------------
ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದರೆ ನಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮೆ ಕಾಂಗ್ರೆಸ್‌ನವರಲ್ಲಿದೆ -ಕೆ.ಎಸ್.ಈಶ್ವರಪ್ಪ, ಶಾಸಕ
 ನಿಮ್ಮ ಗತಿ ನೋಡಿದ ಯಾರಿಗೂ ಅಂತಹ ಭ್ರಮೆ ಇಲ್ಲ.
---------------------
 ಕೇಂದ್ರ ಸಚಿವ ಅಮಿತ್ ಶಾ ವ್ಯಕ್ತಿತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಛಾಯೆ ಇದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
  ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೆಂಬ ಕಾರಣಕ್ಕಾಗಿ ಹೀಗೆಲ್ಲ ಹೇಳಿ ಅವರ ಆತ್ಮಕ್ಕೆ ಕಿರುಕುಳ ನೀಡುವುದು ಸರಿಯಲ್ಲ.

---------------------
 ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿಸುತ್ತಿದೆ -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
 ವೀಡಿಯೊ ಗೇಮ್ ನೋಡಿದಿರಾ ಸ್ವಾಮೀಜಿ?

---------------------
 ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇರುವುದರಿಂದ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ -ಎಸ್.ಎಲ್.ಭೈರಪ್ಪ, ಸಾಹಿತಿ
 ಹೌದು. ಅನ್ಯಥಾ ಚಿಲ್ಲರೆ ದಕ್ಷಿಣೆ ಮಾತ್ರ ಸಿಗುತ್ತಿತ್ತು.

---------------------
 ನನ್ನನ್ನು ರಾಷ್ಟ್ರಪತಿ ಮಾಡುತ್ತೇನೆ ಎಂದರೂ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ
 ಭಾರತದಲ್ಲಿ ರಾಷ್ಟ್ರಪತಿ ಆಗುವುದಕ್ಕಿಂತ ಮುನ್ಸಿಪಾಲಿಟಿ ಸದಸ್ಯನಾಗುವುದು ಲೇಸು. ಒಂದಿಷ್ಟಾದರೂ ಸ್ವಾತಂತ್ರವಿರುತ್ತದೆ.

---------------------
 ಮಹಾಭಾರತದಲ್ಲಿದ್ದಂತೆ ಈಗಿನ ರಾಜಕೀಯದಲ್ಲೂ ನೂರಾರು ಶಕುನಿಗಳಿದ್ದಾರೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
 ಶಕುನಿಗಳ ಕುರಿತು ಶಕುನಿಗಳೇ ಹೇಳಿದರೆ ಚೆನ್ನಾಗಿರುತ್ತದೆ.

---------------------
 ಭಗವಾನ್ ಕೃಷ್ಣ ಹಾಗೂ ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು -ಎಸ್.ಜೈಶಂಕರ್, ಕೇಂದ್ರ ಸಚಿವ
 ಮೆಲ್ಲಗೆ ಹೇಳಿ ಸಾರ್. ಎಲ್ಲಾದರೂ ಮೋದಿಯವರು ಕೇಳಿ ಬಿಟ್ಟರೆ ನಿಮ್ಮ ಚರ್ಮ ಸುಲಿಯುತ್ತಾರೆ. ಅವರ ಮುಂದೆ ಕೃಷ್ಣ, ಹನುಮಂತ ಇವರೆಲ್ಲಾ ಯಾವ ಲೆಕ್ಕ?

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ... ಎಂದು ರಾಯರಲ್ಲಿ ಬೇಡಿಕೊಂಡಿದ್ದೇನೆ -ಅನಿತಾ ಕುಮಾರಸ್ವಾಮಿ, ಶಾಸಕಿ
ಯಾರನ್ನು?

---------------------

ಹೊಂದಾಣಿಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ-ಸಿ.ಟಿ.ರವಿ, ಶಾಸಕ
ಸದ್ಯ ಹೊಂದಾಣಿಕೆಗೆ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರಾದರೂ ತಯಾರಿದ್ದಾರೆಯೇ?

---------------------
 ಅಭಿವ್ಯಕ್ತಿ ಸ್ವಾತಂತ್ರದ ಹೆಸರು ಹೇಳಿಕೊಂಡು ದೇಶದ ಜನರಲ್ಲಿ ಒಡಕು ಮೂಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ಜನತೆ ಎಚ್ಚರದಿಂದಿರಬೇಕು
-ನರೇಂದ್ರ ಮೋದಿ, ಪ್ರಧಾನಿ
ಅಭಿವೃದ್ಧಿಯ ಹೆಸರಲ್ಲಿ ದೇಶವನ್ನು ಅದಾನಿಗಳಿಗೆ ಮಾರಿ ಬಿಟ್ಟವರ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ.

