Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅನ್ಯ ಧರ್ಮಿಯರನ್ನು ವಿವಾಹವಾದರೆ ಸಮುದಾಯ...

ಅನ್ಯ ಧರ್ಮಿಯರನ್ನು ವಿವಾಹವಾದರೆ ಸಮುದಾಯ ಸರ್ಟಿಫಿಕೇಟ್‌ಗಳ ಆಧಾರದಲ್ಲಿ ಮದುವೆ ರಿಜಿಸ್ಟರ್ ನಡೆಸುವಂತಿಲ್ಲ

ಕೇರಳ ಹೈಕೋರ್ಟ್

ವಾರ್ತಾಭಾರತಿವಾರ್ತಾಭಾರತಿ3 Sept 2016 12:38 PM IST
share
ಅನ್ಯ ಧರ್ಮಿಯರನ್ನು ವಿವಾಹವಾದರೆ ಸಮುದಾಯ ಸರ್ಟಿಫಿಕೇಟ್‌ಗಳ ಆಧಾರದಲ್ಲಿ ಮದುವೆ ರಿಜಿಸ್ಟರ್ ನಡೆಸುವಂತಿಲ್ಲ

ಕೊಚ್ಚಿ,ಸೆಪ್ಟಂಬರ್ 3: ಬೇರೆಬೇರೆ ಧಾರ್ಮಿಕವಿಭಾಗದವರು ಪರಸ್ಪರ ವಿವಾಹವಾದರೆ ಸಮುದಾಯದ ಸಂಘಟನೆಗಳು ನೀಡುವ ಸರ್ಟಿಫಿಕೆಟ್‌ಗಳು ನೀಡುವ ಆಧಾರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ನೋಂದಾಯಿಸಿಕೊಳ್ಳಬಾರದೆಂದು ಕೇರಳ ಹೈಕೋರ್ಟ್ ಹೇಳಿದೆ ಎಂದು ವರದಿಯಾಗಿದೆ. ವಿವಿಧ ಧರ್ಮಕ್ಕೆ ಸೇರಿದವರು ವಿವಾಹಿತರಾದರು ಎಂದು ಶಿವಗಿರಿ ಮಠ ಮತ್ತು ಎಸ್‌ಎನ್‌ಡಿಪಿ ಸಭೆಯಂತಹ ಸಾಮುದಾಯಿಕ ಸಂಘಟನೆಗಳು ಸರ್ಟಿಫಿಕೇಟ್ ನೀಡುವುದನ್ನು ಸರಕಾರ ನಿಯಂತ್ರಿಸಬೇಕು ಎಂದು ಡಿವಿಜನಲ್ ಬೆಂಚ್ ಆದೇಶ ನೀಡಿದೆ. ಅದೇ ವೇಳೆ ಒಂದೇ ಧರ್ಮಕ್ಕೆ ಸೇರಿದವರ ವಿವಾಹ ಕೂಡಾ ಅನುಮತಿಸಲ್ಪಟ್ಟ ಸ್ಥಳದಲ್ಲಿ ಧಾರ್ಮಿಕ ವಿಧಿ ಪ್ರಕಾರ ನಡೆದಿದೆಯೇ ಎಂದು ದೃಢಪಡಿಸಿಕೊಂಡೇ ಸ್ಥಳೀಯಾಡಳಿತ ಸಂಸ್ಥೆಗಳು ಮದುವೆಯನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರ್ಟು ಆದೇಶಿಸಿದೆ.

ಬೇರೆಬೇರೆ ಧರ್ಮದವರು ಪರಸ್ಪರ ವಿವಾಹವಾದರೆ ಅವರಿಗೆ ಎಸ್‌ಎನ್‌ಡಿಪಿ ಸಭೆಯಂತಹ ಸಂಸ್ಥೆಗಳು ನೀಡಿದ ವಿವಾಹ ಸರ್ಟಿಫಿಕೇಟು ಕಾನೂನುಬದ್ಧವಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರಕಾರ ವಿವಾಹ ನಮೂದಿಸುವ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ವಧುವರರು ಬೇರೆ ಬೇರೆ ಧರ್ಮದವರಾಗಿದ್ದರೆ ಸ್ಪೆಶಲ್ ಮ್ಯಾರೇಜ್ ಆಕ್ಟ್ ಪ್ರಕಾರ ವಿವಾಹ ನೋಂದಣಿ ಮಾಡುವುದು ಸರಿಯಾದ ಕ್ರಮವೆಂದು ಹೈಕೋರ್ಟ್ ತಿಳಿಸಿದೆ. ಕ್ರೈಸ್ತ ಸಮುದಾಯದ ಹುಡುಗಿಯನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂದು ಹುಡುಗಿಯ ಅಜ್ಜಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮುಂದಿಟ್ಟು ಹೈಕೋರ್ಟ್ ಈ ಆದೇಶ ಹೊರಡಿಸಿದೆ ಎಂದು ವರದಿ ತಿಳಿಸಿದೆ.

