Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅರ್ಥಪೂರ್ಣವಾಗಲಿ ಬೇಸಿಗೆ ರಜೆ

ಅರ್ಥಪೂರ್ಣವಾಗಲಿ ಬೇಸಿಗೆ ರಜೆ

ಬಿ.ಎಂ. ದಾರುಕೇಶ್, ದಾವಣಗೆರೆಬಿ.ಎಂ. ದಾರುಕೇಶ್, ದಾವಣಗೆರೆ15 April 2017 6:13 PM IST
share
ಅರ್ಥಪೂರ್ಣವಾಗಲಿ ಬೇಸಿಗೆ ರಜೆ

ರಜೆ ಹೇಗೆ ಕಳೆಯ ಬಹುದು ಅನ್ನೋದಕ್ಕೆ ಅನೇಕ ಆಯ್ಕೆಗಳು ಇಲ್ಲಿವೆ. ಎಲ್ಲದನೂ ಅಳವಡಿಸಿಕೊಳ್ಳುವ ಮೂಲಕ ಶಾಲೆ ಶುರುವಾಗುವ ಹೊತ್ತಿಗೆ ಹೊಸ ಚೈತನ್ಯ ಪಡೆದು ಕೊಳ್ಳಬಹುದು.
 


►ಸಹಪಠ್ಯ ಚಟುವಟಿಕೆಗಳಾದ ಚಿತ್ರಕಲೆ, ಕಥೆ, ಕವನ ಇತ್ಯಾದಿಗಳ ರಚನೆಯಲ್ಲಿ ತೊಡಗುವುದು

►ನಿಮ್ಮ ಸುತ್ತ ಮುತ್ತ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪಾಲಕರೊಂದಿಗೆ ಭಾಗವಹಿಸುವುದು.

►ವಿವಿಧ ಸಾಧಕರ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಓದುವುದು.

►ಮಾಧ್ಯಮಗಳ ಮೂಲಕ ಲಭ್ಯವಾಗುವ ವಿವಿಧ ಸಾಧಕರ ಕುರಿತ ಮಾಹಿತಿಗಳನ್ನು ಬರಹ ರೂಪದಲ್ಲಿ ಸಂಗ್ರಹಿಸಿ ತಮ್ಮದೇ ಆದ ಒಂದು          ಕಿರುಹೊತ್ತಿಗೆಯನ್ನು ಸಿದ್ಧಪಡಿಸುವುದು.

►ಪಾಲಕರು ಸ್ಥಳೀಯ ಕವಿ, ಲೇಖಕರ ನಿವಾಸದ ಕುರಿತು ಮಾಹಿತಿ ಪಡೆದು ಅವರ ಬಿಡುವಿನ ವೇಳೆ ತಿಳಿದುಕೊಂಡು ಮಕ್ಕಳ ಸಹಿತ ಭೇಟಿ ನಿೀಡುವುದು ಹಾಗೂ ಚರ್ಚಿಸುವುದು.

►ಸ್ಥಳೀಯವಾಗಿ ಯಾವುದೇ ವೃದ್ಧಾಶ್ರಮ, ಅನಾಥಾಶ್ರಮ, ಜೈಲು, ಅಂಚೆ ಕಚೇರಿ, ಬ್ಯಾಂಕ್, ಗ್ರಾಮ ಪಂಚಾಯತ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ, ಕಾರ್ಯವಿಧಾನ ಕುರಿತು ತಿಳಿಯಬಹುದು

►ಟಿವಿ, ಮೊಬೈಲ್, ಕಂಪ್ಯೂಟರ್‌ಗಳ ಒಡನಾಟದಿಂದ ದೂರ ಸರಿದು ವಠಾರದಲ್ಲಿನ ಅಜ್ಜಿಯರಿಂದ ಕಾಡಿ ಬೇಡಿ ಕಥೆಗಳನ್ನು, ಅವರ ಅನುಭವದ ಮಾತುಗಳನ್ನು ಕೇಳಿದಾಗ ಏನೋ ಹೊಸತನದ ಭಾಸವಾಗುತ್ತದೆ. ಬಿಡುವಿನ ವೇಳೆಯನ್ನು ಅವರು ಹೇಗೆ ಕಳೆಯುತ್ತಿದ್ದರು ಎಂದು ಕೇಳಿ ಅವರ ಜೀವನ ವಿಧಾನಗಳನ್ನು ಅರಿಯಬಹುದು

►ಉತ್ತಮ ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ.