---------------------
 ದೇಶ, ಹಿಂದುತ್ವ ಮತ್ತು ಸಮಾಜಕ್ಕಾಗಿ ಕ್ಷತ್ರಿಯರ ಹೋರಾಟ ಶ್ಲಾಘನೀಯ -ಅರವಿಂದ ಲಿಂಬಾವಳಿ, ಶಾಸಕ
 ಹೀಗೆಲ್ಲ ಹೇಳಿ ಪರಶುರಾಮನ ಕೊಡಲಿಯನ್ನು ಕೆರಳಿಸಬೇಡಿ.

--------------------
 ಅಲ್ಪಸಂಖ್ಯಾತರು ಜೆಡಿಎಸ್‌ಗೆ ಒಂದು ಮತ ಹಾಕಿದರೂ ಅದು ಬಿಜೆಪಿಗೆ ಶಕ್ತಿ ತುಂಬಿದಂತಾಗುತ್ತದೆ -ಝಮೀರ್ ಅಹ್ಮದ್, ಶಾಸಕ
 ಆದ್ದರಿಂದ ಅವರು ನೇರವಾಗಿ ಬಿಜೆಪಿಗೇ ಓಟು ಕೊಟ್ಟುಬಿಟ್ಟರೆ ಚೆನ್ನ. ಅಲ್ಲವೇ?

 ---------------------
 ಯಾರೋ ನಾಲ್ವರು ಬಂದು ಹೇಳಿದ ತಕ್ಷಣ ಬಿಜೆಪಿ ಟಿಕೆಟ್ ನೀಡಲು ಸಾಧ್ಯವಿಲ್ಲ -ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ
 ಐದು ಮಂದಿಯಾದರೂ ಹೇಳ್ಬೇಕು ಅಂತೀರಾ?

---------------------
 ಪ್ರತೀ ಬಾರಿ ಇಂತಹ ಘಟನೆಗಳು (ಬಿಬಿಸಿ ಸಾಕ್ಷಚಿತ್ರ) ನಡೆದಾಗಲೂ ಪ್ರಧಾನಿ ಮೋದಿಗೆ ಹಿಂಬಾಲಕರು ಹೆಚ್ಚಾಗುತ್ತಾರೆ
-ತೇಜಸ್ವಿ ಸೂರ್ಯ, ಸಂಸದ
ನೀವು ಎಮರ್ಜೆನ್ಸಿ ಡೋರ್ ತೆರೆದಾಗ ಆದಂತೆ?

---------------------
 
1985ರಲ್ಲಿ ಡಿ.ಕೆ.ಶಿವಕುಮಾರ್ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದ. ಈಗ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ -ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹರಿದ ಚಪ್ಪಲಿ ಕದ್ದ ಚಪ್ಪಲಿಯಾಗಿರಲಿಲ್ಲ ಎಂದು ಅವರು ಅಭಿಮಾನ ಪಡುತ್ತಾರಲ್ಲಾ?
 
ಬಿಲ್ಲವ ಸಮುದಾಯದಲ್ಲಿ ಸದೃಢ ನಾಯಕತ್ವವನ್ನು ಹೆಚ್ಚಿಸಿದರೆ ವಿಧಾನಸೌಧ ಮತ್ತು ಸಂಸತ್‌ನಲ್ಲಿ ಸಮುದಾಯದ ಪರ ಧ್ವನಿ ಮೊಳಗಲು ಸಾಧ್ಯವಾಗುತ್ತದೆ -ಕೆ.ಹರೀಶ್ ಕುಮಾರ್, ವಿ.ಪ. ಸದಸ್ಯ
  ಹಾಗೆ ಆಗಿ ಬಿಟ್ಟರೆ ಮತ್ತೆ ಸಂಘ ಪರಿವಾರಕ್ಕಾಗಿ ರೌಡಿಸಂ ಮಾಡಲು, ಜೈಲಿಗೆ ಹೋಗಲು ಯಾರು ಉಳಿಯುತ್ತಾರೆ?

 ---------------------
 ನಾನು ಸಾಯುತ್ತೇನೆಯೇ ಹೊರತು ಬಿಜೆಪಿ ಜೊತೆ ಪುನಃ ಕೈಜೋಡಿಸುವುದಿಲ್ಲ -ನಿತೀಶ್ ಕುಮಾರ್, ಬಿಹಾರ ಸಿಎಂ
ಇತ್ತೀಚೆಗೆ ನಿಮಗೆ ಡೈಲಾಗ್‌ಗಳನ್ನು ಕುಮಾರಸ್ವಾಮಿಯವರು ಬರೆದು ಕೊಡುತ್ತಿದ್ದಾರೆಯೇ?