   ಹುಡುಗಿಯನ್ನು ಹಾಸ್ಟೆಲ್‌ನಿಂದ ಮನೆಗೆ ಹೋಗುವುದು ಎಂದು ಹೇಳಿ ಹಿಂದೂ ಸಮುದಾಯದ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದು,ಇವರಿಬ್ಬರೂ ಕಾನೂನು ಪ್ರಕಾರ ವಿವಾಹ ಆಗಿಲ್ಲ ಎಂದು ಸೂಚಿಸಿ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಸೂಚನೆ ಪ್ರಕಾರ ಅವರಿಬ್ಬರು ಕೋರ್ಟ್‌ನಲ್ಲಿ ಹಾಜರಿದ್ದರು. ತಾವು ಮದುವೆಯಾಗಿದ್ದೇವೆ ಎಂಬುದಕ್ಕೆ ಪುರಾವೆಯಾಗಿ ಇವರು ಎಸ್‌ಎನ್‌ಡಿಪಿ ಸಭೆ ನೀಡಿದ ಮದುವೆ ಸರ್ಟಿಫಿಕೇಟ್‌ನ್ನು ಕೋರ್ಟಿಗೆ ಸಲ್ಲಿಸಿದ್ದರು.

 ಸರ್ಟಿಫಿಕೇಟನ್ನು ಪರಿಶೀಲಿಸಿದ ಕೋರ್ಟ್ ಎಸ್‌ಎನ್‌ಡಿಪಿ ಸಭೆ ತಪ್ಪಾಗಿ ಮದುವೆ ಸರ್ಟಿಫಿಕೇಟ್ ನೀಡಿದ್ದಕ್ಕಾಗಿ ಅದನ್ನು ತರಾಟೆಗೆತ್ತಿಕೊಂಡಿದೆ. ಎರಡು ಧರ್ಮವಿಭಾಗದವರ ಮದುವೆಯನ್ನು 1954ರ ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ ನೋಂದಾವಣೆ ನಡೆಸಬೇಕಾಗಿದೆ. ಇದಕ್ಕಿಂತ ಮೊದಲು ಕೂಡಾ ಶಿವಗಿರಿ ಮಠ ಮದುವೆ ಸರ್ಟಿಫಿಕೇಟ್ ನೀಡಿದ ಪ್ರಕರಣ ಕೋರ್ಟಿಗೆ ಬಂದಿದೆ. ಇಂತಹ ಧಾರಾಳ ಪ್ರಕರಣಗಳು ಆಗುತ್ತಿವೆ. ಸಮುದಾಯದ ಸಂಘಟನೆಗಳ ಇಂತಹ ಕ್ರಮಸಮಾಜವನ್ನು ತಪ್ಪುದಾರಿಗೊಯ್ಯುವಂತಾಗಿದೆ.ಇಂತಹ ಸರ್ಟಿಫಿಕೇಟ್‌ಗಳ ಆಧಾರದಲ್ಲಿ ಪತಿಪತ್ನಿಯರೆಂದು ನಂಬಿ ಮಹಿಳೆ ಮತ್ತು ಪುರುಷರ ಬದುಕುನಡೆಸುತ್ತಿದ್ದಾರೆ. ಇವರು ಸಂಬಂಧವನ್ನು ಕಡಿದುಕೊಂಡರೆ ದಂಪತಿ ಎಂಬ ನೆಲೆಯಲ್ಲಿ ಇವರಿಗೆ ಕಾನೂನಾತ್ಮಕವಾಗಿ ಯಾವುದೇ ಸೌಲಭ್ಯವೂ ದೊರಕುವುದಿಲ್ಲ ಎಂದು ಕೋರ್ಟ್‌ಬೆಟ್ಟು ಮಾಡಿದೆ.

ಆನಂತರ ಇಂತಹ ಸಂಘಟನೆಗಳು ನೀಡುವ ಸರ್ಟಿಫಿಕೇಟ್‌ಗಳ ಆಧಾರದಲ್ಲಿಮದುವೆ ರಿಜಿಸ್ಟರ್ ಮಾಡಿಕೊಳ್ಳುವುದನ್ನು ತಡೆಯಬೇಕೆಂದು ಕೋರ್ಟ್ ಆದೇಶಿಸಿದೆ ಎಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X