Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ...

ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅಸಮರ್ಥರು: ಬಾಲಿವುಡ್ ನಟ ಓಂ ಪುರಿ

ವಾರ್ತಾಭಾರತಿವಾರ್ತಾಭಾರತಿ18 July 2016 3:11 PM IST
share
ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅಸಮರ್ಥರು: ಬಾಲಿವುಡ್ ನಟ ಓಂ ಪುರಿ

 ಕಾನ್ಪುರ,ಜುಲೈ 18: ಹೇಳಿಕೆಗಳನ್ನು ನೀಡುವುದರಲ್ಲಿ ಪ್ರಸಿದ್ಧರಾದ ಬಾಲಿವುಡ್ ನ ಓಂಪುರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲು ಈಗ ಅಸಮರ್ಥರು ಎಂದು ಹೇಳಿದ್ದಾರೆಂದು ವೆಬ್ ಪೋರ್ಟಲೊಂದು ವರದಿ ಮಾಡಿದೆ. ಅವರಿಗಿನ್ನೂ ರಾಜಕೀಯದಲ್ಲಿ ತರಬೇತಿ ಆಗಬೇಕಾಗಿದೆ ಎಂದು ಕಾನ್ಪುರದಲ್ಲಿ ನಡೆಯುತ್ತಿರುವ ಚಿತ್ರ ಹಬ್ಬಕ್ಕೆ ಬಂದಿದ್ದ ಓಂಪುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಆರ್ಥಶಾಸ್ತ್ರಜ್ಞ ಮನ್‌ಮೋಹನ್ ಸಿಂಗ್‌ರನ್ನು ಪ್ರಧಾನಿ ಮಾಡಿ ಅವರ ವರ್ಚಸ್ಸಿಗೆ ಹಾನಿ ಮಾಡಿದೆ. ಅವರ ಅಧಿಕಾರವಧಿಯಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಹಗರಣವನ್ನು ಪಕ್ಷ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಜರಗಿಸಲಾಯಿತು. ಆದರೆ ಕಳೆಕೊಂಡಿದ್ದ ಹಣವನ್ನು ವಾಪಸು ಪಡೆಯುವ ಕುರಿತು ಯಾರೂ ಯೋಚಿಸಲಿಲ್ಲ ಎಂದು ಓಂ ಪುರಿಹೇಳಿದ್ದಾರೆ ಎಂದು ವರದಿಯಾಗಿದೆ. ಅಂದು ಮನ್‌ಮೋಹನ್ ಸಿಂಗ್‌ರನ್ನು ಪ್ರಧಾನಿ ಮಾಡುವ ಬದಲು ಸಲ್ಮಾನ್ ಖುರ್ಷಿದ್‌ರನ್ನು ಪ್ರಧಾನಿ ಮಾಡಬಹುದಾಗಿತ್ತು. ಶೇ.22ರಷ್ಟು ಜನರು ಈ ನಿರ್ಧಾರವನ್ನು ಬೆಂಬಲಿಸುತ್ತಿದ್ದರು. ಇಡೀ ದೇಶದಲ್ಲಿ ಸಕಾರಾತ್ಮಕ ಪರಿಸ್ಥಿತಿ ನೆಲೆಸುತಿತ್ತು ಎಂದು ಪುರಿ ಅಭಿಪ್ರಾಯ ಪ್ರಕಟಿಸಿದರು ಎನ್ನಲಾಗಿದೆ.

ಕಾಂಗ್ರೆಸ್‌ನಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂತು:

ಕಾಂಗ್ರೆಸ್‌ನಿಂದ ಜಿಗುಪ್ಸೆಗೊಂಡ ನಕಾರಾತ್ಮಕ ವೋಟುಗಳಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು ಓಂಪುರಿ, ಬಿಜೆಪಿ ಸರಕಾರ ಶೌಚಾಲಯ ಕಟ್ಟಿಸುತ್ತಿದೆ. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರೆ ಸ್ವಲ್ಪಯೋಚಿಸಿ, ನೀರೇ ಇಲ್ಲದಿದ್ದರೆ ಶೌಚಾಲಯವನ್ನು ಶುಚಿಯಾಗಿಡುವುದು ಹೇಗೆ? ಹಾಗೂ ಮುನ್ಸಿಪಾಲಿಟಿಯಜನರು ಕೊಳಕು ಎತ್ತದಿದ್ದರೆ ಕೊಳಕು ಹಾಗೆಯೆ ಉಳಿಯುತ್ತದೆ ಎಂದಿದ್ದಾರೆ.

