ಛತ್ತೀಸ್ಗಡ ಸರಕಾರದ 'ವೈ 'ಭಧ್ರತೆ ಪ್ರಸ್ತಾಪ ತಿರಸ್ಕರಿಸಿದ ಸೂರಿ
ರಾಯ್ಪುರ, ಫೆ.24: ದುಷ್ಕರ್ಮಿಗಳಿಂದ ಆಸಿಡ್ ದಾಳಿಯಿಂದ ಗಂಭೀರ ಗಾಯಗೊಂಡು ದಿಲ್ಲಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರವ ಆಪ್ ನಾಯಕಿ ಸೋನಿ ಸೂರಿ ಅವರು 'ವೈ ' ದರ್ಜೆ ಭದ್ರತೆ ನೀಡುವ ಛತ್ತೀಸ್ಗಡ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಬಸ್ತಾರ್ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಸೋನಿ ಸೂರಿ, ತನ್ನ ಸಮುದಾಯದ ರೈತನೊಬ್ಬನನ್ನು ನಕಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿ ಅವರು ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದರು. ಇದರಿಂದ ಕುಪಿತಗೊಂಡಿದ್ದ ಗುಂಪೊಂದು ಫೆ. 20ರಂದು ಆಕೆಯ ಮೇಲೆ ಆಸಿಡ್ ನಡೆಸಿ ಪರಾರಿಯಾಗಿತ್ತು.
Next Story