ʼಉಡುಪಿ ರಥಬೀದಿ ಗೆಳೆಯರುʼ ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಆಯ್ಕೆ
ಉಡುಪಿ, ಆ.8: ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಉಡುಪಿ ಇದರ 2022-23ನೆ ಸಾಲಿನ ಅಧ್ಯಕ್ಷರಾಗಿ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಎನ್.ಸಂತೋಷ್ ಬಲ್ಲಾಳ್, ಡಾ.ಯು.ಸಿ.ನಿರಂಜನ, ಕಾರ್ಯದರ್ಶಿಯಾಗಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಜತೆ ಕಾರ್ಯದರ್ಶಿಗಳಾಗಿ ಜಿ.ಪಿ.ಪ್ರಭಾಕರ್ ತುಮರಿ, ದೀಪಕ್ ಜೈನ್, ಕೋಶಾಧಿಕಾರಿಯಾಗಿ ವೇದವ್ಯಾಸ ಭಟ್, ನಾಟಕ ವಿಭಾಗದ ಸಂಚಾಲಕರುಗಳಾಗಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಸಂತೋಷ್ ನಾಯಕ್ ಪಟ್ಲ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ.ರಾಘವೇಂದ್ರ ರಾವ್, ಬಾಲ ಗಂಗಾಧರ ರಾವ್, ಸುಮಾ ಎಸ್., ಶುಭಲಕ್ಷ್ಮಿ ಕಡೆಕಾರ್, ರಾಜು ಮಣಿಪಾಲ, ಗೌರವ ಸಲಹೆಗಾರರುಗಳಾಗಿ ವೈದೇಹಿ, ಪ್ರೊ.ಕೆ.ಫಣಿರಾಜ್, ರಾಜರಾಮ್ ತಲ್ಲೂರು, ಸಂವರ್ತ ಸಾಹಿಲ್, ವಿಷೇಷ ಆಮಂತ್ರಿತರು: ಜಿ.ವಿಷ್ಣು, ವಿನ್ಯಾಸ್ ಹೆಗಡೆ, ಮೈಕಲ್ ಡಿಸೋಜ, ಸುಶ್ಮಿತಾ ಎ.ಶೆಟ್ಟಿ, ಕೀರ್ತನಾ ಉದ್ಯಾವರ ಆಯ್ಕೆ ಯಾಗಿದ್ದಾರೆ.
Next Story