ಕೆಲವು ಜನರು ಇಸ್ಲಾಮ್‌ಗೆ ಕೆಟ್ಟ ಹೆಸರು ತರುತ್ತಿದ್ದಾರೆ:

ಪಾಕಿಸ್ತಾನದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಓಂ ಪುರಿ "ನಾನು ಎರಡು ಬಾರಿ ಕರಾಚಿಗೆ ಹೋಗಿದ್ದೇನೆ. ಪಾಕಿಸ್ತಾನದ ಜನರು ನನ್ನ ಸಿನೆಮಾ ನೋಡುತ್ತಾರೆ. ನನಗೆ ಅವರು ಕೆಟ್ಟವರೆಂದು ಅನಿಸುವುದಿಲ್ಲ. ದುಷ್ಟ ತತ್ವಗಳು ಎರಡೂ ಕಡೆಗಳಲ್ಲಿವೆ. ಭಾರತದಲ್ಲಿ ಲಾಠಿ, ದಂಡ ಹಿಡಿಯುವವರಿದ್ದರೆ, ಪಾಕಿಸ್ತಾನದಲ್ಲಿ ಆರ್‌ಡಿಎಕ್ಸ್.ಏಕೆ 57 ಹಿಡಿಯುವವರಿದ್ದಾರೆ. ಪಾಕಿಸ್ತಾನದ ಬಗ್ಗೆ ನನಗೆ ಕನಿಕರ ಮೂಡುತ್ತದೆ.ತಮ್ಮ ಜನರನ್ನು ಸೇನೆಗೆ ಸೇರಲು ಒತ್ತಾಯಿಸದಿದ್ದರೆ ಅಲ್ಲಿನ ರಾಜಕೀಯದ ಮಂದಿಯ ಮನೋಸ್ಥೈರ್ಯ ಗಟ್ಟಿಯಾಗಬಹುದು ಹಾಗೂ ಖಂಡಿತವಾಗಿಯೂ ಅಲ್ಲಿನ ಪರಿಸ್ಥಿತಿಬದಲಾಗುವುದು ಹಾಗೂ ಭಯೋತ್ಪಾದನೆ ನಿಲ್ಲುವುದು ಎಂದು ಓಂಪುರಿ ಹೇಳಿದ್ದಾರೆ.

 ಕಾಶ್ಮೀರದ ವಿಷಯವನ್ನೇ ಪಾಕಿಸ್ತಾನ ಬಿಟ್ಟುಬಿಡಬೇಕು:

ಕಾಶ್ಮೀರದಲ್ಲಿ ಈಗಿನ ಸ್ಥಿತಿಗತಿಗಳ ಕುರಿತು ಮಾತಾಡಿದ ಓಂಪುರಿ "ರಾಜಾ ಹರಿಸಿಂಗ್‌ರು ಭಾರತದ ಸಹಾಯ ಕೇಳಿದ್ದರು. ಅದರೆ ಅಷ್ಟರಲ್ಲಿ ಕೆಲವು ಭಾಗಗಳಿಗೆ ಪಾಕಿಸ್ತಾನ ನುಸುಳಿಯಾಗಿತ್ತು. ಶಾಂತಿಗಾಗಿ ಪಾಕಿಸ್ತಾನ ಕಾಶ್ಮೀರವನ್ನು ಬಿಟ್ಟುಬಿಡಬೇಕಾಗಿದೆ. ಯಾಕೆಂದರೆ ಭಾರತ ಯಾವುದೋ ಸಣ್ಣಪುಟ್ಟ ರಾಷ್ಟ್ರವಲ್ಲ. ಬಹುದೊಡ್ಡ ಶಕ್ತಿಯೊಂದಿಗೆ ಗುದ್ದಾಡುತ್ತಿರುವ ಜನರಿಗೆ ಉದ್ಯೋಗಕ್ಕಾಗಿ ಪ್ಯಾಕ್ಟರಿ ತೆರೆಯಬೇಕಾಗಿದೆ. ಗದ್ದೆ ಕೆಲಸ ಮಾಡಿಸಬೇಕಾಗಿದೆ. ಇದರಿಂದಾಗಿ ಜನರು ಬಂದೂಕು ಹಿಡಿಯುವುದನ್ನು ಬಿಟ್ಟುಬಿಡಲಿದ್ದಾರೆ" ಎಂದು ಹೇಳಿದರೆನ್ನಲಾಗಿದೆ.

ರಾಜಕೀಯ ಪ್ರವೇಶಿಸಲು ಸಿದ್ಧನಿದ್ದೇನೆ:

 ರಾಜಕೀಯ ಪ್ರವೇಶಿಸುವಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓಂಪುರಿ ರಾಜಕೀಯಕ್ಕೆ ಬರಲು ಸಿದ್ಧ ಆದರೆ ಭ್ರಷ್ಟಾಚಾರ ಮತ್ತು ಇತರ ವಿಷಯಗಳಲ್ಲಿ ತನ್ನ ಬಾಯಿಮುಚ್ಚಿಸುವ ಶರ್ತದ ರಾಜಕೀಯವನ್ನು ತಾನು ಮಾಡಲಾರೆ ಎಂದಿರುವುದಾಗಿ ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X