---------------------
 ಮಾಜಿ ಪ್ರಧಾನಿ ದೇವೇಗೌಡರನ್ನು ಉತ್ಸವ ಮೂರ್ತಿ ಮಾಡಿಕೊಂಡು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ -ಬಿಜೆಪಿ
 ನೀವು ಶ್ರೀರಾಮನನ್ನು ರಾಜಕಾರಣಕ್ಕೆ ಬಳಸುತ್ತಿರುವುದಕ್ಕೆ ಹೋಲಿಸಿದರೆ ಇದು ಎಷ್ಟೋ ವಾಸಿ.
 

---------------------
 ಗೋಧ್ರೋತ್ತರ ಘಟನೆಯ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷಚಿತ್ರದ ಹಿಂದೆ ಚೀನಾ ನೀಡಿದ ಹಣಕಾಸು ನೆರವಿನ ಕೈವಾಡ ಅಡಗಿದೆ -ಮಹೇಶ್ ಜೇಠ್ಮಲಾನಿ, ಸಂಸದ
 ಹಿಂದೆ ರಾಮ್ ಜೇಠ್ಮಲಾನಿ ಎಂಬೊಬ್ಬರು ತಕ್ಷಣದ ಸ್ವಾರ್ಥಗಳಿಗಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರು. ಕೊನೆಗೆ ಸಾಯುವ ಮುನ್ನ ಬಹಿರಂಗವಾಗಿ ಪಶ್ಚಾತ್ತಾಪಪಟ್ಟಿದ್ದರು.

---------------------

 ಪ್ರಧಾನಿ ಮೋದಿ ನೇತೃತ್ವದ ಸರಕಾರ ಪಕ್ಷಪಾತ ಮಾಡದೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತದೆ -ದ್ರೌಪದಿ ಮುರ್ಮು, ರಾಷ್ಟ್ರಪತಿ
 ನಿಮ್ಮ ಈ ಬಗೆಯ ಪರಮ ಅಸಹಾಯಕತೆಯ ಹೇಳಿಕೆಗಳು ಅವರ ನಿಷ್ಪಕ್ಷ ಧೋರಣೆಯನ್ನು ಬಿಚ್ಚಿಡುತ್ತವೆ.

---------------------
 15 ವರ್ಷಕ್ಕಿಂತ ಹಳೆಯ 9 ಲಕ್ಷ ಸರಕಾರಿ ವಾಹನಗಳು ಮತ್ತು ಬಸ್‌ಗಳನ್ನು ಎಪ್ರಿಲ್ ಒಂದರಿಂದ ಗುಜರಿಗೆ ಹಾಕಲಾಗುವುದು
-ನಿತಿನ್ ಗಡ್ಕರಿ, ಕೇಂದ್ರ ಸಚಿವ
ಸಂವಿಧಾನವನ್ನು ಗುಜರಿಗೆ ಹಾಕಲು ಇದೇ ಕಾರಣವನ್ನು ಬಳಸುವ ಅಪಾಯ ಇದೆ.

---------------------

 ಗೋಡ್ಸೆ ಸಿದ್ಧಾಂತದವರು ದೇಶದಿಂದ ಕಿತ್ತುಕೊಂಡದ್ದನ್ನು ರಾಹುಲ್ ಗಾಂಧಿ ವಾಪಸ್ ಕೊಡಬಲ್ಲರು -ಮೆಹಬೂಬ ಮುಫ್ತಿ, ಪಿಡಿಪಿ ಮುಖ್ಯಸ್ಥೆ
 ಒಟ್ಟಿನಲ್ಲಿ ರಾಹುಲ್ ಅವರನ್ನು ಇನ್ನೊಬ್ಬ ಗಾಂಧಿಯಾಗಿಸಿ ಗೋಡ್ಸೆಗೆ ಬಲಿ ಕೊಡಲು ಕೆಲವರು ತೀರ್ಮಾನಿಸಿದಂತಿದೆ.

---------------------
 ‘ಪಠಾಣ್’ ಸಿನೆಮಾ ಬಿಡುಗಡೆಯಾದಾಗಿನಿಂದ ಸಿಕ್ಕಿರುವ ಪ್ರೀತಿ ಕಳೆದ 4 ವರ್ಷಗಳಲ್ಲಿ ಸಿನೆಮಾ ಮಾಡದ ಬೇಸರವನ್ನು ಮರೆಸಿದೆ
-ಶಾರುಕ್ ಖಾನ್, ನಟ
 ಅದು ನಿಮಗೆ ಸಿಕ್ಕಿರುವ ಪ್ರೀತಿಯೋ? ನಾಯಕಿ ಧರಿಸದೇ ಇರುವ ಬಟ್ಟೆಗೆ ಸಿಕ್ಕಿರುವ ಪ್ರೀತಿಯೋ ಖಚಿತ ಮಾಡಿಕೊಳ್ಳಿ 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top