►ಕಸದಿಂದ ರಸ ಎನ್ನುವಂತೆ, ನಿರುಪಯುಕ್ತ ಎನಿಸುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಉಪಯುಕ್ತ ವಸ್ತುವನ್ನು ಕೈಯಾರೆ ತಯಾರಿಸಿ ಶಾಲೆಗೆ ಕೊಂಡೊಯ್ದು ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳಬಹುದು ಮತ್ತು ಸ್ಥಳೀಯ ಕರಕುಶಲ ಕಲೆಗಳು ಹಾಗೂ ವಂಶ ಪಾರಂಪರ್ಯವಾಗಿ ಬಂದಿರುವ ವಿದ್ಯೆಗಳನ್ನು ಹಿರಿಯರಿಂದ ಕಲಿಯಬಹುದು.

►ಪಠ್ಯ ಪುಸ್ತಕದಲ್ಲಿ ಬಂದಿರುವ ಮತ್ತು ನೀವು ಕಲಿತಿರುವ ವಿಷಯಗಳನ್ನು ಹಳ್ಳಿಗಳಿಗೆ ತೆರಳಿ ಅವುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿಕೊಳ್ಳಲು ಇದು ಸಕಾಲ.

►ಸ್ಥಳೀಯವಾಗಿ ಸಣ್ಣ-ಪುಟ್ಟ ಕೆರೆಗಳು, ಈಜುಕೊಳಗಳು ಲಭ್ಯವಿದ್ದಲ್ಲಿ ಪಾಲಕರೊಂದಿಗೆ ಭೇಟಿ ನೀಡಿ ಈಜು ಕಲಿಯುವುದು. ವಾಹನ ಚಾಲನೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಸ್ವಂತ ಮಾಡಿಕೊಂಡು ಜೀನ ಕೌಶಲಗಳನ್ನು ಕಲಿಯಬಹುದು.

►ಸ್ಥಳೀಯ ಹಬ್ಬ ಜಾತ್ರೆ ಕಾರ್ತಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಸಂವಹನ ಕೌಶಲಗಳನ್ನು ಕಲಿಯಬಹುದು

►ಗುಬ್ಬಚ್ಚಿ ಗೂಡು ಕಟ್ಟುವುದು, ನಾಯಿ ಬೆಕ್ಕು ದನಕರುಗಳ ಜೀವನ ಹಾಗೂ ಅವುಗಳ ಜೀವನ ಶೈಲಿಗಳ ಬಗ್ಗೆ ತಿಳಿಯಬಹುದು

►ನಮ್ಮ ಸರಕಾರವು ‘ಸ್ವಲ್ಪಮೋಜು-ಸ್ವಲ್ಪ ಓದು’ ಕಾರ್ಯಕ್ರಮ ಜಾರಿಗೆ ತಂದಿದೆ. ಅಲ್ಲಿಗೆ ತೆರಳಿ ಕುತೂಹಲಕಾರಿ ವಿಷಯಗಳನ್ನು ತಿಳಿಯಬಹುದು.

►ಹಳ್ಳಿಯ ಸಾಂಪ್ರದಾಯಿಕ ಆಚರಣೆಗಳು ಹಳ್ಳಿ ಜನರ ಜೀವನ ಶೈಲಿ ಅವರ ಕೃಷಿ ವಿಧಿ ವಿಧಾನಗಳು ಊರಿನ ಹೆಸರು ಅದರ ಮಹತ್ವ ಊರಿನ ಹಿರಿಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ... ಹೀಗೆ ಅನೇಕ ವಿಷಯಗಳನ್ನು ಅರಿಯಬಹುದು ಆದರೆ ನಿಮಗೆ ತಿಳಿಯುವ ಹಂಬಲವಿರಬೇಕು.

►ಈ ರೀತಿಯಾಗಿ ಮಕ್ಕಳು ರಜಾ ಅವಧಿಗಳನ್ನು ಸಕಾರಾತ್ಮಕವಾಗಿ ಕಳೆಯಬಹುದಾಗಿದೆ. ಆದರೆ ಇವುಗಳಲ್ಲಿ ಭಾಗವಹಿಸುವುದರ ಜೊತೆಗೆ ಪಠ್ಯ ವಿಷಯಗಳನ್ನು ನಿರ್ಲಕ್ಷ್ಯ ಮಾಡದಿದ್ದರೆ ರಜೆ ಹೆಚ್ಚು ಅರ್ಥಪೂರ್ಣವಾದೀತು.

share
ಬಿ.ಎಂ. ದಾರುಕೇಶ್, ದಾವಣಗೆರೆ
ಬಿ.ಎಂ. ದಾರುಕೇಶ್, ದಾವಣಗೆರೆ
Next Story
X